ಸಾಣೇಹಳ್ಳಿ
ಇಲ್ಲಿನ ಶ್ರೀ ಶಿವಕುಮಾರ ಗ್ರೀಕ್ ಮಾದರಿಯ ಬಯಲು ರಂಗಮಂದಿರದಲ್ಲಿ ನಡೆದ `ವಚನ ಶಿವರಾತ್ರಿ’ಯ ಆಚರಣೆಯನ್ನು ವಿನೂತನವಾಗಿ ಬುಧವಾರ ಆಚರಣೆ ಮಾಡಲಾಯಿತು.
ಸಂಗೀತ ಶಿಕ್ಷಕ ನಾಗರಾಜ್ ಮತ್ತಿತರರು ಸೇರಿ ನಾಲ್ಕಾರು ದಿನಗಳ ಕಾಲ 850 ವಿದ್ಯಾರ್ಥಿಗಳಿಗೆ ವಚನ ಹಾಡುಗಾರಿಕೆಯ ತರಬೇತಿ ನೀಡಿದ್ದರು. ಎಲ್ಲ ವಿದ್ಯಾರ್ಥಿಗಳು ಹತ್ತು ವಚನಗಳನ್ನು ಒಂದೇ ಧ್ವನಿಯಲ್ಲಿ ಹಾಡಿದ `ವಚನ ಶಿವರಾತ್ರಿ’ಯ ಆಚರಣೆ ವಿಶೇಷ ಹಾಗೂ ವೈಶಿಷ್ಟ್ಯತೆಯಿಂದ ಕೂಡಿತ್ತು.