ತರಳಬಾಳು ಶಿವಸೈನ್ಯ ಸಂಘಟನೆಯಿಂದ ಬಸವ ಜಯಂತಿ ಆಚರಣೆ

ಶಿವಮೊಗ್ಗ

ಸಮೀಪದ ಅಬ್ಬಲಗೆರೆ ಗ್ರಾಮದಲ್ಲಿ ಇತ್ತೀಚಿಗೆ ಬಸವ ಪ್ರಜ್ಞೆ ಜಾಗೃತಗೊಂಡ ಯುವಕರ ಪಡೆ ತರಳಬಾಳು ಶಿವಸೈನ್ಯ ಸಂಘಟನೆಯ ಮೂಲಕ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿತು.

ಗ್ರಾಮದ ಪ್ರಮುಖ ರಸ್ತೆಗೆ ಬಸವೇಶ್ವರ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣ ಮಾಡಲಾಯಿತು.

ಬಸವೇಶ್ವರರ ತತ್ವಗಳನ್ನು ಸಾರುವಂಥ ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರರ ಭಾವಚಿತ್ರವನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಜಯಂತಿ ಪ್ರಯುಕ್ತ ಬಸವೇಶ್ವರರಿಗೆ ಪ್ರಿಯವಾದಂತ ಅಂಬಲಿ ಮತ್ತು ಮಜ್ಜಿಗೆ ದಾಸೋಹ ಸೇವೆಯನ್ನು ಗ್ರಾಮದ ಪ್ರತಿಷ್ಠಿತ ಮನೆತನದ ಪಾಟೀಲ್ ಸದಾಶಿವಪ್ಪನವರು ಮಾಡಿದರು.

ಮೆರವಣಿಗೆಯ ನಂತರ ಶಿವಸೈನ್ಯ ಸಂಘಟನೆ ವತಿಯಿಂದ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ನೇತೃತ್ವ ಹಾಗೂ ನಿರ್ವಹಣೆಯನ್ನು ನಿತಿನ್ ಪಟೇಲ್, ಶ್ರೀಧರ್ ಪಟೇಲ್, ಉಮೇಶ್, ಸಂತೋಷ್, ಯೋಗೇಶ, ಅಶೋಕ, ಆಂಜನೇಯ, ಮಹೇಂದ್ರ ಪಟೇಲ್, ಅನಿಲ, ಜಗದೀಶ, ಚನ್ನ, ಹರೀಶ, ಚನ್ನಕೇಶವ, ಅರ್ಜುನ ಪಟೇಲ್, ಸಾಗರ ಪಟೇಲ್ ಚಂದ್ರಶೇಖರ್ ವಹಿಸಿದ್ದರು. ಅಬ್ಬಲಗೆರೆ ಗ್ರಾಮಸ್ಥರೆಲ್ಲ ಪಾಲ್ಗೊಂಡು ಬಸವ ಜಯಂತಿಯನ್ನು ಯಶಸ್ವಿಗೊಳಿಸಿದರು.

ಅಬ್ಬಲಗೆರೆ ಗ್ರಾಮದ ಮಹತ್ವ

ವಿಶ್ವಬಂಧು ಮರುಳಸಿದ್ದರು 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣನವರ ಹಿರಿಯ ಸಮಕಾಲೀನರು. ಜಗದ್ಗುರು ರೇವಣಸಿದ್ದರ ಕೃಪಾಶೀರ್ವಾದದಿಂದ ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಾಗೃತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ. ಉಜ್ಜಯನಿ ಮರುಳಸಿದ್ದರು ಪೂಜಾ ಅನುಷ್ಠಾನಗೈದು ಧರ್ಮ ಪ್ರಚಾರಕ್ಕೆ ಹೆಸರಾದಂತಹ ಅನೇಕ ಸ್ಥಳಗಳಂತೆ ಶಿವಮೊಗ್ಗ ಸಮೀಪ ಅಬ್ಬಲಗೆರೆಯೂ ಒಂದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *