ಮೈಸೂರು
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ‘ವಚನ ವಿಮರ್ಶನಾ ಪ್ರಬಂಧ ಸ್ಪರ್ಧೆ’ ಏರ್ಪಡಿಸಲಾಗಿದೆ.
ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಆಯೋಜಿಸಿರುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಜೂನ್ 28ರಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಮಿತಿ ಕೊಠಡಿಯಲ್ಲಿ ಬೆಳಗ್ಗೆ 11 ಗಂಟೆಗೆ ಹಾಜರಿದ್ದು, ಪ್ರಬಂಧ ಬರೆಯಬಹುದು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 20 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಯಾವುದೇ ವಚನಕಾರರ ಅಥವಾ ವಚನಕಾರ್ತಿಯರ ಒಂದು ವಚನವನ್ನು ಮಾತ್ರ ವಿಮರ್ಶೆ ಮಾಡಲು ಅವಕಾಶವಿದೆ.
ವಿಮರ್ಶನಾ ಪ್ರಬಂಧ ಬರೆಯಲು ಒಂದು ಗಂಟೆ ಕಾಲಾವಕಾಶ ನೀಡಲಾಗುವುದು.
ತಜ್ಞರು ಪ್ರಬಂಧಗಳನ್ನು ಮೌಲ್ಯಮಾಪನ ಮಾಡಿಕೊಟ್ಟ ತೀರ್ಮಾನವೇ ಅಂತಿಮವಾಗಿರುತ್ತದೆ. ಸಮಾರಂಭದಲ್ಲಿ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು.
ಮೊದಲ ಬಹುಮಾನ ರೂಪಾಯಿ 5,000/-, ಎರಡನೇ ಬಹುಮಾನ ರೂ. 3000/-, ಮೂರನೇ ಬಹುಮಾನ ರೂ. 2000/- ಇರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತರು ಜೂನ್ 26, 2025ರೊಳಗೆ 82770 02779, 91138 83513 ಸಂಖ್ಯೆಗಳಿಗೆ ಸಂಪರ್ಕಿಸಿ ತಮ್ಮ ಹೆಸರು ನೊಂದಾಯಿಸಿಕೊಂಡು ಭಾಗವಹಿಸಬಹುದಾಗಿದೆ, ಎಂದು ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಅರವಿಂದ ಮಾಲಗತ್ತಿ, ನಿರ್ದೇಶಕ ಪ್ರೊ. ಎನ್. ಕೆ. ಲೋಲಾಕ್ಷಿ ತಿಳಿಸಿದ್ದಾರೆ.
ಉತ್ತಮ ಬೆಳವಣಿಗೆ. ಆಯೋಜಕರಿಗೆ ಶರಣು ಸಮರ್ಪಣೆ
ಯಾವುದಾದರು ವಚನ ಬದಲು ಆಯ್ದ ಕ್ರಾಂತಿಕಾರಿ ವಚನಗಳ ಪಟ್ಟಿ ಮಾಡಿ ಅದರ ಆಯ್ಕೆ ಅವರಿಗೆ ಕೊಡುವುದು. ಈ ಮೂರು ಬಹುಮಾನದ ನಂತರ ಉಳಿಕೆಯ ಅತ್ಯುತ್ತಮ ಪ್ರಬಂದಗಳಿಗೂ ಗೌರವ ಧನ ೧೦೦೦ ಕೊಡುವುದು ಸೂಕ್ತ ಅದಕ್ಕೂ ಪ್ರಾಯೋಜಕರು ಸಿಗುತ್ತಾರೆ.