ಲಿಂಗಸುಗೂರು
ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ನಡೆಯಿತು.
ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ ವಚನ ಗ್ರಂಥಗಳು, ವಚನ ತಾಡೋಲೆಗಳ ಪಲ್ಲಕ್ಕಿಗೆ ವಚನ ಪಠಣದ ಮೂಲಕ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಿಸಿ, ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ದಾವಣಗೆರೆಯ ಬಸವ ಕಲಾಲೋಕದ ವಚನ ಗೀತೆಗಳು, ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಗಮನಸೆಳೆದವು.
 
							 
			     
									 
									 
									 
									 
									 
									 
									







 
                                