ಸಾಣೇಹಳ್ಳಿಯಲ್ಲಿ 27ರಿಂದ ಲಿಂಗಾಯತ ಧರ್ಮ ಅಧ್ಯಯನ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಹೊಸದುರ್ಗ

‘ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ, ನಿಜ ಆಚರಣೆಗಳು, ಶಿವಯೋಗ, ಸಂಘಟನೆ ಕುರಿತು ಅರಿವು ಮೂಡಿಸಲು ಡಿ. 27 ರಿಂದ ಮೂರು ದಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ ಅಧ್ಯಯನ ಶಿಬಿರ ಏರ್ಪಡಿಸಿದೆ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

‘35 ವರ್ಷದೊಳಗಿನ ಆಸಕ್ತರು ₹ 200 ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಶಿಬಿರಾರ್ಥಿಗಳಿಗೆ ನೋಟ್‌ ಪುಸ್ತಕ ಸೇರಿ ಇತರ ಪರಿಕರ ಒದಗಿಸಲಾಗುವುದು. ಉಪಾಹಾರ ಹಾಗೂ ಬೇರೆ ಊರುಗಳಿಂದ ಬರುವವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘100 ರಿಂದ 150 ಜನರಿಗೆ ಮಾತ್ರ ಪ್ರವೇಶ ಇದೆ. ಮೊದಲು ನೋಂದಣಿಯಾದವರಿಗೆ ಆದ್ಯತೆ. ಮಾಹಿತಿಗಾಗಿ ಟಿ.ಎಂ. ಮರುಳಸಿದ್ಧಯ್ಯ (ಮೊ; 9663177254) ಅವರನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
Leave a comment

Leave a Reply

Your email address will not be published. Required fields are marked *