ಕಲಬುರಗಿ
ಬಸವ ಮಿತ್ರಮಂಡಳಿ ಭಾನುವಾರ ಆಯೋಜಿಸಿದ್ದ ಕಾರ್ ರ್ಯಾಲಿಯಲ್ಲಿ ನಗರ ಸೇರಿ ಜಿಲ್ಲೆಯ ತಾಲೂಕು, ಹಳ್ಳಿಗಳಿಂದಲೂ ಆಗಮಿಸಿದ 500ಕ್ಕಿಂತ ಹೆಚ್ಚು ವಾಹನಗಳು ಭಾಗವಹಿಸಿದ್ದವು.
ಶರಣಬಸವೇಶ್ವರ ದೇವಸ್ಥಾನದ ಬಳಿ ಶ್ರೀ ಶರಣಬಸವೇಶ್ವರ ದಾಸೋಹ ಸಂಸ್ಥಾನದ ೯ನೇ ಪೀಠಾಧಿಪತಿ ಶ್ರೀ ಚಿ.ದೊಡ್ಡಪ್ಪ ಅಪ್ಪ ಬಸವ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.
ದೇವಸ್ಥಾನದಿಂದ ಆರಂಭವಾದ ರ್ಯಾಲಿಯೂ ಗೋವಾ ಹೊಟೇಲ್ ವೃತ್ತ, ಎನ್ವಿ ಕಾಲೇಜ್, ಆನಂದ ಹೊಟೇಲ್ ವೃತ್ತ, ರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಜಗತ್ ವೃತ್ತವನ್ನು ತಲುಪಿತು.
ವಿಶೇಷವಾಗಿ ಯುವಕರ ನೇತೃತ್ವದಲ್ಲಿ ಸತತ ೧೧ನೇ ವರ್ಷ ನಡೆಯುತ್ತಿರುವ ಕಾರ್ರ್ಯಾಲಿಯಲ್ಲಿ ಯುವ ಬಸವಾಭಿಮಾನಿಗಳ ಬೃಹತ್ ಪಡೆಯೇ ಸೇರಿತ್ತು.
ಶರಣಬಸವೇಶ್ವರ ದೇವಸ್ಥಾನದ ಇಡೀ ಆವರಣ, ಜಾತ್ರಾ ಮೈದಾನದಲ್ಲಿ ಕಾರ್ಗಳು ನಿಲ್ಲಿಸಲಾಗಿತ್ತು. ಏಕಕಾಲಕ್ಕೆ ಸರತಿಯಲ್ಲಿ ವಾಹನಗಳು ರ್ಯಾಲಿಯಲ್ಲಿ ಪಾಲ್ಗೊಂಡವು. ಬಸವೇಶ್ವರರ, ಶರಣಬಸವೇಶ್ವರರ ಜೈಕಾರ ಮೊಳಗಿದವು.
ಬಸವೇಶ್ವರರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ, ಮಂಗಲಗೊಳಿಸಲಾಯಿತು.