‘ಮಕ್ಕಳಿಗೆ ಶರಣರ ವಚನ ಕಲಿಸಿ, ಅವರು ದಾರಿ ತಪ್ಪುವದಿಲ್ಲ’

ಸೊಲ್ಲಾಪುರ

ಇಂದು ಎಲ್ಲೆಡೆ ಅಶಾಂತಿ ನಿರ್ಮಾಣ, ಮನ-ಮನೆಗಳು ದು:ಖದ ಗೂಡಾಗುತ್ತಿವೆ. ಮಕ್ಕಳು ಸಂಸ್ಕಾರದಿಂದ ದೂರ ಸರಿಯುತ್ತಿದ್ದಾರೆ. ಇಂಥ ಪರಸ್ಥಿತಿಯಲ್ಲಿ ಪ್ರತಿಯೊಬ್ಬರು ಶರಣ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಈಗಿನ ಮಕ್ಕಳಿಗೆ ಬಸವಾದಿ ಶರಣರ ವಚನಗಳು ಮತ್ತು ಅವುಗಳ ಅರ್ಥ ತಿಳಿಸಿದರೆ, ಅವರು ತಮ್ಮ ಜೀವನದಲ್ಲಿ ಎಂದಿಗೂ ದಾರಿ ತಪ್ಪುವದಿಲ್ಲ ಎಂದು ಲಾತೂರಿನ ಶರಣ ಡಾ. ಭೀಮರಾವ ಪಾಟೀಲ ಅಭಿಪ್ರಾಯ ಪಟ್ಟರು.

ಮಂಗಳವಾರ ರಾತ್ರಿ ಇಲ್ಲಿಯ ಸವೇರಾ ನಗರದಲ್ಲಿ ಬಸವೇಶ್ವರ ಮಂಡಳ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಸೊಲ್ಲಾಪುರ ಇವುಗಳ ಸಹಯೋಗದಲ್ಲಿ ಬಸವ ಜಯಂತಿ ನಿಮಿತ್ತ ವಿಶೇಷ ಉಪನ್ಯಾಸ ಮತ್ತು ಜೀವನಗೌರವ ಸತ್ಕಾರ ಸಮಾರಂಭದಲ್ಲಿ `ಬಸವಣ್ಣನವರ ವಿಚಾರದಿಂದ ಸಾಮಜಿಕ ಏಕತೆ ‘ವಿಷಯ ಕುರಿತು ಉಪಸ್ಯಾಸ ನೀಡುತ್ತಿದ್ದ ಅವರು, ಇಂದಿನ ಮಕ್ಕಳು, ಯುವಕರು ಜಾಣರಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಯಾವುದೇ ಕ್ಷೇತ್ರದಲ್ಲಿದ್ದರೂ ಅವರ ಶಿಕ್ಷಣದ ಜತೆಯಲ್ಲಿ ಶರಣರ ತತ್ವಗಳು, ವಚನಗಳು ಕಲಿಸಿದರೆ ಅವರು ಜೀವನದಲ್ಲಿ ಅಧೀರರಾಗುವದಿಲ್ಲ ಎಂದರು.

ಇನ್ನೂರ್ವ ಉಪನ್ಯಾಸಕ ಡಾ.ಬಿ.ಬಿ. ಪೂಜಾರಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಮಾತನಾಡಿದ ಅವರು, ಬಸವಣ್ಣ ಜಗತ್ತಿನ ಶ್ರೇಷ್ಠ ದಾರ್ಶನಿಕರು. ಅವರು ಕೇವಲ ಒಂದು ರಾಜ್ಯದ ಸಾಂಸ್ಕೃತಿಕ ನಾಯಕರಲ್ಲ. ಇಡಿ ಮನುಕುಲದ ಸಾಂಸ್ಕೃತಿಕ ನಾಯಕರು. ಜಯಂತಿ ನಿಮಿತ್ತ ಅವರ ವಿಚಾರಗಳು ತಿಳಿದುಕೊಂಡು ಅವುಗಳನ್ನು ಜೀವನಕ್ಕೆ ಆಳವಡಿಸಿ ಕೊಳ್ಳುವದು ಇಂದಿನ ಅವಶ್ಯಕವಾಗಿದೆ ಎಂದರು.

ಇಲ್ಲಿಯ ಪ್ರಥಮದರ್ಜೆ ಸರಕಾರಿ ಗುತ್ತಿಗೆದಾರ ಪರಮಾನಂದ ಅಲಗೊಂಡ ಪಾಟೀಲರು ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತೂರೆ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಶಿವಶರಣ ಪಾಟೀಲ, ಡಾ. ಶರಣಬಸವ ಹಿರೇಮಠ, ಶಿಕ್ಷಕ ನೇತಾರ ವೀರಭದ್ರ ಯಾದವಾಡ, ಸರಕಾರಿ ಗುತ್ತಿಗೆದಾರ ರೇವಣಸಿದ್ಧ ಬಿಜ್ಜರಗಿ, ಚನ್ನಬಸಪ್ಪ ಗುರುಭೆಟ್ಟಿ, ಜಾಲಿಮದ ಅಧ್ಯಕ್ಷ ಶಿವಾನಂದ ಗೋಗಾವ, ಅಶೋಕ ಭಾಂಜೆ, ನಿವೃತ್ತ ಮುಖ್ಯಗುರು ಲಕ್ಷ್ಮಣ ಚಲಗೇರಿ, ನಾಮದೇವ ಫುಲಾರಿ, ಮಹಿಳಾಧ್ಯಕ್ಷೆ ರಾಜಶ್ರೀ ಥಳಂಗೆ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮಕ್ಕೆ ದಾಸೋಹ ಮಾಡಿದ ಬಸವೇಶ್ವರ ಹೊಟೇಲ್‌ದ ಮಾಲೀಕ ಚನ್ನಬಸಪ್ಪ ಗುರುಭೆಟ್ಟಿ, ಜಯಶ್ರೀ ಗುರುಭೆಟ್ಟಿ ದಂಪತಿಗೆ ಗೌರವಿಸಲಾಯಿತು.

ಅಮರ ಪಾಟೀಲ ಯುವ ನಾಯಕರು ದ.ಸೊಲ್ಲಾಪುರ ಮಾತನಾಡಿ, ಸಮಾಜದ ಪ್ರಶ್ನೆ ಬಂದಾಗ ತಾವು ಅದನ್ನು ಬಗೆಹರಿಸುವಲ್ಲಿ ಮುಂದಾಳತ್ವ ವಹಿಸುವೆ. ಇಂತಹ ಕಾರ್ಯಕ್ರಮಗಳಿಗೆ ಬೆಂಬಲವಿದ್ದು, ಸಮಾಜ ಜಾಗೃತಿಯಂಥಹ ಕಾರ್ಯಕ್ರಮಗಳು ಯಾವತ್ತೂ ನಡೆಯುತ್ತಿರಬೇಕೆಂದರು.

ಶಂಕರಲಿಂಗ ಮಹಿಳಾ ಮಂಡಳಿ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಸದಸ್ಯರಿಂದ ಅಭಿನಯದ `ಅನುಭವ ಮಂಟಪದಲ್ಲಿ- ಅಕ್ಕ-ಅಲ್ಲಮರ ಸಂವಾದ’ ೧೦೦ ನೇ ರೂಪಕ ಜನಮನ ಸೆಳೆಯಿತು.

ಜಿಲ್ಲಾ ಉಪಾದ್ಯಕ್ಷ ರಾಜೇಂದ್ರ ಖಸಗಿ, ಕಾರ್ಯದರ್ಶಿ ನಾಗೇಂದ್ರ ಕೊಗನೂರೆ, ಜಾಲಿಮದ ಯುವಅಧ್ಯಕ್ಷ ಶಿವರಾಜ ಕೊಟಗಿ, ಅಕ್ಕಲಕೋಟ ತಾಲೂಕಾಧ್ಯಕ್ಷ ಸಚಿನ ಕಾಲಿಬತ್ತಿ, ದ.ಸೊಲ್ಲಾಪುರ ಅಧ್ಯಕ್ಷ ಡಾ.ಬಸವರಾಜ ನಂದರ್ಗಿ, ಶಶಿಕಲಾ ರಾಮಪೂರೆ, ಉ.ಸೊಲ್ಲಾಪುರ ಅಧ್ಯಕ್ಷ ಉಮೇಶ ಕಲ್ಯಾಣಿ, ವಾಗದರಿ ಅಧ್ಯಕ್ಷ ಶರಣಪ್ಪ ಮಂಗಾಣೆ, ಪೂಜಾ ಆಲೂರೆ, ಬಸವರಾಜ ಆಲೂರೆ, ಶಶಿಕಲಾ ರಾಮಪೂರೆ, ರಾಜೇಂದ್ರ ಹೌದೆ, ರಾಜಶೇಖರ ಲೋಕಾಪುರೆ ಸೇರಿದಂತೆ ಹಲವರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.

ಮೀನಾಕ್ಷಿ ಬಾಗಲಕೋಟೆ, ಮೀನಾಕ್ಷಿ ಥಳಂಗೆ ವಚನ ಗಾಯನ ಮಾಡಿದರು. ಅಧ್ಯಕ್ಷ ಶಿವಾನಂದ ಗೋಗಾವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಸುರೇಶ ಪೀರಗೊಂಡೆ ಕಾರ್ಯಕ್ರಮ ನಿರೂಪಿಸಿದರು.

ಜೀವನಮಾನದ ಗೌರವಕ್ಕೆ ಪಾತ್ರರಾದ ಸಿದ್ಧರಾಮ ಗುರುಭೆಟ್ಟಿ, ಪರಮಾನಂದ ಅಲಗೊಂಡಾ, ಶಿವಾನಂದ ಭರಲೆ, ಅಮರ ಪಾಟೀಲ, ಕಾಶಿನಾಥ ಭತಕುಣಕಿ, ತುಕಾರಾಮ ಕುದಳೆ, ಶಿವಲೀಲಾ ಗುಡ್ಡೋಡಗಿ ಇಂದುಮತಿ ಹಿರೇಮಠ, ಭಾಗ್ಯಶ್ರೀ ಸೊಡ್ಡಗಿ, ಗುರುಬಾಳ ಬಗಲೆ, ಸಂತೋಷ ಹರಕಾರೆ ಇವರನ್ನು ಬಸವ ಪ್ರತಿಮೆ, ವಿಭೂತಿ ನೀಡಿ ಗಣ್ಯರು ಗೌರವಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *