2017-18ರ ಚಳುವಳಿ ಬಸವ ಪರಂಪರೆಯ ಸಂಘಟನೆಗಳನ್ನು ಜಾಗೃತಗೊಳಿಸಿತು
ಗದಗ
2017-18ರಲ್ಲಿ ಒಂಬತ್ತು ತಿಂಗಳುಗಳ ಕಾಲ ನಡೆದ ಲಿಂಗಾಯತ ಧರ್ಮದ ಚಳುವಳಿ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿ, ರಾಷ್ಟ್ರೀಯ, ಅಂತರಾಷ್ಟೀಯ ಮಾಧ್ಯಮಗಳ ಗಮನ ಸೆಳೆದವು.
ಆದರೆ ಇತ್ತೀಚೆಗೆ ರಂಭಾಪುರಿ ಶ್ರೀಗಳು ಈಗ ಲಿಂಗಾಯತ ಧರ್ಮದ ಚಳುವಳಿ ಇತಿಹಾಸಕ್ಕೆ ಸೇರಿ ಹೋಗಿದೆ, ಅದಕ್ಕೆ ಎಲ್ಲರೂ ಮೊದಲಿನಂತೆಯೇ ವೀರಶೈವ-ಲಿಂಗಾಯತ ಎಂದು ಗುರುತಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಲಿಂಗಾಯತ ಚಳುವಳಿ ಸುಂಟರಗಾಳಿಯಂತೆ ಬಂದು ಸುಳಿವಿಲ್ಲದಂತೆ ಮಾಯವಾಯಿತೇ? ಅಥವಾ ನಮ್ಮಲ್ಲಿ ಮಹತ್ತರ ಬದಲಾವಣೆಗಳನ್ನು ತಂದು ಲಿಂಗಾಯತ ಸಮಾಜಕ್ಕೆ ಹೊಸ ದಿಕ್ಕು, ಸ್ವರೂಪ ನೀಡಿತೆ? ಎಂಟು ವರ್ಷಗಳ ನಂತರ ಅದರ ಪ್ರಭಾವವನ್ನು ನಾವು ಇಂದು ಹೇಗೆ ಅರ್ಥೈಸಬೇಕು?
ಈ ಪ್ರಶ್ನೆಗಳ ಮೇಲೆ ಗದಗಿನ ಬಸವ ದಳದ ನಿಂಗನಗೌಡ ಹಿರೇಸಕ್ಕರಗೌಡ್ರ ಅವರು ತಮ್ಮ ಚಿಂತನೆ ಹಂಚಿಕೊಂಡಿದ್ದಾರೆ.
1) ಲಿಂಗಾಯತ ಧರ್ಮದ ಚಳುವಳಿ ಬಂದ ಹಾಗೆ ಮಾಯವಾಯಿತೇ? ಅಥವಾ ಏನಾದರೂ ದೀರ್ಘಕಾಲೀನ ಬದಲಾವಣೆ ತಂದಿತೆ?
2017-18 ರ ಲಿಂಗಾಯತ ಚಳುವಳಿ ಆರಂಭ ಮಾತ್ರ. ಅದು ಇತಿಹಾಸಕ್ಕೆ ಸೇರಲಿಲ್ಲ. ಇತಿಹಾಸ ಸೃಷ್ಟಿಸುತ್ತಾ ನಡೆದಿದೆ.
ಪಂಚಪೀಠಗಳು ಮಾತ್ರ ಎಂದೋ ಇತಿಹಾಸಕ್ಕೆ ಸೇರಿ ಹೋಗಿವೆ. ಹಾನಗಲ್ಲ ಕುಮಾರ ಸ್ವಾಮಿಗಳು ನ್ಯಾಯಾಲಯಗಳಲ್ಲಿ ಹೋರಾಡಿ ಗುಡಿಗಳಲ್ಲಿಯ ಪೂಜಾರಿಕೆಯನ್ನು ಕೊಡಿಸಿದರು. ಇದು ತಪ್ಪಲ್ಲ, ಎಲ್ಲ ಜಂಗಮರು-ಅಯ್ಯನವರೂ ಶ್ರೀಮಂತರಲ್ಲ. ಬಡಪಾಯಿ ಜಂಗಮರಿಗೆ ಪೂಜಾರಿಕೆ ಬದುಕಿಗೆ ಒಂದು ಆಸರೆ ಆಗಲೆಂದು ಆ ರೀತಿ ಮಾಡಿರಬಹದು.
ಪಂಪೀಠದವರು ಮಾಡಿದ (ಈಗಲೂ ಸವೆದ ಅತ್ತಿಯಂಥವರೂ ಇದ್ದಾರೆ ಈ ಕೆಲಸ ಮಾಡಲು) ದೊಡ್ಡ ದ್ರೋಹ ಎಂದರೆ ಬಸವನನ್ನು ಎತ್ತು ಮಾಡಿದ್ದು, ಶರಣರ ಸ್ಥಳಗಳಲ್ಲಿ ಎತ್ತುಗಳನ್ನೇ ಮಾಡಿಟ್ಟದ್ದು ಮತ್ತು ವಚನಗಳ ಸುವಾಸನೆ, ಓದುವಿಕೆ ಮಾಡಬಾರದೆಂದು ಅವುಗಳನ್ನು ಅಡಗಿಸಿದ್ದು. ಇವರು ಇತಿಹಾಸ ಸೇರಿರುವುದು ಈ ಕಾರಣಗಳಿಗೆ. ಅದರ ಫಲ ಅವರೀಗ ಉಣ್ಣುತ್ತಿದ್ದಾರೆ.
ಆದರೆ ಲಿಂಗಾಯತ ಚಳುವಳಿ ನಿಂತಿಲ್ಲ. ಅದರ ಫಲವಾಗಿಯೇ ‘ಲಿಂಗಾಯತ ಮಹಾಸಭೆ’ ಉದಯಿಸಿದೆ. ಜನ ಜಾಗೃತರಾಗಿದ್ದಾರೆ. ಈ ಭಯ ಅವರನ್ನು ಕಾಡುತ್ತಿರುತ್ತಿದೆ, ಬಹುಶಃ ಅದನ್ನು ಮುಚ್ಚಿಕೊಳ್ಳಲು ಲಿಂಗಾಯತ ಚಳುವಳಿ ಇತಿಹಾಸ ಸೇರಿದೆ-ಎಂದಿದ್ದಾರೆ.
2) 2017-18ರ ಚಳುವಳಿ ತಂದ ದೀರ್ಘಕಾಲೀನ ಬದಲಾವಣೆಗಳೇನು?
a) ಈಗಾಗಲೇ ಇದ್ದ ಬಸವ ಪರಂಪರೆಯ ಬಸವದಳದಂತಹ ಸಂಘಟನೆಗಳು ಮತ್ತು ಬಸವ ಬಳಗಗಳೂ ಅತ್ಯಂತ ಹೆಚ್ಚಿನ ರೀತಿಯಲ್ಲಿ ಜಾಗೃತವಾದವು. ಎಲ್ಲೆಂದರಲ್ಲಿ ಬಸವಾದಿ ಶರಣರ ಕುರಿತು, ಅವರ ವಚನಗಳ ಕುರಿತು ಚಿಂತನೆಗಳು, ಗೋಷ್ಟಿಗಳು ಜರುಗತೊಡಗಿದವು. ಇದರ ಪರಿಣಾಮ “ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ”ರಾದರು, ಸರ್ಕಾರಿ ಘೋಷಿಸಬೇಕಾಗಿ ಬಂತು.
b) ಬಸವ ಜಯಂತಿಗಳು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಜರುಗತೊಡಗಿದವು. ಎಲ್ಲ ಕಡೆ ಜನರೂ ಉತ್ಸಾಹದಿಂದ ಭಾಗವಹಿಸತೊಡಗಿದರು. ಶರಣರ ಬಗ್ಗೆ, ವಚನಗಳ ಬಗ್ಗೆ ತಿಳುವಳಿಕೆ ಉಂಟಾಗತೊಡಗಿತು.
c) ಈಗ ಬಹಳ ಜನ ವಿರಕ್ತರು/ವಿರಕ್ತ ಮಠಾಧೀಶರೂ ಬಸವಾದಿ ಶರಣರ-ವಚನಗಳ ಕುರಿತು ಮೇಲಿಂದ ಮೇಲೆ ಉಪನ್ಯಾಸಗಳನ್ನು ಏರ್ಪಡಿಸುತ್ತಾ ಇದ್ದಾರೆ. ಈ ಮಧ್ಯೆ ರೇಣುಕರ ಪ್ರಚಾರ ಕುಂದತೊಡಗಿದೆ. ಪೀಠಧಾರಿಗಳಿಗೆ ಇದು ಕೂಡ ನುಂಗಲಾರದ ತುತ್ತಾಗಿದೆ. ಬಸವಣ್ಣನವರನ್ನು ಇನ್ನು ಮರೆಮಾಚಲು ಸಾಧ್ಯವೇ ಇಲ್ಲ ಎಂಬುದು ಕೂಡ ಅವರಿಗೆ ಅರಿವಾಗಿದೆ.
d) ಸರಕಾರ ಕೂಡ ಬಸವಣ್ಣನವರ ಮಹಿಮೆ ಹೆಚ್ಚಿಸಲು ‘ಅನುಭವ ಮಂಟಪ’, ಶರಣರ ಸ್ಥಳಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ, ಸಂರಕ್ಷಣೆ ಕಾರ್ಯ ಕೈಗೊಂಡಿದೆ. ಹೀಗಾಗಿ ಬಸವತತ್ವ ವಿರೋಧಿಗಳಿಗೆ ಚಿಂತೆ ಶುರುವಾಗಿದೆ.
e) ಇನ್ನು ಅಗಾಧ ರೀತಿಯಲ್ಲಿ ಬಸವ ಸಾಹಿತ್ಯ ಪ್ರಕಟ ಆಗುತ್ತಲೇ ಇದೆ. 15 ವಚನ ಸಂಪುಟಗಳು ಪುನರ್ ಮುದ್ರಣವಾಗಿ ಬರುತ್ತಲೇ ಇವೆ. ಇದು ಕೂಡ ಕೆಲವರಿಗೆ ಮೈಕೈ ಪರಚಿಕೊಳ್ಳುವಂತೆ ಆಗಿದೆ. ಅಂಥವರು ಮಾತ್ರ ಲಿಂಗಾಯತ ಚಳುವಳಿ ಇತಿಹಾಸಕ್ಕೆ ಸೇರಿದೆ ಎನ್ನುತ್ತಾರೆ. ಚಳುವಳಿಯು ಗುಪ್ತಗಾಮಿನಿಯಾಗಿ ಅಲ್ಲ ಪ್ರಬಲವಾಗಿಯೇ ಮುಂದುವರಿದಿದೆ. ಇತಿಹಾಸ ಸೇರಿದೆ ಎನ್ನುವವರ ಕಣ್ಣು ಕುರುಡಾಗಿದೆ.
3) 2017-18ಕ್ಕಿಂತ ಮುಂಚೆ ಬಸವ ತತ್ವದ ಪ್ರಚಾರ, ಪ್ರಸಾರ ಹೇಗಿತ್ತು, ಈಗ ಹೇಗಿದೆ?
ಬಸವ ತತ್ವದ ಪ್ರಚಾರ ಖಂಡಿತವಾಗಿ ಹೆಚ್ಚಾಗಿದೆ. ಮೊನ್ನೆಯ “ಸಾವಿರದ ವಚನ” ಕಾರ್ಯಕ್ರಮ ನೋಡಿ ಕೆಲವರು ದಂಗಾಗಿ ಹೋಗಿದ್ದಾರೆ. ಅವರಿಗೆ ನಿದ್ದೆ ಬರುವ ಹಾಗೇ ಇಲ್ಲ. ನಮ್ಮನ್ನು ಹೊರುವವರು ಯಾರು ಎಂಬ ಚಿಂತೆ ಅವರಿಗೆ ಕಾಡತೊಡಗಿದೆ.
2017-18 ರಲ್ಲಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಚಳುವಳಿ ಜೋರಾಗಿರಬಹುದು. ಆದರೆ ಅದು ದಕ್ಷಿಣ ಕರ್ನಾಟಕದಲ್ಲಿಯೂ ಬೆಳಕು ಚೆಲ್ಲಿದೆ. ಪ್ರಚಾರ, ಪ್ರಭಾವ ಎಲ್ಲ ಕಡೆ ಉಂಟಾಗುತ್ತಿದೆ. ಶ್ರೀ ಸುತ್ತೂರ ಶ್ರೀಗಳೂ ಕೂಡ ಈಗ ಕೈಜೋಡಿಸುತ್ತಿದ್ದಾರೆ ಎನ್ನಬಹುದು. ಜಗತ್ತಿನಲ್ಲಿ ಬಸವಣ್ಣನವರ ವಿಚಾರಗಳನ್ನು ವಿರೋಧಿಸುವವರು ಯಾರೂ ಇಲ್ಲ.
ಮೇಲಿನ ಎಲ್ಲಾ ವಿಚಾರಗಳು ಸತ್ಯವಾಗಿವೆ. ಪಂಚಪೀಠದಲ್ಲೊಬ್ರಂಬರಾದ ರಂಭಾಪುರಿ ಶ್ರೀಗಳಿಗೆ ಮತಿಭ್ರಮಣೆ ಜೊತೆಗೆ ವಚನ ಚಳವಳಿಯ ಜೊತೆ ಬಸವಣ್ಣನವರ ವಿಚಾರಗಳು ಹೆಚ್ಚು ಜಾಗೃತವಾಗುತ್ತಿರುವುದನ್ನ ನೋಡಿ ಆತಂಕಗೊಂಡಿದ್ದಾರೆ. ಆದ್ದರಿಂದ ಜನರನ್ನ ಗೊಂದಲದಲ್ಲಿಡುವ ಪ್ರಯತ್ನ ಮಾಡುತಿದ್ದಾರೆ.
ಕನಿಷ್ಠ ದಿನಕ್ಕೆ ಒಂದು ಬಾರಿಯಾದರೂ ಬಸವಾದಿ ಪ್ರಮಥರ ಒಂದು ವಚನವನ್ನು ಪಚನ ಮಾಡಿಕೊಂಡು ಅದರ ಅಂತರಾರ್ಥವನ್ನು ತಮ್ಮ ಭಕ್ತಾಧಿಗಳಿಗೆ ವಿವರಿಸಿ ಹೇಳದಿದ್ದಲ್ಲಿ ರಂಭಾಪುರಿ ಮಾತುಗಳೆಲ್ಲವೂ ಕೇವಲ ಕಡ್ಲೆಪುರಿಗೆ ಸಮಾನ! ಕಟ್ಟಿಕೊಂಡದ್ದು ಇಷ್ಠಲಿಂಗವಲ್ಲ.. ಕೇವಲ ಕಲ್ಲು ಮಾತ್ರವಷ್ಟೇ!
ನಾನು ಹಾಕಿದ ಕಮೆಂಟು ಏಕೆ ಅಳಿಸಿ ಹೋಗಿದೆ.
ಲಿಂಗಾಯತ ಹೋರಾಟ ಇತಿಹಾಸ ಸೃಷ್ಠಿಸಿ ಲಿಂಗಾಯತರ ಮನ ಸೇರಿದೆ. ಸುಳ್ಳು ಹೇಳುತ್ತಾ ಖೋಟ್ಟಾ ಧರ್ಮ ಪ್ರತಿಪಾದಿಸುವ ಕಾವಿದಾರಿಗಳಿಂದ ಒಳ ಸತ್ಯ ಹೊರ ಬರುವುದೇ? ಈ ಖೊಟ್ಟಾ ಕಾವಿದಾರಿಗಳ ಬಂಡವಾಳ ಲಿಂಗಾಯತರಿಗೆ ಗೊತ್ತಿದ್ದರೂ ಸುಮ್ಮನಿರುವುದಕ್ಕೆ ಕಾರಣ, ಕಾವಿ ಇಷ್ಟ ಲಿಂಗ, ಗುರುಲಿಂಗ ಜಂಗಮದ ಬಗ್ಗೆ ಇರುವ ಕಾಳಜಿ ಹಾಗು ಗೌರವ.
ವಚನಗಳು ಜನಮಾನಸವನ್ನು ಮುಟ್ಟದೆ ಇದ್ದ ಕಾಲದಲ್ಲಿ ಇವರಿಗಿದ್ದ ಮೆರವಣಿಗೆ ಉರುವಣಿಗೆಗಳು ವಚನಗಳ ಪ್ರಚಾರದಿಂದ ಹಾಗೂ ಆ ಮೂಲಕ ಶರಣರ ನಿಜವಾದ ವಿಚಾರಧಾರೆಗಳು ಜನರಿಗೆ ತಲುಪುತ್ತಿರುವದರಿಂದ ಜನರು ಇವರ ಮೆರವಣಿಗೆ ಉರುವಣಿಗೆಗಳತ್ತ ಮುಖ ಮಾಡುತ್ತಿಲ್ಲ ಹೀಗಾಗಿ ಅದನ್ನು ಮರುಸ್ಥಾಪಿಸಲು ಹೆಣಗುವದು ಅನಿವಾರ್ಯವಾಗಿದೆ ಪಾಪ!
ರಂಭಾಪುರಿ ಶಿವಾಚಾರ್ಯರು ನಾವೇ ಧರ್ಮದ ಒಡೆಯರು ನಿಂದಲೇ ಈ ಧರ್ಮ ಹುಟ್ಟಿದೆ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಪುರಾಣ ನಂಬುವವರಿಗೆ ಇತಿಹಾಸವೆಲ್ಲಿ ಅರ್ಥವಾಗಬೇಕು.
ದೊಡ್ಡ ಗುರುಗಳ ಮುಖದಿಂದ ಇಂತಹ ಸಣ್ಣತನದ ಮಾತು ಬರಬಾರದಾಗಿತ್ತು . ಇದು ಅರಿವಿಂಗೆ ಹಾನಿ 🙏🙏 .