ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು

ಬಸವ ಕಲ್ಯಾಣ

ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿ ಬಸವತತ್ವ ಮತ್ತು ಬಸವ ತತ್ವನಿಷ್ಟರನ್ನು ಕುರಿತು ಹರಕು ಬಾಯಿಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿ ಪದೇ ಪದೇ ನಿಂದಿಸುತ್ತಿದ್ದಾರೆ.

ಅಕ್ಟೊಬರ್ 9 ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಗಳನ್ನು ** ಮಕ್ಕಳೆಂದೂ, *** ತೆಗೆದುಕೊಂಡು ಹೊಡೆಯಬೇಕೆಂದು ತಮ್ಮ ಭಕ್ತರಿಗೆ ಸಾರ್ವಜನಿಕವಾಗಿ ಪ್ರಚೋಧಿಸುವಂತೆ ಮಾತನಾಡಿದರು. ಈ ಸನಾತನಿ ಕೃಪಾಪೋಷಿತ ಕಾಡಸಿದ್ಧೇಶ್ವರ ಸ್ವಾಮೀಯವರನ್ನು ಸರಕಾರವು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕು.

ಸಿದ್ಧೇಶ್ವರ ಸ್ವಾಮಿಗಳ ಶಿಷ್ಯರೆಂದು ಹೇಳಿಕೊಳ್ಳಲು ಇವರಿಗೆ ನಾಚಿಕೆಯಾಗಬೇಕು. ಸಿದ್ಧೇಶ್ವರ ಸ್ವಾಮಿಗಳ ಕಾಲಿನ ಧೂಳಿಗೂ ಸಮವಲ್ಲದ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ಹೆಸರಿಗೆ ದೊಡ್ಡ ಕಳಂಕವಾಗಿದ್ದಾರೆ. ಕ್ರಿಮಿನಲ್ ಮಾತುಗಳನ್ನಾಡುವ ಸ್ವಾಮಿಗಳಿಗೆ ಕಾವಿ ಬಟ್ಟೆ ಬೇರೆ ಕೇಡು.

ರಾಜ್ಯಾದ್ಯಂತ ಅಭೂತಪೂರ್ವ ಯಶಸ್ವಿಯಾಗಿ ನಡೆದ ಬಸವ ಸಂಸ್ಕೃತಿ ಅಭಿಯಾನದಿಂದ ಕಂಗೆಟ್ಟು ಹೋದ ಸನಾತನಿ ಸ್ವಾಮೀಜಿಗೆ ನಿದ್ರೆ ಬರುತ್ತಿಲ್ಲವೆಂದು ಕಾಣುತ್ತಿದೆ. ಅದಕ್ಕಾಗಿ ಈ ತರಹದ ಹೇಳಿಕೆಯನ್ನು ನೀಡಿದ್ದಾರೆ.

ಬಸವಭಕ್ತರನ್ನು ನಿಂದಿಸುತ್ತಿರುವ ಸ್ವಾಮಿಗಳು ಬಸವಭಕ್ತರ ಮತ್ತು ಬಸವಪರ ಮಠಾಧೀಶರ ಕ್ಷಮೆ ಕೇಳಬೇಕು ಇಲ್ಲವಾದರೆ ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ ಎಂದರಲ್ಲದೆ ಸರಕಾರ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಅವರು ಎಲ್ಲಿಯೇ ಸಿಗಲಿ ಅಲ್ಲಿ ಬಸವಭಕ್ತರು ತೀಕ್ಷ್ಣ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಎಚ್ಚರಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
8 Comments
  • ಕೇಸ್ ದಾಖಲು ಮಾಡಲೇ ಬೇಕು ಹೀಗೆ ಬಿಟ್ಟರೆ ತಾನು ಹುಚ್ಚು ಹಿಡಿದಂತೆ ಮಾತಾಡುವುದಕ್ಕೆ ಚಪ್ಪಾಳೆ ತಟ್ಟುವವರೂ ಇದ್ದಾರೆ ಮುಂದೆ ಅವರೂ ಮಾತಾಡಬಹುದು ಇದಕ್ಕೆ ಒಂದು ಅಂತ್ಯ ಕಾಣಿಸಬೇಕು.

  • ಇಂತಹ ನಾಲಯಕ ಸೂ ಮಕ್ಕಳಿಗೆ ಕಾನೂನು ಹೋರಾಟ ವೇ ಸರಿ

    • Kaneri swamy obba aatankavaadi ಇವನನ್ನು ಹೀಗೆ ಬಿಟ್ಟರೆ ಇಡೀ ಸಮಾಜ ಹಾಳು ಮಾಡುತ್ತಾನೆ ಇವನಿಗೆ ಒಕ್ಕೂಟ ಸ್ವಾಮಿಗಳು ಸೇರಿ ತಕ್ಕ ಪಾಠ ಕಲಿಸಲೇಬೇಕು

  • ಈ ಕುಂಕುಮಧಾರಿ ಸ್ವಾಮಿ ಒಂದು ಟಿವಿ ಸಂದರ್ಶನ ಕಾರ್ಯಕ್ರಮದಲ್ಲಿ ಬಸವತಾಲಿಬಾನಿ ಎಂದು ಹೀಗೆಳೆದು ಮಾತನಾಡಿದ್ದಾನೆ. ಇವನ ಮೇಲೆ ಮಹಾಸಭೆ ಕೂಡಲೇ ಕಾನೂನು ಕ್ರಮವನ್ನು ಜರುಗಿಸಬೇಕು. ಕರ್ನಾಟಕಕ್ಕೆ ಕಾಲಿಟ್ಟಗ ಸರಿಯಾಗಿ ಪ್ರಶ್ನೆಮಾಡಿ ಕ್ಷಮೆ ಕೇಳುವಂತೆ ಮಾಡಿ ಇನ್ನು ಎಂದು ಈ ರೀತಿಯಾಗಿ ಮಾತನಾಡದಂತೆ ಮಾಡಬೇಕು.

  • ಅತಿ ತ್ವರಿತಗತಿಯಲ್ಲಿ ಗುಂಡ ಕಾಯ್ದೆ ಹಾಕಿ ಬಂದಿಸಬೇಕು ಹಾಗೂ ಅವನ ಬಾಷೆಯಲ್ಲೇ ಉತ್ತರಿಸುವ ಕಾರ್ಯಕ್ರಮ ಮಾಡಬೇಕು

  • ಒಂದು ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದೆ ಎರೆಹುಳುಗಳು ನಾಗರ ಹಾವಿನ ಭುಸ್ ಗುಟ್ಟುವುದು ಖಚಿತ

  • ಈ ಸ್ವಾಮೀಜಿಗೆ ತಕ್ಕ ಶಾಸ್ತಿ ಆಗಲೇಬೇಕು ಬಹುತೇಕಾಗಿ ಇವರಿಗೆ ಹುಚ್ಚಾಸ್ಪತ್ರೆಗೆ ಸೇರಿಸುವುದು ಉತ್ತಮ…

  • ಅವರ ಮನೋಸ್ಥಿತಿ ನೋಡಿದರೆ, ಅವರು ಆಕಸ್ಮಿಕವಾಗಿ ಆಡಿದ ಮಾತಲ್ಲ ಇದು. ಅವರ ತಾಲಿಬಾನಿ ಮನೋಸ್ಥಿತಿಯನ್ನು ಈ ಹಿಂದೆಯೇ ಬಸವಭಕ್ತರನ್ನು ತಾಲಿಬಾನಿಗಳು ಎಂದು ಕರೆಯುವುದರ ಮೂಲಕ ಮತ್ತು ನಾನು ನನ್ನ ಹೇಳಿಕೆಯನ್ನು ಹಿಂಪಡೆಯುವುದಿಲ್ಲ ಅಲ್ಲದೆ ನನಗೆ ಅದರ ಬಗ್ಗೆ ಪಶ್ಚಾತಾಪವೂ ಇಲ್ಲ ಎಂದು ಹೇಳುವುದರ ಮೂಲಕ ಅವರ ಮಾನಸಿಕ ಸ್ಥಿತಿ ಎಷ್ಟೊಂದು ಕೊಳಕಾಗಿದೆ ಎಂದು ಸಾಬೀತುಪಡಿಸಿದ್ದಾರೆ. ಆದುದರಿಂದ ಅವರು ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳಬಹುದು ಎಂದು ಕಾಯುವುದಕ್ಕಿಂತ ಮಠಾಧೀಶರ ಒಕ್ಕೂಟ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದು ಸೂಕ್ತ. ಜೊತೆಗೆ, ಅವರು ಭಾಗವಹಿಸುವ ಎಲ್ಲಾ ಸಭೆ ಸಮಾರಂಭಗಳಲ್ಲಿ ಬಸವ ಭಕ್ತರು ಪ್ರತಿಭಟನೆ ಮಾಡುವ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಬೇಕು.

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.