ಹುಬ್ಬಳ್ಳಿಯಲ್ಲಿ ಗೃಹಿಣಿಯರಿಗಾಗಿ ವಚನ ಬರವಣಿಗೆ ಸ್ಪರ್ಧೆ

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

ಹುಬ್ಬಳ್ಳಿ

ನಗರದ ಮಹಾಶರಣೆ ಗಂಗಾಬಿಕಾ ಬಳಗ ಪ್ರತಿ ಸೋಮವಾರ ನಡೆಸುವ ಮಹಾಮನೆ ಕಾರ್ಯಕ್ರಮವು 200 ಕಂತುಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗೃಹಿಣಿಯರಿಗಾಗಿ ವಚನ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಿದೆ.

ಆಸಕ್ತರು ಭಾಗವಹಿಸಿ ಬಹುಮಾನಕ್ಕೆ ಪಾತ್ರರಾಗಲು ಕೋರಲಾಗಿದೆ.

ಸೂಚನೆಗಳು:

1) ಹೆಸರು ಕೊಡಲು ಕೊನೆಯ ದಿನಾಂಕ 01/02/2025.

2) ಸ್ಪರ್ಧೆಯ ದಿನಾಂಕ : 3/02/25 ಸೋಮವಾರ‌ದಂದು,
ಸಮಯ ನಂತರ ತಿಳಿಸಲಾಗುವುದು.

3) ಸ್ಪರ್ಧೆಗೆ ಬೇಕಾದ ಪೇಪರ್ ಒದಗಿಸಲಾಗುವುದು.

4) 1 ಗಂಟೆಯ ಸ್ಪರ್ಧೆಯೆಂದು ನಿಗದಿಪಡಿಸಲಾಗಿದೆ.

5) ಬಹುಮಾನ

ಪ್ರಥಮ ಬಹುಮಾನ ₹.1000/-
ದ್ವಿತೀಯ ಬಹುಮಾನ ₹ 700/-
ತೃತೀಯ ಬಹುಮಾನ ₹ 500/-

6) ಬರಹ ಹಾಗೂ ಭಾಷೆ ಸ್ಪಷ್ಟ ವಾಗಿರಬೇಕು.

7) 12ನೇ ಶತಮಾನದ ಬಸವಾದಿ ಶರಣ-ಶರಣೆಯರ ವಚನಗಳಿಗೆ ಮಾತ್ರ ಅವಕಾಶವಿದೆ.

8) ಸರ್ವಜ್ಞ, ಆಧುನಿಕ ವಚನಗಳಿಗೆ ಅವಕಾಶವಿಲ್ಲ.

9) ವಚನಕಾರರ ಹೆಸರು ಹಾಗೂ ಅಂಕಿತನಾಮ ಸ್ಪಷ್ಟವಾಗಿರಬೇಕು.

10) ಮಕ್ಕಳಿಗೆ ಪ್ರವೇಶವಿಲ್ಲ.

ಬಹುಮಾನದಲ್ಲಿ ಬದಲಾವಣೆವಾಗಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು :
ಸಂಚಾಲಕರು,
ಮೊ.ಸಂಖ್ಯೆ: 9972044182

Share This Article
Leave a comment

Leave a Reply

Your email address will not be published. Required fields are marked *