ಹುನಗುಂದ
ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಮುಂಜಾನೆ ಬಸವಾದಿ ಶರಣರ ವಚನ ಕಟ್ಟುಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ ಶಿಲಾಮಂಟಪ ಉದ್ಘಾಟನೆಗೆ ಹುನಗುಂದ ಸೇರಿದಂತೆ ಸುತ್ತಲಿನ ಗ್ರಾಮಗಳ ಅಪಾರ ಭಕ್ತರು ಸಾಕ್ಷಿಯಾದರು.