ಹೊಸಪೇಟೆ
ಒಳ ಮೀಸಲಾತಿ ಕಲ್ಪಿಸಲೆಂದು ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಪಟ್ಟಿಗೆ ‘ಲಿಂಗಾಯತ ಬೇಡ ಜಂಗಮ’ ಸಮುದಾಯವರನ್ನು ಸೇರಿಸಲಾಗುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮರ್ಪಣೆ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, “ಒಳ ಮೀಸಲಾತಿ ಕಲ್ಪಿಸಿ, ಅದಕ್ಕೆ ನಮ್ಮ ತಕರಾರಿಲ್ಲ. ಆದರೆ, ಲಿಂಗಾಯತ ಬೇಡ ಜಂಗಮ ಸಮುದಾಯವನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಬೇಡಿ. ಒಂದು ವೇಳೆ ಹಾಗೆ ಮಾಡಿದ್ದೇ ಆದರೆ, ಅದು ‘ಅಸ್ಪೃಶ್ಯ ವಿರೋಧಿ ಮಾತ್ರವಲ್ಲ, ದಲಿತ ವಿರೋಧಿಯೂ ಆಗಿದೆ’ ಎಂದರು.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೇವಲ 400-500 ಜನರಷ್ಟೇ ಇದ್ದ ಬೇಡ ಜಂಗಮ ಸಮುದಾಯದವರು, ಇಂದು ಸಮೀಕ್ಷೆಯಲ್ಲಿ 4-5 ಲಕ್ಷ ಮಂದಿ ಪರಿಶಿಷ್ಟ ಜಾತಿಯ(ಎಸ್ಸಿ) ಪಟ್ಟಿಗೆ ಹೇಗೆ ಬಂದರು? ಎಂದು ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರಶ್ನಿಸಿದರು.
ಲಿಂಗಾಯತ ಸಮುದಾಯದಲ್ಲಿರುವ ಬಡ ಲಿಂಗಾಯತರಿಗೆ ಸವಲತ್ತು ಕೊಡಿ. ಆ ಲಿಂಗಾಯತರಿಗೆ ನಾವು ಬೆಂಬಲ ಕೊಡೋಣ. ಅವರಿಗೆ ಏನು ಬೇಕೋ ಅದು ಕೊಡೋಣ. ಆದರೆ, ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸುವುದು ಬೇಡ ಎಂದು ಹೇಳಿದರು.
ಬೇಡ ಜಂಗಮರು ತಾವು ಎಸ್ಸಿ ಎಂದು ತೋರಿಸುವುದು ತಪ್ಪು. ಸುಳ್ಳು ಜಾತಿ ಪತ್ರ ನೀಡುವವರನ್ನು ಒಳ ಹಾಕಬೇಕು. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದರು.
ರಾಹುಲ್ ಗಾಂಧಿ ಜಾತಿಗಣತಿ ಬಗ್ಗೆ ಮಾತನಾಡಿದಾಗ ಟೀಕೆ ಮಾಡಿದರು. ಆದರೆ, ಈಗ ಅವರ ಮಾತಿಗೆ ಮಣಿದು ಜನಗಣತಿಯ ಜೊತೆಗೆ ಜಾತಿಗಣತಿ ಮಾಡುತ್ತೇವೆ ಎಂದು ಮೋದಿ ಸರ್ಕಾರ ಹೇಳಿದೆ. ರಾಜ್ಯದಲ್ಲಿ ಜಾತಿ ಸಮೀಕ್ಷೆ ಮಾಡಿ. ಆದರೆ, ಅದು ಸರಿಯಾಗಿ ಆಗಬೇಕು. ರಾಹುಲ್ ಗಾಂಧಿಗೆ ಕೆಟ್ಟ ಹೆಸರು ಬರಬಾರದು. ನೀವು ನಿಮ್ಮ ಕ್ರೆಡಿಟ್ ತೆಗೆದುಕೊಳ್ಳಲು ಮಾಡಿದರೆ, ಇಡೀ ರಾಜ್ಯಕ್ಕೆ ತೊಂದೆಯಾಗುತ್ತದೆ ಎಂದು ಹೇಳಿದರು.
(ಕೃಪೆ ನಾನು ಗೌರಿ)
ಹಂದಿ ಬೇಟೆಯಾಡಿ ತಿನ್ನುತ್ತಿದ್ದ ಬುಡ್ಗ ಜಂಗಮ ಎಂಬ ಅಲೆಮಾರಿಗಳಿಗೆ ಮೀಸಲಾತಿ ಸಿಕ್ಜಾಗ, ಹೆಸರಿನಲ್ಲಿನ ಸಾಮ್ಯತೆ ನೋಡಿ ಪಂಚಪೀಠದ ಸ್ಬಾಮಿಗಳ ನೇತ್ರತ್ವದಲ್ಲಿ ರಾಜ್ಯಾದ್ಯಂತ ವೀರಶೈವ ಜಾತಿ ಜಂಗಮರು ಬೇಡ ಜಂಗಮ ಎಂದು ಬರೆಸಿ ಹಿಂಬಾಗಿಲಿನ ಮೂಲಕ ದಲಿತ ಮೀಸಲಾತಿಗೆ ಕನ್ನ ಹಾಕಿದರು , ಈಗಾಗಲೇ ಸಹಸ್ರಾರು ಜನ ೨೫-೩೦ ವರ್ಷದಲ್ಲಿ ಲಾಭ ಪಡೆದು ಆಗಿದೆ , ಇತ್ತ ಲಿಂಗಾಯತರ ಗುರುಗಳೆಂದು ಸ್ವತಂತ್ರ ಲಿಂಗಾಯತ ಅಸ್ಮಿತೆ ವಿರೋಧಿಸುವುದು ಅತ್ತಕಡೆ ಬೇಡ ಜಂಗಮ ಎಂದು ದಲಿತರಿಗೆ ಅನ್ಯಾಯ ಮಾಡುವ ಇವರ ನಡೆನುಡಿಯಿಂದ ಲಿಂಗಾಯತ ಹಾಗೂ ದಲಿತರಿಗೆ ಏಕಕಾಲಕ್ಕೆ ಏಟು ಬಿದ್ದಿದೆ , ಈಗಲಾದರೂ ವೀರಶೈವ ಜಾತಿ ಜಂಗಮ ಯುವಕ ಯುವತಿಯರು ಈ ಪಂಚಪೀಠಗಳ ಪ್ರಭಾವವಿಂದ ಹೊರಬಂದು ಸ್ವತಂತ್ರವಾಗಿ ದೂರದ್ರಷ್ಟಿಯಿಂದ ಆಲೋಚಿಸಲಿ.
ಜಾತಿ ಜಂಗಮರು ತಾವು ಅಲೆಮಾರಿ ಬುಡ್ಗ ಜಂಗಮರು
ಎಂದು ಸುಳ್ಳು ಸುಳ್ಳಾಗಿ ಬರೆಸಿ ಎಸ್. ಸಿ. ಯುವಕರಿಗೆ
ಸಿಗುವ ಮೀಸಲಾತಿ ಸೌಲಭ್ಯ ವನ್ನು ಕದ್ದಿದ್ದಾರೆ.
ಇನ್ನೂಂದು ಕಡೆ ತಾವು ವೀರಶೈವ–ಲಿಂಗಾಯತ
ಜಂಗಮರು ಎಂದು ಹೇಳುತ್ತಾ ಬಸವ ಲಿಂಗಾಯತ
ಧರ್ಮವನ್ನು ವೈದೀಕಕರಣಗೂಳಿಸಿ ಹಾಳು ಮಾಡಿದವರು
ಇವರುಗಳು ಒಬ್ಬರ ಮಾನವ ಹಕ್ಕುಗಳನ್ನು ದೋಚಿದವರು ಜನರ ಹೆಗಲ ಮೇಲೆ ಪಲ್ಲಕ್ಕಿಯಲ್ಲಿ ಕುಳಿತು ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಮಾನವ ವಿರೋಧಿಗಳು
ಇವರು . ಸರ್ಕಾರ ಈ ಕೊಡಲೇ ಇವರ ಸುಳ್ಳು ಜಾತಿ ಸೌಲಭ್ಯ ರದ್ದು ಮಾಡಿ ಎಸ್ ಸಿ/ಎಸ್ ಟಿ ಪಟ್ಟಿಯಿಂದ ಹೊರಹಾಕಿ ನ್ಯಾಯ ಕೊಡಿಸಬೇಕು.