ಬೆಳಗಾವಿ
ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಗುರುಬಸವ ಬಳಗ, ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ಇವರ ಸಹಯೋಗದಲ್ಲಿ ರವಿವಾರದಂದು ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಿತು.

12ನೆಯ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಇದಾಗಿದ್ದು ಶ್ರೀ ನಿಜಗುಣ ಶಿವಯೋಗಿಗಳ ಮಠದಲ್ಲಿ ಆಯೋಜಿಸಲಾಗಿತ್ತು. ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ಬೆಳಗಾವಿ ಸಂಚಾರಿ ಗುರುಬಸವ ಬಳಗದ ಸಂಚಾಲಕ, ಶರಣರಾದ ಮಹಾಂತೇಶ ತೋರಣಗಟ್ಟಿ ಗುರುಗಳು ನೆರವೇರಿಸಿಕೊಟ್ಟರು.

ಶರಣರಾದ ಬಿ.ಜಿ. ವಾಲಿ ಇಟಗಿ, ಚಂದ್ರಶೇಖರ ಹುಬ್ಬಳ್ಳಿ ಅವರು ಲಿಂಗಾಂಗ ಯೋಗದ ಬಗ್ಗೆ ಅನುಭಾವ ನೀಡಿದರು.

ಈ ಸಂದರ್ಭದಲ್ಲಿ ಬಾಬುಗೌಡ ಪಾಟೀಲ, ಎನ್.ಪಿ. ಉಪ್ಪಿನ, ಆನಂದ ಕೊಂಡಗುರಿ, ಪ್ರವೀಣ ರೊಟ್ಟಿ, ಸಿ.ಎಂ. ಹುಬ್ಬಳ್ಳಿ, ದಯಾನಂದ ಹಂಚಿನಮನಿ, ನಾಗನಗೌಡ ಹಾದಿಮನಿ, ರಮೇಶ ತಿಗಡಿ, ಬಸನಗೌಡ ಹಾದಿಮನಿ ಹಾಗೂ ಗುರುಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭೆಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
