ಆಲೂರು (ಆಂಧ್ರಪ್ರದೇಶ)
ಕರ್ನೂಲ್ ಜಿಲ್ಲಾ, ತಾಲ್ಲೂಕ ಕೇಂದ್ರ ಆಲೂರು ಪಟ್ಟಣದ ಶರಣ ದಂಪತಿ ಸಾವಿತ್ರಮ್ಮ ಮತ್ತು ಗುರುಸಿದ್ದಪ್ಪನವರ ಮನೆಯಲ್ಲಿ ಈಚೆಗೆ ಅನುಭಾವ ಚಿಂತನ ಗೋಷ್ಠಿ ನಡೆಯಿತು.
ಅನುಭಾವವನ್ನು ಶರಣ ಚಿಂತಕ ಶರಣಪ್ಪ ಸಜ್ಜನ ನಡೆಸಿದರು. ಅವರು ಇಷ್ಟಲಿಂಗ ಮಹತ್ವದ ಕುರಿತು ಹಾಗು ವಚನಗಳ ವಿಶ್ಲೇಷಣೆ ಮಾಡಿ ಮಾತನಾಡಿದರು. ಶರಣ ಗಾಳೇಶಣ್ಣ ಸಹ ಶರಣ ಚಿಂತನೆ ನಡೆಸಿದರು.