ಉರಿಲಿಂಗಪೆದ್ದೀಶ್ವರ ಜಾತ್ರೆಯಲ್ಲಿ ಶರಣರ ತತ್ವದರ್ಶನ, ಸಂವಿಧಾನ ಜನಜಾಗೃತಿ ಸಮಾವೇಶ

ಅಶೋಕ ಆದಿಶೈವ
ಅಶೋಕ ಆದಿಶೈವ

ಸೇಡಂ

ತಾಲೂಕಿನ ಕೋಡ್ಲಾ ಗ್ರಾಮದ ಶ್ರೀ ಜಗದ್ಗುರ ಉರಿಲಿಂಗಪೆದ್ದೀಶ್ವರ ಮಹಾಸಂಸ್ಥಾನಮಠದ ಶ್ರೀ ಶಿವಯೋಗೀಶ್ವರರ 45ನೇ ಜಾತ್ರಾ ಮಹೋತ್ಸವವು, ಸೋಮವಾರ 14-4-2025 ರಂದು ಸಾಯಂಕಾಲ 6-30ಕ್ಕೆ ನಡೆಯಲಿದೆ.

ಪೂಜ್ಯ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಖಾಸಾಮಠ, ಗುರುಮಠಕಲ್ ಇವರ ಚಾಲನೆಯೊಂದಿಗೆ ಹಾಗೂ ಶಾಖಾಮಠದ ಸ್ವಾಮಿಗಳ ಉಪಸ್ಥಿತಿಯೊಂದಿಗೆ ಕುಂಭಮೇಳ, ಭಜನೆ, ಮೆರವಣಿಗೆ ಪುರವಂತರರ ಸೇವೆಯೊಂದಿಗೆ ಹಾಗೂ ಭಕ್ತರೊಂದಿಗೆ ಭವ್ಯ ರಥೋತ್ಸವ ಜರುಗುವುದು.

ಶರಣ ತತ್ವ ದರ್ಶನ, ಸಂವಿಧಾನ ಜನ ಜಾಗೃತಿ ಸಮಾವೇಶ ರಾತ್ರಿ 7-30ಕ್ಕೆ ನಡೆಯಲಿದೆ. ಸಾನಿಧ್ಯವನ್ನು ಪೂಜ್ಯ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಖಾಸಾಮಠ, ಗುರುಮಿಠಕಲ್ ಇವರು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮಿಗಳು 5 ನೇ ಪೀಠಾಧೀಶರು ಶ್ರೀ ಉರಿಲಿಂಗ ಪೆದ್ದೀಶ್ವರ ಮಹಾಸಂಸ್ಥಾನಮಠ, ಕೋಡ್ಲಾ ಇವರು ವಹಿಸುವರು.

ಸಮ್ಮುಖವನ್ನು ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳು ಶ್ರೀ ಕೊತ್ತಲ ಬಸವೇಶ್ವರ ದೇವಾಲಯ, ಸೇಡಂ, ಪೂಜ್ಯ ಶ್ರೀ ಶಂಭುಲಿಂಗೇಶ್ವರ ಸ್ವಾಮಿಗಳು ಶ್ರೀ ಶಂಭುಲಿಂಗೇಶ್ವರ ವಿರಕ್ತಮಠ ಕೋಡ್ಲಾ, ಶ್ರೀ ಬಸವಲಿಂಗಮೂರ್ತಿ ಶರಣರು ಬಸವ ಧ್ಯಾನ ಕೇಂದ್ರ ರಮ್ಯನಳ್ಳಿ, ಪೂಜ್ಯ ಶ್ರೀ ಬಾಲತಪೋನಿಧಿ ಕೇದಾರಲಿಂಗ ಮಹಾಸ್ವಾಮಿಗಳು, ಶ್ರೀ ಸಿದ್ಧಲಿಂಗೇಶ್ವರ ವಿರಕ್ತಮಠ ಬೆನಕನಹಳ್ಳಿ ಇವರು ವಹಿಸಲಿದ್ದಾರೆ.

ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಡಾ. ಶರಣಪ್ರಕಾಶ ಪಾಟೀಲ ವೈಧ್ಯಕೀಯ ಶಿಕ್ಷಣ ಸಚಿವರು ಆಗಮಿಸಲಿದ್ದಾರೆ. ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಶ್ರೀ ಪ್ರಿಯಾಂಕ ಖರ್ಗೆ ಅವರು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವರು ಮಾಡುವರು. ಜ್ಯೋತಿ ಬೆಳಗಿಸುವವರು ಶ್ರೀ ರಾಧಾಕೃಷ್ಣ ದೊಡ್ಡಮನಿ ಲೊಕಸಭಾ ಸದಸ್ಯರು, ಕಲಬುರಗಿ, ಮುಖ್ಯ ಅತಿಥಿಗಳಾಗಿ ಶ್ರೀ ರಾಜಕುಮಾರ ಪಾಟೀಲ ಮಾಜಿ ಶಾಸಕರು ಸೇಡಂ, ಶ್ರೀ ಬಾಲರಾಜ ಗುತ್ತೇದಾರ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರು ಕಲಬುರಗಿ ಇವರು ಭಾಗವಹಿಸುವರು.

ಪ್ರಾಸ್ತಾವಿಕ ನುಡಿಗಳನ್ನು ಶ್ರೀ ಶಿವಯೋಗಿ ರಂಜೋಳ ಆಡಲಿದ್ದಾರೆ. ಸರ್ವ ಭಕ್ತಾದಿಗಳಿಗೆ ಸ್ವಾಗತ ಕೋರಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *