ಬಸವ ಜಯಂತಿಯಲ್ಲಿ ಜೈ ಶ್ರೀರಾಮ್ ಎಂದು ಯತ್ನಾಳ್ ಕೂಗಿದ್ದು ಬಸವ ದ್ರೋಹ

ಅಧಿಕಾರಕ್ಕಾಗಿ ಇಡೀ ಸಮುದಾಯವನ್ನು ಬಲಿಕೊಡುವ ಇಂತವರನ್ನು ಲಿಂಗಾಯತ ಅಂತ ಹೇಗೆ ಹೇಳಬೇಕು?

ವಿಜಯಪುರ

ವಿಜಯಪುರದಲ್ಲಿ ಬಸವೇಶ್ವರ ಪುತ್ತಳಿ ಹತ್ತಿರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ , ಹುಟ್ಟಿನಿಂದ ಲಿಂಗಾಯತನಾಗಿ, ಬದುಕಿನಿಂದ ವೈದಿಕನಾಗಿ, ಕಠೋರ ಹಿಂದುತ್ವವಾಗಿ ಯತ್ನಾಳ ಎನ್ನುವವರು ಬಸವಣ್ಣನ ಜಯಂತಿಯಲ್ಲಿ ಶ್ರೀ ರಾಮಘೋಷಣೆ ಕೂಗಿದ್ದು ನಿಜಕ್ಕೂ ಬಸವಣ್ಣನಿಗೆ ಮಾಡಿದ ದ್ರೋಹ.

ದ್ರೋಹ ಎನ್ನುವ ಶಬ್ದವು ಸಂಸ್ಕಾರವಂತ ಶಬ್ದ ಅನಿಸುತ್ತೆ ಅವರಿಗೆ.

ಶ್ರೀರಾಮನ ಬಗ್ಗೆ ನಮಗಾವ ತಕರಾರು ಇಲ್ಲ, ಆದರೆ ಬಸವ ಜಯಂತಿಯ ವೇದಿಕೆ ಮೇಲೆ ಜೈ ಶ್ರೀರಾಮ್ ಎಂದು ಕೂಗುವುದು ಎಷ್ಟು ಸೂಕ್ತ? ಇಂತವರಿಗೆ ಜನಪದರು ಹೇಳಿರುವುದು “ಉಂಡ ತಾಟಿನಲ್ಲಿ ಉಚ್ಚೆ ಹಯ್ಯುವವರು” ಅಂತ. ಅದೇನೆ ಇರಲಿ ಬಸವಣ್ಣನ ನಾಡಿನಲ್ಲಿಯೇ ಇಂತಹ ದ್ರೋಹಕ್ಕೆ ಮುಂದೆ ಅವರು ತಕ್ಕದಾದುದ್ದನ್ನು ಕಕ್ಕಬೇಕಾಗುವ ಕಾಲ ದೂರ ಇಲ್ಲ.

ಇಂತಹ ಕೊಂಡಿ ಮಂಚಣ್ಣನವರು ಎಲ್ಲಾ ಕಾಲಕ್ಕೂ ಇದ್ದರು. ಅದಕ್ಕೆ ಬಸವಣ್ಣನ ಈ ವಚನವೆ ಸಾಕ್ಷಿಯಾಗಿ.

“ಭಕ್ತರ ಕಂಡರೆ ಬೋಳರಪ್ಪಿರಯ್ಯಾ ,
ಸವಣರ ಕಂಡರೆ ಬತ್ತಲೆಪ್ಪಿರಯ್ಯಾ ,
ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ ,
ಅವರವರ ಕಂಡಡೆ ಅವರವರಂತೆ
ಸೊಳೆಗೆ ಹುಟ್ಟಿದವರ ತೋರದಿರಯ್ಯಾ .
ಕೂಡಲಸಂಗಯ್ಯನ ಪೂಜಿಸಿ, ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ.
(ವ.ಸಂ 104 .ಪು.ಸಂ 19).

ಬಸನಗೌಡ ಪಾಟೀಲ ಯತ್ನಾಳರಂತವರನ್ನು ಅಂದು ಬಸವಣ್ಣ ನೋಡಿ ರೋಸಿ ಹೋಗಿ ಈ ವಚನ ರಚನೆ ಮಾಡಿರಬೇಕು ಅನಿಸುತ್ತೆ.

ತನ್ನ ಅಧಿಕಾರದ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಕೋಮುವಾದವನ್ನು ಬೀತ್ತುತ್ತಾ, ತಾನೊಬ್ಬನೆ ಉಳಿಯಬೇಕು ಉಳಿದವರು ಅಳಿಯಬೇಕು ಎನ್ನುವ ಸಿದ್ದಾಂತವನ್ನು ಯಾವ ಧರ್ಮವು ಭೋಧಿಸಿಲ್ಲ. ಇಂತಹ ಸ್ವಾರ್ಥಿಗೆ ತಾನು ಹುಟ್ಟಿದ ಧರ್ಮದ ತತ್ವದ ಬಗ್ಗೆ ಗೊತ್ತಿಲ್ಲವೋ ಅಥವಾ ಗೊತ್ತಿದ್ದು, ಅಧಿಕಾರಕ್ಕಾಗಿ ಇಡೀ ಸಮುದಾಯವನ್ನು ಬಲಿಕೊಡುವ ಇವರನ್ನು ಲಿಂಗಾಯತ ಅಂತ ಹೇಗೆ ಹೇಳಬೇಕು?

ಲಿಂಗಾಯತ ತತ್ವ ಅಂದರೆ “ಲಿಂಗವೆ ಜಂಗಮವೆಂದು ನಂಬಿದೆ ಕೂಡಲಸಂಗಮದೇವ” ಎನ್ನುವ ತತ್ವ. ಕೊರಳಲ್ಲಿ ಲಿಂಗ ಕಟ್ಟಿ ಹೊರಗಡೆ ಅನಾಚಾರದ ಕೆಲಸ ಮಾಡುವ ಇವರಿಗೆಲ್ಲಿ ಗೊತ್ತು, ‘ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕೆ ಅಂಜಲೆ ಬೇಕು’ ಎನ್ನುವ ತತ್ವ. ‘ಜಂಗಮದೊಳಗೆ ಲಿಂಗಯ್ಯಾ ಸನ್ನಿಹಿತನಾಗಿಪ್ಪ’ ಎನ್ನುವ ಅಪ್ಪ ಬಸವಣ್ಣನ ತತ್ವ ಇವರಿಗೆಲ್ಲಿ ಅರ್ಥವಾಗುತ್ತೆ.

ಬಸವಣ್ಣನ ಈ ವಚನ ನಿಜಕ್ಕೂ ಇದು ಯತ್ನಾಳ ಅವರ ವ್ಯಕ್ತಿತ್ವಕ್ಕೆ ಕನ್ನಡಿಯಂತಿದೆ.

‘ಅವರವರ ಕಂಡಡೆ ಅವರವರಂತೆ ಸೂಳೆಗುಟ್ಟಿದವರ ತೋರದಿರಯ್ಯಾ” ಎನ್ನುವ ಸಾಲಂತೂ ಅಂದು ಅವರು ವೇದಿಕೆಯ ಮೇಲೆ ಆ ಅಪರಾಧಕ್ಕೆ ಸಾಕ್ಷಿಯಂತಿದೆ. ಕೊರಳಲ್ಲಿ ಗುಂಡಗಡಿಗಿ ಕಟ್ಟಿ ಅನ್ಯದೈವದ ಭಕ್ತರಾಗುವ ಇಂತಹ ಅಜ್ಞಾನಿಗಳನ್ನು ನೋಡಿ ಮರುಕಪಡುವಂತಿದೆ.

ಇಂದು ವೈದಿಕದ ತೋರಣವನ್ನು ತಿನ್ನುತ್ತಾ ಕೊಬ್ಬಿದ ಈ ಕುರಿಯನ್ನು ಬಲಿ ಕೊಡುತ್ತಾರೆ ಎನ್ನುವ ಪರಿವೇ ಇಲ್ಲದೆ ಬಸವಣ್ಣನವರಿಗೆ ದ್ರೋಹ ಬಗೆದಿದ್ದಾರೆ. ಮುಂದೊಂದು ದಿನ ಇದಕ್ಕೆ ತಕ್ಕುದಾದ ಬೆಲೆ ತೆತ್ತಲೇಬೇಕು. ಅವರೇ ಹೇಳತಾರಲ್ಲ ಕರ್ಮ ರಿಟರ್ನ್ ಅಂತ. ಆ ಕರ್ಮ ಅನುಭವಿಸಲೇಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *