ಸಾಂಸ್ಕೃತಿಕ ನಾಯಕ ಬಸವಣ್ಣ ಯೋಜನೆಗೆ ಅನುದಾನ ನೀಡದ ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರಿನಲ್ಲಿ ‘ಅಂತರರಾಷ್ಟ್ರೀಯ ಬಸವ ಅಧ್ಯಯನ ಹಾಗೂ ವಚನ ಅಧ್ಯಯನ ಕೇಂದ್ರ’ಕ್ಕೆ ತಾತ್ವಿಕ ಅನುಮೋದನೆ

ಬೆಂಗಳೂರು

ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರಿನಲ್ಲಿ ಒಂದು ಯೋಜನೆ ರೂಪಿಸಿ ಅವರ ಸಂದೇಶವನ್ನು ಜನಮನಕ್ಕೆ ತಲುಪಿಸಲು ಹೊಮ್ಮಿದ್ದ ಬೇಡಿಕೆಗಳಿಗೆ 2025ರ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ.

ಸಾಂಸ್ಕೃತಿಕ ನಾಯಕ ಬಸವಣ್ಣ ವಿಶೇಷ ಕಾರ್ಯಯೋಜನೆ ರೂಪಿಸಿ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಕೋರಿ ಲಿಂಗಾಯತ ಮಠಾಧಿಪತಿಗಳು ಹಾಗೂ ಸಮಾಜ ಗಣ್ಯರು ಫೆಬ್ರವರಿ 24ರಂದು ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ನಮ್ಮ ಯಾವುದೇ ಬೇಡಿಕೆಗೆ ಮುಖ್ಯಮಂತ್ರಿಗಳು ಸ್ಪಂದಿಸಿಲ್ಲವೆಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ ಸೋಮಶೇಖರ್ ಹೇಳಿದರು.

ಫೆಬ್ರವರಿ 24ರಂದು ಮುಖ್ಯಮಂತ್ರಿಗಳಿಗೆ ನೀಡಿದ್ದ ಮನವಿ ಪತ್ರದಲ್ಲಿ ಆರು ಮುಖ್ಯ ಬೇಡಿಕೆಗಳಿದ್ದವು:

1) ಬೆಂಗಳೂರಿನ ಅಂತರರಾಷ್ಟೀಯ ವಿಮಾನ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವುದು.

2) ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಬೃಹತ್ ‘ಶರಣ ದರ್ಶನ’ ಕೇಂದ್ರ (ಅಕ್ಷರಧಾಮ ಮಾದರಿಯಲ್ಲಿ) ಸ್ಥಾಪಿಸುವುದು.

3) ‘ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ’ ರಚಿಸುವುದು.

4) ನಿರ್ಮಾಣವಾಗುತ್ತಿರುವ ಅನುಭವ ಮಂಟಪದಲ್ಲಿ ‘ವಚನ ವಿಶ್ವವಿದ್ಯಾಲಯ’ ಮತ್ತು ಸಂಶೋಧನ ಕೇಂದ್ರ ಆರಂಭಿಸುವುದು.

5) ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಬಸವ ಭವನ’ ನಿರ್ಮಿಸುವುದು. ಆ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಬೇಕು.

6) ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸುವುದು (ಚಟುವಟಿಕೆಗಳು: ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ.)

ಬಸವ ಅಧ್ಯಯನ ಕೇಂದ್ರ

ಬೆಂಗಳೂರಿನಲ್ಲಿ ‘ಅಂತರರಾಷ್ಟ್ರೀಯ ಬಸವ ಅಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರ’ವನ್ನು ಸ್ಥಾಪನೆ ಮಾಡಲು ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದರು.

ಇದರ ಬಗ್ಗೆ ತಜ್ಞರ ಸಮಿತಿ ರಚಿಸಿ ವಿಸ್ತೃತ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು 2025ರ ಬಜೆಟ್ ಮಂಡಿಸುತ್ತಾ ಹೇಳಿದರು.

Share This Article
4 Comments
  • ಎಲ್ಲಾ ಸರ್ಕಾರಗಳು ಬಸವಣ್ಣನವರ ವಿಚಾರದಲ್ಲಿ ಆಸಕ್ತಿ ತೋರಿರುವುದು ಬೇಸರ ತರಿಸುತ್ತದೆ

  • ಈಗಲೂ ಕರ್ನಾಟಕದಲ್ಲಿ ಶೇಕಡಾ75ರಿಂದ 80 ರಷ್ಟು ಲಿಂಗಾಯತರು ಬಿಜೆಪಿ ಪಕ್ಷದ ಪರವಾಗಿ ಬಂಡೆಯಂತೆ ನಿಲ್ಲುತ್ತಾರೆ.ಆದರೆ ಅವರಿಂದ ಇದುವರೆಗೂ ಲಿಂಗಾಯತರಿಗೆ ಆಗಿರುವ ಪ್ರಯೋಜನ ಏನು? ಕೇಂದ್ರ ಸರ್ಕಾರ 50 ಲಕ್ಷ ಕೋಟಿ ರೂಪಾಯಿ ಬಜೆಟ್ ನಲ್ಲಿ ಲಿಂಗಾಯತರಿಗೆ ಎಷ್ಟು ಕೋಟಿ ರೂಪಾಯಿ ಅನುದಾನ ಕೊಟ್ಟಿದೆ ತಿಳಿಸಬಹುದೆ?? ಮೋದಿ ಯನ್ನು ಏಕೆ ಕೇಳಿಲ್ಲ?

  • ಹೌದು ವೀರಭದ್ರಯ್ಯ ನವರೇ, ನಾವು ಎಲ್ಲಾ ಜಿಲ್ಲೆ ಇಂದ ಸಂಘಟಕರಾಗಿ ಮನವು ಕೊಡ್ತಾ ಹೋಗಬೇಕು. ಉಳ್ಳವರು ಜಾಗ ಕೊಟ್ರೆ ಅಲ್ಲಿ ಬಸವ ಭವನ /ಜಾಗ ಲಭ್ಯ ವಿದ್ದಡೆ ಅನುಭವ ಮಂಟಪ ಕಟ್ಟಿಸೋಕೆ plan ಜತೆಗೆ ಮನವಿ ಕೊಡೋನು. ಕೆಲವು ವೀ. ಲಿಂ. ಸಂಘಟಕರು ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸ್ಥಾನ ಕೊಟ್ಟಿಲ್ಲ ಅಂತ ಗೂಗರೀತಾ ಇದ್ದಾರೆ. ಇದುವರೆಗಿನ 4 ಸಿಎಂ ಲಿಂಗಾಯತರು, ಕೇಂದ್ರ ಮಂತ್ರಿ ಗಳು, ಕಾಂಗ್ರೆಸ್ ಅಧ್ಯಕ್ಷರು ಆಗಿದ್ದವರು ಏನು ಕೊಟ್ರು? ಒಗ್ಗಟ್ಟಿನ ಕೊರತೆ. ಅಧಿಕಾರದ ಆಶೆ ಬಿಟ್ಟವರು ಸಮಾಜ ಕಟ್ಟಬಹುದು. ” ಬಸವ ಭವನ,
    Mattu’ ಅಲ್ಪಸಂಖ್ಯಾತ ಧರ್ಮ ಮಾನ್ಯತೆಗಾಗಿ ” ( ದೇವಸ್ಥಾನ ಕಟ್ಟೋದು ಹೊರತಾಗಿ ) ಹೋರಾಡು ಬೇಕಿದೆ.
    ಶರಣಾರ್ಥಿಗಳೊಂದಿಗೆ,

Leave a Reply

Your email address will not be published. Required fields are marked *