ಚಾಮರಾಜನಗರ ಬಳಿಯ ಕಿಲಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಚಾಮರಾಜನಗರ

ತಾಲ್ಲೂಕಿನ ಕಿಲಗೆರೆ ಗ್ರಾಮದಲ್ಲಿ ಈಚೆಗೆ ಬಸವ ಜಯಂತಿಯನ್ನು ಬಸವ ಬಳಗದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಗಣ್ಯರು ಬಸವೇಶ್ವರ ದೇವಸ್ಥಾನದ ಮುಂಭಾಗ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಬಸವೇಶ್ವರರ ಪುತ್ಥಳಿ‌ ಹಾಗೂ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು. ಅನ್ನ ಸಂತರ್ಪಣೆ ನಡೆಯಿತು.

ಬದನವಾಳು ಶಿವಕುಮಾರಶಾಸ್ತ್ರೀ, ಭರತ್‌ಕುಮಾರ ಶಾಸ್ತ್ರೀ ತಂಡದಿಂದ ಬಸವೇಶ್ವರರ ಜೀವನ ಚರಿತ್ರೆ ಬಗ್ಗೆ ಪ್ರವಚನ ನೀಡಿದರು.

ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬಸವೇಶ್ವರರ ಫ್ಲೆಕ್ಸ್‌ಗಳು ಗ್ರಾಮದಲ್ಲಿ ರಾರಾಜಿಸುತ್ತಿದ್ದವು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *