ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ ನಡೆದ 5 ದಿನದ ಬಸವತತ್ವ ಅಧ್ಯಯನ ಶಿಬಿರ

ಕೊಲ್ಲಾಪುರ (ಮಹಾರಾಷ್ಟ್ರ)

ಬಸವ ಭಾರತಿ ಸಂಘಟನೆ ಅಡಿಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ 5 ದಿನದ ಬಸವತತ್ವ ಅಧ್ಯಯನ ಶಿಬಿರ ನಡೆಯಿತು.

ಶಿಬಿರವು ಮೇ 21ರಿಂದ 25, 2025ರವರೆಗೆ ಅಬ್ದುಲ್ ಲಾಟ ತಾಲೂಕಿನ ಶಿರೋಳ ಶ್ರೀ ಗುರುಕುಲ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಲಿಂಗಾಯತ ಧರ್ಮದ ಇತಿಹಾಸ, ಧರ್ಮಗ್ರಂಥಗಳು, ಇಷ್ಟಲಿಂಗ ಯೋಗ, ವಿವಿಧ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವಿಷಯಗಳ ಕುರಿತು ಉಪನ್ಯಾಸ ನೀಡಲಾಯಿತು, ಉತ್ಸಾಹಭರಿತ, ಆಸಕ್ತಿಯುತ ಚರ್ಚೆಗಳು ನಡೆದವು. ಯೋಗಾಸನಗಳು ಮತ್ತು ಹೊರಾಂಗಣ ಆಟಗಳು ಸಹ ನಡೆದವು.

ಒಟ್ಟು 82 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಎಲಾಟ್, ದತ್ತವಾಡ, ಅಕಿವಾಟ್, ಹೆರ್ವಾಡ, ಶಿರಾಡೋಣ, ಶೆಡ್ಶಾಲ್, ಮೀರಜ್, ಇಚಲಕರಂಜಿ, ಶಿರಗುಪಿ, ಮುತ್ನಾಳ, ನಿಲೇಜ ಮುಂತಾದ ಗ್ರಾಮಗಳಿಂದ ಆಗಮಿಸಿದ್ದರು.

ಬಸವ ಕಥಾಕಾರ ಶಿವಾನಂದ ಹೈಬತ್‌ಪುರೆ ಶಿಬಿರದ ನೇತೃತ್ವ ವಹಿಸಿ ಮಾತನಾಡುತ್ತಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಬಸವತತ್ವದ ಚಿಂತನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ನಾವು ಕಳೆದ 11 ವರ್ಷಗಳಿಂದ ಇಂಥ ಶಿಬಿರಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ದಾದಾಸಾಹೇಬ ಪಾಟೀಲ ನಿರ್ವಹಿಸಿದರು ಮತ್ತು ಬಲವಂತ್ ಅಲಿಯಾಸ್ ಗಣೇಶ್ ನೈಕುಡೆ ಪ್ರಮುಖ ಪಾತ್ರ ವಹಿಸಿದರು.

ಶಿಬಿರ ಯಶಸ್ವಿಗೊಳ್ಳಲು ಸಾಯಿನಾಥ ಭಂಡೇಕರಿ ವಾಣಿಗಾಲ, ಬಸವರಾಜ ಸ್ವಾಮಿ ಜಂಗಮವಾಡಿಕರ್, ಸಾಯಿನಾಥ ಚಂದಾಪುರೆ ಸುಲ್ತಾನಪುರ ಮತ್ತು ಯೋಗೀಶ್ ಭಗವಾನ್ ಚಿವಡೆ ಅವರು ಕೊಡುಗೆ ನೀಡಿದರು.

ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಹಾಗೂ ಉಸ್ತೂರಿಯ ಪೂಜ್ಯ ಕೋರಣೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಂತೆ ಶಿಬಿರ ನಡೆಯಿತು ಎಂದು ಸಂಘಟಕರು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *