ಚಿತ್ರದುರ್ಗ
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು.
ಕಾರ್ಯಕ್ರಮದ ಸಮ್ಮಖ ವಹಿಸಿ ಮಾತನಾಡಿದ ಡಾ. ಬಸವಕುಮಾರ ಸ್ವಾಮಿಗಳು ಶ್ರೀಮಠವು ಕಂದಾಚಾರ, ಮೌಢ್ಯವನ್ನು ನಿರಾಕರಿಸಿ ಅಮಾವಾಸ್ಯೆ, ಶೂನ್ಯಮಾಸ, ಆಷಾಡದಲ್ಲೂ ಪ್ರತಿವರ್ಷ ವಿವಾಹಗಳನ್ನು ಮಾಡುತ್ತಿದೆ. ನೂರಾರು ಜೋಡಿಗಳು ಇಂಥ ವಿವಾಹಗಳನ್ನು ಆಗಿದ್ದು, ಅವರೆಲ್ಲರೂ ಸುಖ ಜೀವನದಲ್ಲಿದ್ದಾರೆ ಎಂದರು.