ರಾಜ್ಯದ ಮೂಲೆ ಮೂಲೆಗಳಲ್ಲಿ ಬಸವ ಭಕ್ತರ ಅಭಿಯಾನ ನಡೆಸಲು ಪೂಜ್ಯರ ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

“2017ರಲ್ಲಿ ಏನಾಯಿತು ಎಂದು ಎಲ್ಲರೂ ಸ್ಮರಿಸಿಕೊಳ್ಳುವಂತೆ ಮಾಡುವ ಸಮಯ ಬಂದಿದೆ”

ಧಾರವಾಡ

ಲಿಂಗಾಯತ ಸಮಾಜದ ಮೇಲೆ ನಡೆಯುತ್ತಿರುವ ನಿರಂತರ ಸಾಂಸ್ಕೃತಿಕ ದಾಳಿಯನ್ನು ತಡೆಯಲು ಬೀದರಿನಿಂದ ಚಾಮರಾಜನಗರದವರೆಗೆ, ಎಲ್ಲಾ ಜಿಲ್ಲೆಗಳಲ್ಲಿ, ರಾಜ್ಯದ ಮೂಲೆ ಮೂಲೆಗಳಲ್ಲಿ ಬಸವ ಭಕ್ತರ ಅಭಿಯಾನ ನಡೆಸಲು ಲಿಂಗಾಯತ ಮಠಾಧೀಶರ ಒಕ್ಕೊಟ ಒಮ್ಮತದ ನಿರ್ಣಯ ತೆಗೆದುಕೊಂಡಿದೆ.

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 10,000 ಜನರನ್ನು ಸೇರಿಸಿ ಬ್ರಹತ್ ಅಭಿಯಾನಗಳ ಮೂಲಕ ಬಸವ ಭಕ್ತರಲ್ಲಿ ಜಾಗೃತಿ ಮೂಡಿಸಲು ಇಂದು ಧಾರವಾಡದಲ್ಲಿ ನಡೆದ ಸಭೆಯಲ್ಲಿ ಒಕ್ಕೊಟ ಕರೆ ಕೊಟ್ಟಿದೆ.

ಈ ಅಭಿಯಾನ ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಆಯೋಜಿಸಿದ್ದ ‘ಮತ್ತೆ ಕಲ್ಯಾಣ’ದ ಮಾದರಿಯಲ್ಲಿಯೇ ನಡೆಯಲಿದೆ. ಅಭಿಯಾನದ ಸ್ವರೂಪ, ಹೆಸರು, ಚಟುವಟಿಕೆಗಳು, ದಿನಾಂಕ, ಸಂಘಟನಾತ್ಮಕ ಬೆಂಬಲಗಳಂತಹ ವಿವರಗಳನ್ನು ನಿರ್ಧರಿಸಲು ಒಂದು ಉನ್ನತ ಸಮಿತಿ ರಚಿಸಲಾಗಿದೆ.

ಅಭಿಯಾನದ ಸ್ವರೂಪ, ಹೆಸರು, ಚಟುವಟಿಕೆಗಳು, ದಿನಾಂಕ, ಸಂಘಟನಾತ್ಮಕ ಬೆಂಬಲಗಳಂತಹ ವಿವರಗಳನ್ನು ನಿರ್ಧರಿಸಲು ಒಂದು ಉನ್ನತ ಸಮಿತಿ ರಚಿಸಲಾಗಿದೆ.

ಗದಗಿನ ತೋಂಟದ ಸಿದ್ಧರಾಮ ಶ್ರೀಗಳು, ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು,
ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಹಂದಿಗುಂದ ವಿರಕ್ತಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಈ ಸಮಿತಿಯ ಸದಸ್ಯರು. ನಾಡಿನ ಬಸವ ಭಕ್ತರಿಂದ ಮುಕ್ತವಾಗಿ ಸಲಹೆಗಳನ್ನು ಪಡೆದು ಅಭಿಯಾನವನ್ನು ಸಮಿತಿ ರೂಪಿಸಲಿದೆ ಎಂದು ತಿಳಿದು ಬಂದಿದೆ.

ಸಾಣೇಹಳ್ಳಿ ಶ್ರೀಗಳು ಏಕಾಂಗಿಯಾಗಿ ರೂಪಿಸಿ ಪರಿಣಾಮಕಾರಿಯಾಗಿ ನಡೆಸಿದ್ದ ‘ಮತ್ತೆ ಕಲ್ಯಾಣ’ ಅಭಿಯಾನ ಇನ್ನೂ ಜನರ ನೆನಪಿನಲ್ಲಿದೆ. ಈಗ ಬಹಳಷ್ಟು ಸ್ವಾಮೀಜಿಗಳು, ಸಂಘಟನೆಗಳು ಕೈ ಜೋಡಿಸುತ್ತಿರುವುದರಿಂದ ಅಭಿಯಾನವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ, ರಾಜ್ಯದ ಲಿಂಗಾಯತ ಸಮುದಾಯದ ಸಾಮರ್ಥ್ಯವನ್ನು ಪ್ರಶ್ನಾತೀತವಾಗಿ ಪ್ರಕಟಿಸುವ ರೀತಿಯಲ್ಲಿ ರೂಪಿಸಬೇಕೆಂದು ನಿರ್ಧರಿಸಲಾಗಿದೆ.

ಇಂದು ಸಭೆಯಲ್ಲಿ ಅನೇಕ ಪೂಜ್ಯರು ಬಸವಣ್ಣನವರ ಹೆಸರಿನ ದುರ್ಬಳಕೆ ಮಾಡಿಕೊಂಡು RSSನವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು. ಯಾರಾದರು ಬಸವಣ್ಣನವರ ಹೆಸರನ್ನು ಹೇಳಿಕೊಂಡು ಕಾರ್ಯಕ್ರಮಗಳನ್ನು ಮಾಡುವಾಗ ಶರಣ ತತ್ವಗಳನ್ನು ತಿರಚುವ ಸಾಹಸಕ್ಕೆ ಕೈ ಹಾಕಿದಲ್ಲಿ ಯಾವ ಅನುಮತಿಗೂ ಕಾಯದೆ ಬಸವ ಭಕ್ತರು ಪ್ರತಿಭಟಿಸಬೇಕೆಂದು ಕರೆ ಕೊಟ್ಟರು.

ಸಂಘ ಪರಿವಾರದ ವಚನ ದರ್ಶನ ಪುಸ್ತಕಕ್ಕೆ ಪ್ರತಿಯಾಗಿ ಮಹಾಸಭಾ ಪ್ರಕಟಿಸಿರುವ ‘ವಚನ ದರ್ಶನ – ಮಿಥ್ಯ-ಸತ್ಯ’ಪುಸ್ತಕದ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಒಕ್ಕೊಟ ನಿರ್ಧರಿಸಿದೆ.

ಹಲವಾರು ಪ್ರಮುಖರು ಸಭೆಯಲ್ಲಿ ಮಾತನಾಡಿದರು. ಎಲ್ಲಾ ನಿರ್ಣಯಗಳಿಗೆ ಸಭೆಯಲ್ಲಿದ್ದವರು ಚಪ್ಪಾಳೆ ಹೊಡೆದು ಸ್ವಾಗತಿಸಿದರೆಂದು ತಿಳಿದು ಬಂದಿದೆ.

ಈ ತರಹದ ಸಭೆಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳು ಬರುತ್ತವೆ. ಆದರೆ ಇಂದು ಯಾವುದೇ ಭಿನ್ನಾಭಿಪ್ರಾಯವಿಲ್ಲದ ಒಮ್ಮತ ಅಲ್ಲಿದವರಲ್ಲಿ ಕಂಡು ಬಂದಿತು, ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರೊಬ್ಬರು ಹೇಳಿದರು.

2017ರಲ್ಲಿ ಏನಾಯಿತು ಎಂದು ಎಲ್ಲರೂ ಸ್ಮರಿಸಿಕೊಳ್ಳುವಂತೆ ಮಾಡುವ ಸಮಯ ಬಂದಿದೆ, ಎಂದರು.

2017ರಲ್ಲಿ ಏನಾಯಿತು ಎಂದು ಎಲ್ಲರೂ ಸ್ಮರಿಸಿಕೊಳ್ಳುವಂತೆ ಮಾಡುವ ಸಮಯ ಬಂದಿದೆ, ಎಂದರು.

Share This Article
7 Comments
    • ಬಸವಾದಿ ಶರಣರ ಪೂಜ್ಯಶ್ರೀಗಳವರು ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯ ಹಿರಿಯರು ಸೇರಿ ಚರ್ಚಿಸಿ ನಿರ್ಣಯಗಳನ್ನು ಕೈಗೊಂಡಿರುವುದು ಸ್ತುತ್ಯಾರ್ಹ ಮತ್ತು ಸ್ವಾಗತಾರ್ಹ ಕ್ರಮವಾಗಿದೆ .
      ಲಿಂಗಾಯತ ಧರ್ಮದ ಮೇಲೆ ಸನಾತನವಾದಿಗಳು ಆಕ್ಟೋಪಸ್ ಹಿಡಿತಸಾಧಿಸಲು ಹೆಣಗುತ್ತಿರುವುದು , ಯಾವುದೋ ಲಾಭಕ್ಕಾಗಿ ಅವರಿಗೆ ನಮ್ಮವರೇ ಸಾಥ್ ನೀಡುತ್ತಿರುವುದು,,ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದು ; ನಮ್ಮಂಥವರಿಗೆ ಕಳವಳವುಂಟಾಗಿತ್ತು . ಈಗ ಮನಸ್ಸಿಗೆ ನೆಮ್ಮದಿ ಎನಿಸುತ್ತಿದೆ . ಸರ್ವರಿಗೂ ಭಕ್ತಿಯ ಶರಣು ಶರಣಾರ್ಥಿಗಳು 🌹🙏🙏
      ಜೈ ಜೈ ಬಸವ , ಜೈ ಜೈ ಲಿಂಗಾಯತ 🇮🇳🌹🙏

  • ಲಿಂಗಾಯತ ಧಮ೯ದ ನಿಜಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಬಸವ ವಟುಗಳ ಅವಶ್ಯಕತೆಯಿದ್ದು ಈ ಕಾಯ೯ವನ್ನು ಶ್ರೀ ಮಠಗಳೇ ಮಾಡಬೆಕು ,ಈಗ ಆ ಯಲ್ಲಾ ಮಠಗಳು ತಮ್ಮ ತಮ್ಮ ಮಠಗಳು ವ್ಯಾಪ್ತಿಯಲ್ಲಿ ಕನಿಷ್ಟ & ಗರಿಷ್ಟ ಗುರಿಗಳನ್ನು ಹಾಕಿಕೊಂಡು ನಿಜಾಚರಣೆಗಳು ವೇಗವಾಗಿ ಪ್ರಚಲಿತಕ್ಕೆ ತರುವ ಹೊಣೆಗಾರಿಕೆ ಮಠಗಳು ಹೊರಬೆಕು ,ಈ ಬಗ್ಗೆ ಸಮಾಜಕ್ಕೆ ಮಾಹಿತಿ ನಿಡಬೆಕು.

  • ಲಿಂಗಾಯತ ಧರ್ಮ ಜಾಗೃತಿ ಅಭಿಯಾನ ವನ್ನು ಎಲ್ಲ ಮಾತಾಧೀಷರು ಸೇರಿ ಮಾಡುವ ಅಗತ್ಯವಿದೆ. ಇದು ಕೀರ್ತಿ, ಪರಂಪರೆ ಪ್ರತಿಷ್ಠೆ, ಮರೆತು ಎಲ್ಲರೂ ಸೇವೆ ಮಾಡುವ ಅಗತ್ಯವಿದೆ. ಅಲ್ಲಿ ಪೂಜ್ಯ ಚನ್ನಬಸವಆನಂದ ಸ್ವಾಮೀಜಿ ಸಹ ತಮಗೆ ಯಾವ ಕಾರ್ಯ ಕೊಟ್ಟರು ಬಸವ ಸೇವೆ ಮಾಡುವದಾಗಿ ತಿಳಿಸಿದರು , ಅವರಿಗೆ ಅಭಿನಂದನೆಗಳು ಹಾಗೂ ಅವರು ಎಲ್ಲಿಯೂ ವಚನ ಅಂಕಿತಗಳನ್ನು ತಿರುಚಿ ಬಳಸಬಾರದು ಎನ್ನುವದು ಬಸವ ಭಕ್ತರ ಆಗ್ರಹ.

  • ಬಸವ ಸಂಸ್ಕೃತಿ ಅಭಿಯಾನ ವನ್ನು ಎಲ್ಲರೂ ಸೇರಿ ಮಾಡಲು ತೀರ್ಮಾನಿಸಿರುವುದು ತುಂಬಾ ಸಂತೋಷದ ಸಂಗತಿ. ಅಭಿಯಾನದಲ್ಲಿ ಬಸವಾದಿ ಶರಣರ ವಚನಗಳು, ಶರಣರ ಜೀವನ ಚರಿತ್ರೆಯ ಪುಸ್ತಕಗಳು, ಲಿಂಗಾಯತ ಧರ್ಮದ ಬಗ್ಗೆ ಸರ್ ಎಂ ಎಂ ಕಲಬುರ್ಗಿ, ಏನ್. ಜಿ. ಮಹದೇವಪ್ಪ, ಎಸ್. ಎಂ. ಜಮಾದಾರ್, ಇನ್ನೂ ಮುಂತಾದ ಸಾಹಿತಿ ವಿದ್ವಾಂಸರ ಪುಸ್ತಕಗಳು ಮಾರಾಟಕ್ಕೆ ಅಭಿಯಾನ ದಲ್ಲಿ ಇರಲಿ ಎಂದು ನನ್ನ ವಿನಮ್ರ ಮನವಿ. ಜೊತೆಗೆ ಕ್ರಿಯಾಮೂರ್ತಿ ಗಳ ತರಬೇತಿಯನ್ನು ಅಭಿಯಾನದ ಮುನ್ನವೇ ಏರ್ಪಡಿಸುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಏಕೆಂದರೆ ನಮ್ಮ ಮನೆಗಳಲ್ಲಿಯ ಕಾರ್ಯಕ್ರಮ ಗಳಿಗೆ ಜಂಗಮರನ್ನು ಕರೆಯುತ್ತೇವೆ. ಅವರು ಮಾಡುವುದು ವೈದಿಕ ರೀತಿಯಲ್ಲೇ ಕಾರ್ಯ ಗಳನ್ನು ಮಾಡುತ್ತಾರೆ. ಆದ್ದರಿಂದ ಕ್ರಿಯಾಮೂರ್ತಿಗಳ ತಯಾರಿ ಎಲ್ಲಕಿಂತ ತುರ್ತಾಗಿ ಆಗಬೇಕಾದ ಕಾರ್ಯ. ಶರಣು ಶರಣಾರ್ಥಿಗಳು.

  • ಓಂ ಶ್ರೀ ಗುರು ಬಸವಲಿಂಗಾಯನಮ: ಸರ್ವರಿಗೂ ಬಾಗಿದ ತಲೆ ಮುಗಿದ ಕೈಯಾಗಿ ಶರಣು ಶರಣಾರ್ಥಿಗಳು. ಅಂತು ಇಂತು ಗುರುಬಸವಣ್ಣನವರ, ಆದಿ ಶರಣ ಶರಣೆಯರ, ಗುರುಬಸವ ಪರಂಪರೆಯಲ್ಲಿ ಸಾಗಿ ಬಂದ ಶಿವಯೋಗಿ, ಶಿವಯೋಗಿನಿಯರ ಮತ್ತು ಶರಣ ಶರಣೆಯರ ನೈಜ ಸೇವೆ ಮಾಡುವ ಕಾಲ ಕೂಡಿ ಬಂದಿದೆ. ಕಾವಿಧಾರಿಗಳ ಮಾತನ್ನು ಮುಗ್ಧ ಬಹುಸಂಖ್ಯಾತ ಲಿಂಗಾಯತರು ಶಿರ‌ಸಾವಹಿಸಿ ಪಾಲಿಸುತ್ತಾರೆ. ತಾತ್ವಿಕ ನೆಲೆಗಟ್ಟಿನಲ್ಲಿ ಅವರನ್ನು ಸಂಘಟಿ‌ಸುವುದು ಅವರ ಕರ್ತವ್ಯವಾಗಿದೆ. ವೇದಿಕೆ ಕಾರ್ಯಕ್ರಮಗಳನ್ನು ಬದಿಗಿರಿಸಿ ಬೀದಿಗಿಳಿದು ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮಾಡಬೇಕು. ಲಿಂಗಾಯತ ಯುವಕರಿಗಾಗಿ Basava mobb create ಮಾಡಬೇಕಾದದ್ದು ಜರೂರಾಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಲಿ ಎಂದು ಆಶಿಸುತ್ತಾ ಮತ್ತೊಮ್ಮೆ ಎಲ್ಲರಿಗೂ ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *