ಬೆಳಗಾವಿ
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಕುಂಬಾರ ಶರಣ ದಂಪತಿಗಳ 53ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು.
ಅಧ್ಷಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು. ಮಹಾದೇವಿ ಅರಳಿ ಅವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಬಿ.ಪಿ. ಜೇವಣಿ ವಚಗಾಯನ ಪ್ರಸ್ತುತ ಪಡಿಸಿದರು. ಶಂಕರ ಗುಡಸ ಮಾತನಾಡುತ್ತ, ಲಿಂಗದಿಂದ ಸಾಧನೆ ಮಾಡಬಹುದು. ಗುರುಸ್ಮರಣೆ ಮಾಡುತ್ತ ಲಿಂಗ ಪೂಜೆ ಮಾಡಬೇಕು. ಒಂದು ಹೊತ್ತು ಊಟ ಮಾಡಿದವ ಯೋಗಿ, ಎರಡುಹೊತ್ತು ಊಟ ಮಾಡಿದವ ಭೋಗಿ, ಮೂರು ಹೊತ್ತು ಊಟ ಮಾಡಿದವನನ್ನ ಹೊತ್ತಕೊಂಡು ಹೋಗಿ ಎಂಬ ಸವ೯ಜ್ಞನ ವಚನ ಬಿಡಿಸಿ ಹೇಳಿದರು. ಪಾದೋದಕ ಮಹತ್ವ ವಿವರಿಸಿದರು. ಮನಸ್ಸು ನಿಮ೯ಲವಾಗಿರಬೇಕು. ಗುರು ಕರುಣೆ ಇರಬೇಕು. ಕರುಣೆ ಇರಲಿ, ಎಲ್ಲರಲ್ಲೂಎಂದು ತಿಳಿಸಿದರು.
ಮಹಾಂತೇಶ ಇಂಚಲ ಅವರು ವೈರಾಗ್ಯದ ಕುರಿತು ತಿಳಿಸಿದರು. ಸನ್ನಿವೇಶ ನೋಡಿ ಕ್ಷಣಿಕ ವೈರಾಗ್ಯ ಬರಬಾರದು. ಕಣ್ಣು ಕೊಟ್ಟ ತಾಯಿಯ ಕಥೆ ಹೇಳಿದರು.

ಈಚೆಗೆ ಅಗಲಿದ ದಾವಣಗೆರೆಯ ಲಿಂಗೈಕ್ಯ ಶರಣ ಮಹಾಂತೇಶ ಅಗಡಿಯವರಿಗೆ ಮುಕ್ತಿ ಕೋರಿ ಪ್ರಾಥಿ೯ಸಲಾಯಿತು.
ಲೀಲಾವತಿ ಲಕ್ಷಣ ಕುಂಬಾರ ದಾಸೋಹ ಸೇವೆಗೈದರು. ಲಕ್ಷಣ ಕುಂಬಾರರ ಪರಿಚಯವನ್ನು ಮಹಾಂತೇಶ ಮೆಣಸಿನಕಾಯಿ ಅವರು ಪರಿಚಯಸಿದರು.
ಬಸವರಾಜ ಕರಡಿಮಠ, ಬಸವರಾಜ ಬಿಜ್ಜರಗಿ, ಮಹಾಂತೇಶ ಇಂಚಲ, ಪ್ರಸಾದ ಹಿರೇಮಠ, ದೊಡಗೌಡ ಪಾಟೀಲ, ಕರಲಿಂಗನ್ನವರ, ರುದ್ರಗೌಡ ಪಾಟೀಲ, ಗಂಗಪ್ಪ ಉಣಕಲ್, ಶಿವಾನಂದ ನಾಯಕ, ಕೆಂಪಣ್ಣ ರಾಮಾಪೂರೆ, ಶೇಖರ ವಾಲಿಇಟಗಿ, ತಿಗಡಿ ದಂಪತಿಗಳು, ಶಿವಾನಂದ ನಾಯಕ, ಪ್ರೇಮ ಚೌಗಲೆ, ಸಿದ್ದಪ್ಪ ಸಾರಾಪೂರೆ, ಗಂಗಾಧರ ಹಿತ್ತಲಮನಿ, ಸುರೇಶ ನರಗುಂದ ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86