ಬೆಂಗಳೂರು:
ಮೂಢನಂಬಿಕೆ ವಿರೋಧಿ ಒಕ್ಕೂಟದ ಅಡಿಯಲ್ಲಿ ವೈಜ್ಞಾನಿಕ ಮನೋಧರ್ಮದೊಂದಿಗೆ ಸೂರ್ಯಗ್ರಹಣ (ನೇಸರ ಮರೆಯಾಗುವದು) ಕಾರ್ಯಕ್ರಮವನ್ನು ಮಂಗಳವಾರ ಆಚರಿಸಲಾಗುತ್ತದೆ.
ಸಂಜೆ 5ರಿಂದ 6ರವರೆಗೆ ಪುರಭವನದ ಹತ್ತಿರ ನಡೆಯುವ ಕಾರ್ಯಕ್ರಮದ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ಸೇವಿಸಿ, ಕಾರ್ಯಕ್ರಮವನ್ನು ಆಚರಿಸಲಾಗುವುದು.
ನಮ್ಮ ನಡಿಗೆ – ವಿಜ್ಞಾನದೆಡೆಗೆ, ಮೂಢನಂಬಿಕೆ ತೊಲಗಲಿ – ವೈಚಾರಿಕತೆ ಬೆಳೆಯಲಿ ಘೋಷಣೆಯೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಪ್ರಗತಿಪರರು ಆಗಮಿಸಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ : ಟಿ. ನರಸಿಂಹಮೂರ್ತಿ 9980627609, ಹೆಚ್.ಸಿ. ಉಮೇಶ್ 9844057149, ವಿವೇಕಾನಂದ ಎಚ್. ಕೆ. 9844013068, ಯುವರಾಜ್ ಎಂ. 8050802019 ಸಂಪರ್ಕಿಸಲು ಕೋರಲಾಗಿದೆ.
