ಬೆಳಗಾವಿ
ಗಾಳಿ, ನೀರು, ಬೆಳಕು ಹೀಗೆ ಸೃಷ್ಟಿಯ ಎಲ್ಲ ಕೊಡುಗೆಗಳು ಪ್ರಸಾದಮಯವಾಗಿದ್ದು, ನಾವು ಉಣ್ಣುವ ಅನ್ನವನ್ನು ಹಾಗೂ ಯಾವುದೇ ಕೊಡುಗೆಯನ್ನು ಕೆಡಿಸಬಾರದು. ಅನ್ನವನ್ನು ಲಿಂಗಕ್ಕೆ ಎಡೆಮಾಡಿ ಉಂಡಾಗ ಅದು ಪ್ರಸಾದ ರೂಪವಾಗುತ್ತದೆ. ತುತ್ತಿಗೊಮ್ಮೊಮ್ಮೆ ಶಿವನಾಮಸ್ಮರಣೆ ಮಾಡುತ್ತಾ ಸ್ವಿಕರಿಸಬೇಕು.
ಪ್ರಸಾದ ಕುರಿತು ವಚನಗಳನ್ನು ವಿಶ್ಲೇಷಣೆ ಮಾಡುತ್ತಾ, ಶರಣ ಬಿಬ್ಬಿ ಬಾಚಯ್ಯನವರು ಎಲ್ಲಿ ಅನ್ನ ಉಂಡು ಉಳಿದು ಹಾಳಾಗುತ್ತಿತ್ತೋ ಅಲ್ಲಿಂದ ಅನ್ನವನ್ನು ತೆಗೆದುಕೊಂಡು ಹೋಗಿ ಹಸಿದವರಿಗೆ ಹಂಚುತ್ತಿದ್ದರು ಎಂದು ಅವರ ಕಾಯಕ ಹಾಗೂ ಪ್ರಸಾದದ ಮಹತ್ವವನ್ನು ಶರಣ ದುಂಡಪ್ಪ ಸಂಕೇಶ್ವರ ಹೇಳಿದರು.
ಕುವೆಂಪು ನಗರದಲ್ಲಿರುವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯದಲ್ಲಿ ರವಿವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನ ವಿಶ್ಲೇಷಣೆ ಮಾಡುತ್ತ ಶರಣೆ ಲಲಿತಾ ರುದ್ರಗೌಡರು, ನಾವು ಮಾಡುವ ಕೆಲಸವನ್ನು ಹೇಳಿಕೊಳ್ಳದೆ ಮಾಡಿಯೂ ಮಾಡದಂತಿರಬೇಕೆಂದು ತಿಳಿಸಿದರು.

ಶರಣೆ ದಾನಮ್ಮಾ ಝಳಕಿ ಅಕ್ಕ ನಾಗಮ್ಮನ ವಚನ ಹೇಳುತ್ತ, ಜೀವನದಲ್ಲಿ ನಿರಾಶಾಭಾವನೆ ಹೊಂದದೆ, ನಿಂದನೆಗಳನ್ನು ಎದುರಿಸಿ ನಾವು ನಮ್ಮ ಗುರಿಯತ್ತ ಸಾಗಲು ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬಲು ವಚನಗಳು ಎಷ್ಟೊಂದು ಪೂರಕವಾಗಿವೆ ಎಂದು ತಿಳಿಸಿಕೊಟ್ಟರು.
ಅಧ್ಯಕ್ಷರಾದ ಎಸ್.ಜಿ. ಸಿದ್ನಾಳ, ಶಂಕರ ಶೆಟ್ಟಿ, ಮಹಾದೇವ ಕೋರಿ, ಮೋಹನ ಮುನವಳ್ಳಿ ಅವರು ಕೂಡಾ ವಚನಗಳನ್ನು ವಿಶ್ಲೇಷಣೆ ಮಾಡಿದರು.
ಶರಣೆ ವಾಸಕ್ಕ ಗಡಕರಿ, ಶಾರದಾ ಉಡಕೇರಿ, ನಾಗರತ್ನಾ ಪಾಟಿಲ ವಚನ ಗಾಯನ ಮಾಡಿದರು.
ಸುನಿತಾ ನಂದೆಣ್ಣವರ, ಲಲಿತಾ ರುದ್ರಗೌಡರ ಪ್ರಾರ್ಥನೆ ನಡೆಸಿಕೊಟ್ಟರು. ನಿರೂಪಣೆ ಸುನಿತಾ ನಂದೆಣ್ಣವರ ಮಾಡಿದರು. ಉಪಾಧ್ಯಕ್ಷರಾದ ಕುಂದ್ರಾಳ, ಗುರವನ್ನವರ, ಜಯಶ್ರೀ ಮುಗಳಿ, ಸರೋಜಿನಿ ನಡುವಿನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86