ಕೊಪ್ಪಳ
ಮೌಢ್ಯ ನಂಬಿಕೆಗೆ ಸೆಡ್ಡು ಹಿಡಿದು ಮಕ್ಕಳಿಲ್ಲದ ವಿಧವೆಯಿಂದ ಹೊಸ ಮನೆಯ ಅಡಿಗಲ್ಲು ಹಾಕುವ ಸಮಾರಂಭ ನಗರದಲ್ಲಿ ಕಳೆದ ಬುಧವಾರ ನಡೆಯಿತು.

ವಿಶ್ವಗುರು ಬಸವೇಶ್ವರ ಟ್ರಸ್ಟ್ ನ ಶರಣ ದಂಪತಿ ಗವಿಸಿದ್ದಪ್ಪ ಪಲ್ಲೇದ ಮತ್ತು ಶಾರದಾ ಪಲ್ಲೇದ ಅವರ ಹೊಸ ಮನೆಯ ಅಡಿಗಲ್ಲು (ಗುದ್ದಲಿಪೂಜೆ) ಸಮಾರಂಭವನ್ನು ಶರಣೆ ಬಸಮ್ಮ ಗಂಧೂಡಿ, ಹಂಪಸಾಗರ ಇವರು ಮಾಡಿದರು.

ಧರ್ಮಗುರು ಬಸವಣ್ಣನವರ ಹಾಗೂ ದಾಸೋಹ ಮೂರ್ತಿ ನೀಲಾಂಬಿಕಾ ತಾಯಿಯವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಶರಣೆ ಶಾವಮ್ಮ ಬಸಪ್ಪ ಅಗ್ರಾಳ ಮಾಡಿದರು. ಇಷ್ಟಲಿಂಗ ಪೂಜೆಯನ್ನು ಬಸವರಾಜ ಹೇಮಪ್ಪ ತಾವರಗುಂದಿ ಹೊಸಪೇಟೆ ಹಾಗೂ ಗವೀಶ ಸಸಿಮಠ ಕೊಪ್ಪಳ ಇವರು ನಡೆಸಿಕೊಟ್ಟರು. ಗುರುಬಸವ ಜಲ ಪೂಜೆಯನ್ನು ಬಸವರಾಜೇಶ್ವರಿ ಈಶಪ್ಪ ದೊಡ್ಡಬ್ಯಾಳಿ ಇವರು ಮಾಡಿದರು.
ಇದೇ ಸಂದರ್ಭದಲ್ಲಿ ಗವಿಸಿದ್ದಪ್ಪ ಅವರ ಮಗಳು ಸುಧಾ ಪಲ್ಲೇದ ಅವರ ಹುಟ್ಟು ಹಬ್ಬದ ಆಚರಣೆಯನ್ನೂ ಮಾಡಲಾಯಿತು.

ವಿಶ್ವಗುರು ಬಸವೇಶ್ವರ ಟ್ರಸ್ಟ್ ನ ಹಿರಿಯರಾದ ಲಿಂಗನಗೌಡ ಪಾಟೀಲ, ಬಾಪೂಗೌಡ ಪಾಟೀಲ, ಶಿವಸಂಗಪ್ಪ ವಣಗೇರಿ, ರಾಜೇಶ ಸಸಿಮಠ, ಬಸವತನುಜಾ ಕಲ್ಮಂಗಿ, ಅರ್ಚನಾ ಸಸಿಮಠ, ಶೇಖರ ಇಂಗಳದಾಳ, ಶರಣು ಪಾಟೀಲ, ನೀಲಾಂಬಿಕಾ ಬಸವಯೋಗ ಕೇಂದ್ರದ ಸದಸ್ಯರು, ಅರಿವು ಆಚಾರ ಅನುಭವ ಟ್ರಸ್ಟ್, ವಿಶ್ವಗುರು ಬಸವೇಶ್ವರ ಟ್ರಸ್ಟ್ ಶರಣ ಸದಸ್ಯರು ಉಪಸ್ಥಿತರಿದ್ದರು.

ಬಸವತತ್ವ ಜಗತ್ತಿನ ಮೂಲೆ ಮೂಲೆಯ ಜನರ ಕಣ್ಣನ್ನು ತೆರೆಸುತ್ತಿದೆ
🙏🙏🙏 ಗವಿಸಿದ್ದಪ್ಪ ಪಲ್ಲೆದ ಇವರು ನೋಡಲು ಅತ್ಯಂತ ಸಾಮಾನ್ಯರಾಗಿ ಕಾಣುತ್ತಾರೆ . ಆದರೆ ಅವರಲ್ಲಿ ಒಬ್ಬ ಶರಣ ಧರ್ಮದ ಹಿರಿಯ ಸೇವಕ ಜೀವಾತ್ಮ ಅಡಗಿ ಕುಳಿತಿದ್ದಾನೆ . ಅವರ ನಡೆ ನುಡಿ ಎಲ್ಲರಿಗೂ ಪ್ರೇರಣೆ ಯಾಗಲಿ
ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳದ ಸುಮಾರು 45 ಕುಟುಂಬಗಳಲ್ಲಿ, ಅಪ್ಪಟ ಬಸವತತ್ವ ನಿಜಾಚರಣೆ ನಿತ್ಯ ನಿಷ್ಠೆ, ನಡವಳಿಕೆಯಾಗಿದೆ.
ಶರಣ ಗವಿಸಿದ್ದಪ್ಪ ಪಲ್ಲೇದರವರು ಸರ್ವೇಸಾಮಾನ್ಯ ಸರಳ ಶರಣ ನಡವಳಿಕೆಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕದ ಬಹುತೇಕ ಎಲ್ಲ ಬಸವತತ್ವ ಸ್ವಾಮೀಜಿಯವರ ಮತ್ತು ಮಾತಾಜಿಯವರ ಪರಮಸೇವಕರಾಗಿದ್ದಾರೆ.
ಅವರು ನಮ್ಮ ಕೊಪ್ಪಳದ ಹೆಮ್ಮೆ
👏👍
ಮೌಢ್ಯ ನಂಬಿಕೆಗೆ ಸೆಡ್ಡು ಹೊಡೆದು ಆಗಬೇಕು