ಲಿಂಗಾಯತ ಸಂಘಟನೆಯಿಂದ ಬಸವ ಜಯಂತಿ, ಸಾಮೂಹಿಕ ಪ್ರಾಥ೯ನೆ ಕಾರ್ಯಕ್ರಮ

ಬೆಳಗಾವಿ

ಡಾ ಫ ಗು ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಬಸವೇಶ್ವರ ಜಯಂತಿ ಅಂಗವಾಗಿ ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಕಾರ್ಯಕ್ರಮ ಜರುಗಿತು.

ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು. ಜಗತ್ತಿಗೆ ಶಾಂತಿ ಅವಶ್ಯಕ, ಬಸವೇಶ್ವರರು ಹಾಕಿದ ಮಾಗ೯ದಲ್ಲಿ ನಾವೆಲ್ಲಾ ಸಾಗೋಣ. ನಾವೆಲ್ಲರು ಒಂದು ಎಂದು ಸಾಗೋಣ. ನಗರದಲ್ಲಿ ಮೇ 4ರಂದು ನಡೆಯುವ ಬಸವ ಜಯಂತಿ ಬೃಹತ್ ಸಾರ್ವಜನಿಕ ಉತ್ಸವದಲ್ಲಿ ಎಲ್ಲರೂ ಬಟ್ಟೆಯ ಸಮವಸ್ತ್ರ ಧರಿಸಿ ಪಾಲ್ಗೊಳ್ಳೋಣ ಎಂದರು. ಬಿಳಿ ಅತ್ಯಂತ ತಿಳಿ ಬಣ್ಣವಾಗಿದೆ, ಮತ್ತು ವಣ೯ರಹಿತವಾಗಿದೆ. ಏಕೆಂದರೆ ಅದು ಬೆಳಕಿನ ಎಲ್ಲ ಗೋಚರವಿರುವ ತರಂಗಾಂತರಗಳನ್ನು ಸಂಪೂಣ೯ವಾಗಿ ಪ್ರತಿಫಲಿಸುತ್ತದೆ, ಮತ್ತು ಚದುರಿಸುತ್ತದೆ. ಹಾಗಾಗಿ ಬಸವ ಜಯಂತಿಯಂದು ಬಿಳಿ ಬಟ್ಟೆ ಧರಿಸೋಣ ಎಂದರು.

ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ, ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು, ಸುಜಾತಾ ಮತ್ತಿಕಟ್ಟಿ , ಅನಸೂಯಾ ಬಶೆಟ್ಟಿ, ಸುವರ್ಣ ಗುಡಸ, ಅನೀತಾ ಚೆಟ್ಟರ, ಶೋಭಾ ದೇಯನ್ನವರ, ಶ್ರೀದೇವಿ ನರಗುಂದ, ಶಾಂತಾ ಕ೦ಬಿ, ವಿದ್ಯಾ ಕಕಿ೯, ಶಿವಾನಂದ ಗ೦ಗಣ್ಣವರ, ವಿಜಯ ಹುದಲಿಮಠ, ಅಶೋಕ ಇಟಗಿ, ಶ೦ಕರ ಗುಡಸ, ಸುರೇಶ ನರಗುಂದ, ಆನಂದ ಕಕಿ೯, ಪ್ರಸಾದ ಹೀರೇಮಠ, ಜಾಬಗೌಡರ ಸರ್, ಪ್ರೇಮ ಚೌಗಲೆ, ಮಹಾತೇಂಶ ಮೆಣಸಿನಕಾಯಿ, ಶಿವಾನಂದ ನಾಯಕ, ಗುರುಸಿದ್ದಪ್ಪ ರೇವಣ್ಣವರ, ಸುನೀಲ ಸಾಣಿಕೊಪ್ಪ , ಸೋಮಶೇಖರ ಕಟ್ಟಿ ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *