ಲಿಂಗಾಯತರ ವಿರುದ್ಧ ಹೋರಾಡಲು ‘ಕ್ಷತ್ರಿಯ’ರನ್ನು ಹುಡುಕುತ್ತಿರುವ ಸೂಲಿಬೆಲೆ

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಾಯತರ ವಿರುದ್ಧ ಸಮರ್ಥವಾಗಿ ಹೋರಾಡುವ ಕ್ಷತ್ರಿಯರು ಬೇಕಾಗಿದ್ದಾರೆ

ಬೆಳಗಾವಿ

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರ ವಿರುದ್ಧ ಕಿಡಿ ಕಾರುತ್ತಿರುವ ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆಯವರ ವಿಡಿಯೋ ವೈರಲ್ ಆಗಿದೆ.

ಅದರಲ್ಲಿ ಅವರು ‘ಇವರ (ಲಿಂಗಾಯತರ) ವಿರುದ್ಧ ಸಮರ್ಥರಾಗಿ ಹೋರಾಡುವಂತಹ ಕ್ಷತ್ರಿಯರು ಬೇಕಾಗಿದ್ದಾರೆ. ಆ ತರಹದ intellectual ಕ್ಷತ್ರಿಯರು ಬೇಕಾಗಿದ್ದಾರೆ,’ ಎನ್ನುವುದನ್ನು ನೋಡಬಹುದು.

ಮುಂದುವರೆದು ಸೂಲಿಬೆಲೆ ಪ್ರತ್ಯೇಕ ಲಿಂಗಾಯತ ಧರ್ಮ ಇಡೀ ಹಿಂದೂ ಧರ್ಮಕ್ಕೆ ಒದಗಿರುವ ‘ಸಮಸ್ಯೆ’, ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳುತ್ತಾರೆ.

ಬೆಳಗಾವಿಯಲ್ಲಿ ಕನ್ನೇರಿ ಸ್ವಾಮಿ ಪರ ನಡೆದ ಸಭೆಯಲ್ಲಿ ಚಕ್ರವರ್ತಿ ಸೂಲಿಬೆಲೆ

ಅಕ್ಟೊಬರ್ 29 ಬೆಳಗಾವಿಯಲ್ಲಿ ಕನ್ನೇರಿ ಸ್ವಾಮಿಯ ಪರ ಹಿಂದುತ್ವ ಸಂಘಟನೆಗಳು ನಡೆಸಿದ ಸಭೆಯಲ್ಲಿ ಸೂಲಿಬೆಲೆ ಮಾಡಿದ ಭಾಷಣದ ತುಣುಕಿದು.

ವಿಡಿಯೋ ನೋಡಿ ಸಿಂಧನೂರು ಬಸವ ಕೇಂದ್ರದ ಉಪಾಧ್ಯಕ್ಷ ಬಸವಲಿಂಗಪ್ಪ ಬಾದರ್ಲಿ ಅವರು ಪ್ರತಿಕ್ರಿಯೆ ನೀಡಿದರು. “ಈ ಮನುವಾದಿಗಳ ಮನಸ್ಸಿನಲ್ಲಿ ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮ ಎಷ್ಟು ಆಳವಾಗಿ ನಾಟಿದೆ ಎಂದು ಇದು ತೋರಿಸುತ್ತದೆ. ಅವರಿಗೆ ಗೊತ್ತಿಲ್ಲದಂತೆಯೇ ಇಂತಹ ಪದಗಳು ಅವರ ಬಾಯಿಂದ ಬರುತ್ತದೆ,” ಎಂದು ಹೇಳಿದರು.

“ಬಸವ ಸಂಸ್ಕೃತಿ ಅಭಿಯಾನದಲ್ಲಿ ಇಂತಹ ಮನಸ್ಥಿತಿಯ ವಿರುದ್ಧವಾಗಿಯೇ ಲಿಂಗಾಯತ ಪೂಜ್ಯರು ಮಾತನಾಡಿದ್ದು. ಹಿಂದೂ ಧರ್ಮದಲ್ಲಿ ಲಿಂಗಾಯತರು ಉಳಿದರೆ ಅವರಿಗೆ ಶೂದ್ರ ಸ್ಥಾನ ಮಾತ್ರ ದೊರೆಯುತ್ತದೆ ಎಂದು ಪೂಜ್ಯರು ಹೇಳಿದ್ದು ಸೂಲಿಬೆಲೆಯಂತವರಿಗೆ ಇಷ್ಟವಾಗಿಲ್ಲ,” ಎಂದು ಬಾದರ್ಲಿ ಹೇಳಿದರು.

ಲಿಂಗಾಯತ ಪೂಜ್ಯರು ಹೇಳುತ್ತಿರುವುದು ಸರಿ ಎಂದು ಸೂಲಿಬೆಲೆಯಂತವರು ಸಾಬೀತು ಪಡಿಸುತ್ತಿದ್ದಾರೆ ಎನ್ನುವ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
14 Comments
  • ಈ ಸೂಲಿಬೆಲೆ ಮಾನ ಮರ್ಯಾದೆ ಲಿಂಗಾಯತರು ತೆಗೆದರೆ ಇವರಿಗೆಲ್ಲ ಬುದ್ದಿ ಬರುತ್ತದೆ.

  • ಯಾಕೆ ಬ್ರಾಹ್ಮಣ ಹೋರಾಟಗಾರರು ಬೇಡವಂತ. ಈ ಜಾತಿ ಹುಳುಗಳ ಬಾಯಿಂದ ಇನ್ನೇನು ಬರಲು ಸಾಧ್ಯ

  • ಬ್ರಾಹ್ಮಣರ ಕೈಲಿ ಶತ್ರು ವಿನಾಶ ಹೋಮ ಮಾಡಿಸಿ ಶಾಪ ಹಾಕಿಸಿದರೆ ಹೇಗೆ. ಹೋರಾಟ ಎಲ್ಲ ಯಾಕೆ

  • ಇವರ ಇಂತಹ ತಂತ್ರ ಕುತಂತ್ರಗಳು ಲಿಂಗಾಯತರಿಗೆ ಅರ್ಥವಾಗಬೇಕು.

  • ಕ್ಷತ್ರಿಯರು ಬೆಕೆಂದು ಹೇಳಿದಾಗ, ಅಲ್ಲಿ ಸುತ್ತಮುತ್ತಲು ಕುತಿದ್ದವರು ಅನೇಕರು ಶುದ್ರರಿದ್ದರು.

    ಶುದ್ರರನ್ನು ಎಷ್ಟು ಮುರ್ಖ ಮಾಡುತ್ತಿದ್ದಾರೆ ನೋಡಿ.

    ನಾನು ಶುದ್ರ, ಯಾವುದೇ ನಾಚಿಕೆ ಇಲ್ಲ. ಶುದ್ರರೇ ಎಚ್ಚರಗೊಳ್ಲಿರಿ.

  • ಸರ್ ಪರಶುರಾಮ ಎಲ್ಲಾ ಭೂಮಿ ತಿರುಗಿ ಎಲ್ಲಾ ಕ್ಷತ್ರಿಯರನ್ನ ಸಂಹಾರ ಮಾಡವ್ನೆ ಅಂತ ಹೇಳಿ ಈ ಕಂತ್ರಿ ಸೊಳೆ ಬೆಳೆ ಗೆ.

  • ನಮ್ಮದೇ ಜನರನ್ನು ರೆಡಿ ಮಾಡಿ ನಮ್ಮನ್ನೇ ಹಣಿಯುವಂತ ಮಾತನಾಡುವಾಗ ಕೋಲೆ ಬಸವನಂತೆ ತಲೆ ಆಡಿಸುವ ಬುದ್ಧಿಗೇಡಿ ಲಿಂಗಾಯತರಿಗೆ ಏನನ್ನಬೇಕೋ

  • ಭಂಡರ ಮುಂದೆ ದೊಡ್ಡ ಭಂಡರಾಗಿ ವರ್ತಿಸಬೇಕು ಆಗ ಅವರ ಪುಂಗೀನಾದ ಬಂದಾಗುತ್ತೆ. ಅಲ್ಲಿ ಸೇರಿರುವ ಎಲ್ಲಾ ಲಿಂಗಾಯತರೂ ತಮ್ಮ ಖೆಡ್ಡ ತಾವೇ ತೋಡಿಕೊಳ್ಳುತ್ತಿದ್ದಾರೆ ಅಷ್ಟೇ. ಉಳಿದ ಲಿಂಗಾಯತರು ಗಣಾಚಾರಿಗಳಾಗಿ ಕಾರ್ಯನಿರತರಾಗಬೇಕು. ಬಾಯಿಬಡುಕ ಸೂಲಿಬೆಲೆಗೆ ಇಷ್ಟು ಅವಕಾಶಕೊಡುವ ಈ ಮತಾಂಧರಿಗೆ ಏನನ್ಬೇಕು.

    • Enemies who assassinated 770 Sharanas in 12 th century , once again all they are coming infront of society showing their real face.

    • Enemies who assassinated 770 Sharanas in 12 th century , once again all they are coming infront of society showing their real face against lingayats
      .

  • ಆ ಸೂಲಿಬೆಲೆಯ ಭಾಷಣಕೇಳಿದವರು ಅಲ್ಲಿರುವ ಲಿಂಗಾಯತರು ಹೇಗೆ ಸುಮ್ಮನೆ ಇದ್ದರು? ಅವನನ್ನು ಹಿಡಿದು, ಝಾಡಿಸಿ ಉಗಿಯಬೇಕಿತ್ತು. ಈಗಲಾದರೂ ಅವನು ಎಲ್ಲಿದ್ದರೂ ಹಿಡಿದು ತರಾಟೆಗೆ ತೆಗೆದುಕೊಂಡು ಝಾಡಿಸಬೇಕು. ಅದು ಒಂದು ಬೊಗಳುವನಾಯಿ.

  • Exactly, who were those spectators present and listening to it and noone objected. These manuvadis have to be resisted else they will creep in everywhere.

Leave a Reply

Your email address will not be published. Required fields are marked *