ಕೊಪ್ಪಳ
ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಶರಣೆ ಶರಣಮ್ಮ ಶರಣ ಮುದಿಯಪ್ಪ ಹಳ್ಳಿ ಇವರ ಸುಪುತ್ರಿಯಾದ ವಿಜಯಲಕ್ಷ್ಮೀ ಹಳ್ಳಿ ಮತ್ತು ಶರಣಪ್ಪ ಇಂಗಳದಾಳ ಶರಣ ದಂಪತಿಗೆ ಹುಟ್ಟಿದ ಸುಪುತ್ರಿಗೆ “ಬಸವಾರ್ಪಿತಾ” ಎಂದು ಹೆಸರಿಟ್ಟು ತೊಟ್ಟಿಲು ತೂಗಲಾಯಿತು.