ಸಮಾಜ ಸ್ವಾಸ್ತ್ಯಕ್ಕೆ ಹಾನಿಯನ್ನುಂಟುಮಾಡುವ ಈ ಅಸಂಬದ್ಧ ವಿಚಾರವನ್ನು ತಕ್ಷಣ ಕೈ ಬಿಡಲಿ
ಧಾರವಾಡ
ಈ ಬಾರಿಯ ಬಸವ ಜಯಂತಿಯ ಜೊತೆ ರೇಣುಕಾಚಾರ್ಯರ ಯುಗಮಾನೋತ್ಸವವನ್ನೂ ಆಚರಿಸಲು ಮುಂದಾಗಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯ ಅವಿವೇಕದ ಪರಮಾವಧಿ ಎನಿಸಿದೆ.
ತಾತ್ತ್ವಿಕವಾಗಿ ತದ್ವಿರುದ್ಧವಾದ ಮತ್ತು ಸಮಾಜ ಸ್ವಾಸ್ತ್ಯಕ್ಕೆ ಹಾನಿಯನ್ನುಂಟುಮಾಡುವ ಈ ಅಸಂಬದ್ಧ ವಿಚಾರವನ್ನು ತಕ್ಷಣ ಕೈಬಿಟ್ಟು ಮುಂದೆ ಆಗಬಹುದಾದ ಇಲ್ಲದ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ. ಹಾಗೆಯೇ ನಾಡಿನ ಎಲ್ಲ ಬಸವಪರ ಸಂಘಟನೆಗಳು ಎಂದಿನಂತೆ ಬಸವಜಯಂತಿಯನ್ನು ಸ್ವತಂತ್ರವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಕೋರುತ್ತೇನೆ.
ಕರ್ನಾಟಕ ಸರಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಈ ವರ್ಷದ ಬಸವ ಜಯಂತಿಯನ್ನು ಕೂಡಲಸಂಗಮದಲ್ಲಿ ಎರಡು ದಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸಲು ಯೋಜಿಸಿರುವುದು ಅಪೇಕ್ಷಣೀಯ ಉಪಕ್ರಮವೆನಿಸಿದೆ. ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇನೆ.
ವೀರಣ್ಣ ರಾಜುರ ಅವರು ತಮ್ಮ ಹೇಳಿಕೆ ಮತ್ತು ವೀರಶೈವ ಲಿಂಗಾಯತ ಮಹಾಸಭೆಯ ನಿರ್ಧಾರದ ನಿಂದನೆ ತಕ್ಷಣ ಹಿಂಪಡೆಯಬೇಕು. ಇಂತಹ ಹೇಳಿಕೆಯಿಂದ ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸಲು ಸಾಧ್ಯವಿಲ್ಲ. ಬಸವ ತತ್ವ ಸನಾತನ ತತ್ವ ಒಂದೇ ನಾಣ್ಯದ ಎರಡು ಮುಖ.
ವೀರಣ್ಣ ಅಂತವರ ವಿಚಾರವಾದಿಗಳಿಂದಲೇ ನಮ್ಮ ಸಮಾಜ ಒಗ್ಗೂಡಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ಜವಾಬ್ದಾರಿಯಿಂದ ಮಾತಾಡಬೇಕು.
💯
Good message both are same
Shranabasappanavre Basavatatva hagu neevu helida sanatana dharma vande nanyada eradu mukhagalu hege? vevari please….
ಆಚರಣೆಗಳಲ್ಲಿ ಅ.ಭಾ.ವೀ.ಮಹಾಸಭೆಗೂ ಲಿಂಗಾಯತ ಧರ್ಮಕ್ಕೂ ಅಜಗಜಾಂತರ ವ್ಯತ್ವಾಸವಿದೆ. ಮಹಾಸಭೆಯ ರಾಜ್ಯಾಧ್ಯಕ್ಷರ ಸುತ್ತೋಲೆ ಪಾಲಿಸುವುದು ಲಿಂಗಾಯತ ಧರ್ಮದ ಅನುಯಾಯಿಗಳಿಗೆ ಸಂಬಂಧವಿಲ್ಲ. ಕಾರಣ ಸಭೆಯ ಸುತ್ತೋಲೆಗೆ ನಾವೇಕೆ ಬೆಲೆ ಕೊಡಬೇಕು?. ಯಥಾರೀತಿ ಪ್ರತಿವರ್ಷದಂತೆ ನಾವು ನಮ್ಮ ಲಿಂಗಾಯತ ಧರ್ಮ ಗುರುಗಳಾದ ಬಸವಣ್ಣನವರ ಜಯಂತಿ ಮಾತ್ರ ಅತೀ ವಿಜ್ರಂಭಣೆಯಿಂದ ಆಚರಿಸಿ ಗುರುವಿಗೆ ಹೃತ್ಪೂರ್ವಕ ನಮನ ಸಲ್ಲಿಸೋಣ.
Veerashaiv Lingayataralli oggattannu mudisuv Shri Shankar Bidari avar prayatn prashanshaniy.Pratiyobb veerashaiv Lingayataru khushiyind swagatisa bekad vishayawannu samajadalli odaku mudisuv atee buddiwant duddi jeevigal nade mattu nudi yeradoo vivekadind koodiddantu yarigoo anisuvudilla.
Veerashaiv Lingayat samaj dodd hagoo balisth samaj Dayamadi oggattannu moodisuv prayatna madi.Illave summane iri.Samaj odeyuv kelasa madabedi.
Samajad oggattinalli vishwas iruwawarige idu nanna kalakaliya vinanti
ವೀರಣ್ಣನವರೆ, ನಿಮ್ಮಂತವರ ಅವಿವೇಕದ ವಿಚಾರಗಳಿಂದ ವೀರಶೈವ-ಲಿಂಗಾಯತ ಸಮಾಜದ ಮೇಲೆ ಅನ್ಯರು ಇನ್ನಷ್ಟು ಧಾಳಿ ಮಾಡಿ ಅಧೋಗತಿಗೆ ತಳ್ಳಲು ಸಹಾಯವಾಗುತ್ತದೆ. ತಮ್ಮ ಹೇಳಿಕೆ ಸಮಾಜವನ್ನು ಒಡೆಯಲು ಪ್ರಚೋದನೆಯಾಗಿದೆ. ಸಾಧ್ಯವಾದರೆ, ಸಭೆಗೆ ಹಾಜರಾಗಿ ಕ್ಷಮೆ ಕೇಳಿ ಸಮಾಜವನ್ನು ಒಗ್ಗೂಡಿಸುವ ಮಹಾಸಭಾದ ಕೆಲಸಕ್ಕೆ ಕೈ ಜೋಡಿಸಿ ಇಲ್ಲವಾದರೆ ಸುಮ್ಮನೆ ಮನೆಯಲ್ಲಿರಿ..
ಆಕಾಶಕ್ಕೂ ಭೂಮಿಗೂ ಅಗ್ನಿಗೂ ನೀರಿಗೂ ಒಂದೇ ಎಂದು ಹೇಳಲು ಸಾದ್ಯವೇ ಒಂದೇ ಎಂದ ಹೇಳುವದಾದರೆ
ಕಲ್ಲು ದೇವರು ದೇವರಲ್ಲ ಈ ವಚನ
ಬಸವಣ್ಣನವರ ವಚನ ಇದನ್ನು ವೀರಶೈವರು ಒಪ್ಪಿಕೊಳ್ಳುವರೇ …………
ಕಲ್ಲುನಾಗರವ ಕಂಡರೆ ಹಾಲನೆರೆ ಎಂಬವರಯ್ಯ
ಈ ವಚನವನ್ನು ವೀರಶೈವರು ಒಪ್ಪುವರೇ………….