ಮೂಡಗೂರು
ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಹೆಚ್.ಎಂ. ಶಿವಮೂರ್ತಿ, ಮಂಜುಳ ಅವರ ಪುತ್ರ ‘ಪ್ರಾಣೇಶ’ ಮತ್ತು ಧಾರವಾಡದ ನರೇಂದ್ರ ಗ್ರಾಮದ ಸಂಗಪ್ಪ, ಮಂಜುಳ ಅವರ ಪುತ್ರಿ ‘ರಶ್ಮಿ’ ಅವರುಗಳು ನೂತನ ದಂಪತಿಗಳಾದರು.
ಆಶೀರ್ವಚನ ನೀಡಿದ ಪೂಜ್ಯ ಉದ್ಧಾನಸ್ವಾಮಿಗಳು ವಚನ ಮಾಂಗಲ್ಯವನ್ನು 900 ವರ್ಷಗಳ ಹಿಂದೆ ನಮ್ಮ ಬಸವಾದಿ ಶರಣರು ಲಿಂಗಾಯತ ಧರ್ಮದಲ್ಲಿ ನಡೆಸಿಕೊಟ್ಟರು. ಪ್ರತಿಯೊಬ್ಬ ಲಿಂಗಾಯತರು ಇದೇ ರೀತಿ ಸರಳರೀತಿಯ ವಚನಕಲ್ಯಾಣ ಮಾಡಿಕೊಳ್ಳಬೇಕೆಂದು ಎಂದು ನುಡಿದರು.
ನೂರು ಅತಿಥಿಗಳ ಒಳಗಿರುವ ಸರಳ ವಚನಕಲ್ಯಾಣಕ್ಕೆ ನಮ್ಮ ಮಠದ ಸಭಾಂಗಣವನ್ನು ಉಚಿತವಾಗಿ ನೀಡುತ್ತೇವೆಂದು ಹೇಳಿದರು.