‘ಮಹಾರಾಷ್ಟ್ರದಲ್ಲಿದ್ದರೂ ಕನ್ನಡವನ್ನು ಉಳಿಸಿಕೊಳ್ಳಬೇಕು’

ಸೊಲ್ಲಾಪುರ ಬಸವ ಸೆಂಟರ್‌ನಿಂದ ವಿವಿಧ ರಂಗಗಳ ಸಾಧಕರಿಗೆ ಪ್ರಶಸ್ತಿ ವಿತರಣೆ

ಸೊಲ್ಲಾಪುರ

ಕನ್ನಡ ಶ್ರೀಮಂತ ಭಾಷೆ, ನಾವು ತಾಯಿಯನ್ನು ಪ್ರೀತಿಸುವಂತೆ ನಮ್ಮ ಮಾತೃ ಭಾಷೆಯನ್ನು ಗೌರವಿಸಿಬೇಕು. ನಾವು ಎಲ್ಲಿಯೇ ಇದ್ದರೂ ನಮ್ಮ ಭಾಷೆ ಕನ್ನಡವನ್ನು ಉಳಿಸಿಕೊಳ್ಳಬೇಕು ಎಂದು ಸೊಲ್ಲಾಪುರದ ನಿವೃತ ಕುಲಪತಿ ಡಾ.ವೀರೇಶಸ್ವಾಮಿ ಅಭಿಪ್ರಾಯಪಟ್ಟರು.

ಭಾನುವಾರ ಸಂಜೆ ಇಲ್ಲಿಯ ಲೋಕಮಾನ್ಯ ಟಿಳಕ ಸಾಂಸ್ಕೃತಿಕ ಸಭಾಭವನದಲ್ಲಿ ಆಯೋಜಿಸಿದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಭಾಷೆ ವಚನ ಸಾಹಿತ್ಯ, ಜಾನಪದ ಸಾಹಿತ್ಯದಿಂದ ಶ್ರೀಮಂತವಾಗಿದೆ. ನಾವು ಮಹಾರಾಷ್ಟ್ರದಲ್ಲಿದ್ದರೂ ಸರಿಯೇ ನಮ್ಮ ಮಾತೃ ಭಾಷೆಯ ಕುರಿತು ಎಲ್ಲರೂ ಅಭಿಮಾನ ಹೊಂದಬೇಕು. ಅದುವೇ ಕನ್ನಡಿಗರ ಶ್ರೀಮಂತಿಕೆ ಎಂದರು.

ಸನ್ಮಾನಿತರಾದ ಡಾ. ಗುರಲಿಂಗಪ್ಪ ಧಬಾಲೆ (ಬಸವ ಭುಷಣ), ಶ್ರೀಕಾಂತ ಮೋರೆ (ಬಸವರತ್ನ), ರಾಜಶೇಖರ ವಿಜಾಪೂರೆ (ಬಸವಶ್ರೀ), ಸಿದ್ಧಾರ್ಥ ಸರ್ಜೆ( ಆದರ್ಶ ಸಂಸ್ಥೆ), ಸಂಜಯ ಜಾಧವ (ಆದರ್ಶ ಪತ್ರಕರ್ತ), ಪರಶುರಾಮ ಲಾಂಬತೂರೆ ( ಬಸವತತ್ವ ಶ್ರೀ), ಧನಶ್ರೀ ಮಣೂರೆ (ಕಾಯಕಯೋಗಿ) ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿದವರು.

ಪ್ರಶಸ್ತಿ ಪಡೆದು ಮಾತನಾಡಿದ ಅಕ್ಕಲಕೋಟ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಗುರುಲಿಂಗಪ್ಪ ಧಬಾಲೆ, ಬಸವಣ್ಣನವರು ವಿಶ್ವದಾರ್ಶನಿಕರು. ಕಾಯಕ-ದಾಸೋಹಗಳ ಮಹಾಸಂಗಮ. ವಿಶ್ವತಾಯಿಯ ಪ್ರತಿರೂಪ ಹೊಂದಿರುವ ಬವಸಣ್ಣ ಸಮಾಜದಲ್ಲಿ ಸಮಾನತೆ ಕಾಯಕ, ಸ್ವಾಭಿಮಾನದಂತಹ ವಿಚಾರಗಳ್ನನು ಪ್ರತಿಪಾದಿಸಿದರು.

ಭತ್ತ ಸಂಸ್ಕಾರ ಹೊಂದಿ ಅನ್ನವಾಗುವಂತೆ, ಮನುಷ್ಯನ ಭಾವನೆ, ವಿಚಾರ, ಮನಸ್ಸು, ದೃಷ್ಠಿ, ಕೃತಿ, ಮಾತು ಸಂಸ್ಕಾರವಾದಾಗ ಮಾತ್ರ ಮನುಷ್ಯ ಸುಸಂಸ್ಕೃತನೆನಿಸಿಕೊಳ್ಳುತ್ತಾನೆ. ಮನುಷ್ಯನನ್ನು ಸುಂಸ್ಕೃತವಾಗಿಸುವ ಶಕ್ತಿ ವಚನಗಳಲ್ಲಿದೆ. ಸಾಂಸ್ಖೃತಿಕ ನಾಯಕ ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿರದೇ ಇಡೀ ವಿಶ್ವದ, ಮನುಕುಲದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಸೊಲ್ಲಾಪುರ ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ ಆರಂಭವಾಗಿದೆ. ಸದ್ಯ ಅದು ಕ್ರಿಯಾಶೀಲವಾಗಿರದೆ ತನ್ನ ಕಾರ್ಯ ಮಾಡುತ್ತಿಲ್ಲ, ಅದರ ಚಟುವಟಿಕೆಗಳು ಆರಂಭಿಸಲು ಬಸವ ಸೆಂಟರ್ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಸಾನಿಧ್ಯ ವಹಿಸಿದ ನಾಗಣಸೂರಿನ ಶ್ರೀಕಂಠ ಶಿವಾಚಾರ್ಯರು ಆಶಿರ್ವಚನ ನೀಡಿದರು.

ಬಸವ ಸೆಂಟರ್‌ನ ರಾಜೇಂದ್ರ ಮಾಯನಾಳೆ, ಬಾಬಾಸಾಹೇಬ ಕುಲಕರ್ಣಿ, ನೀಲಕಂಠ ಕೋನಾಪುರೆ, ತಾರದೇವಿ ದುಲಂಗೆ, ಸುವರ್ಣಲತಾ ತೇಲಸಂಗ, ಲೀಲಾವತಿ ಮಡಕಿ, ನರೇಂದ್ರ ಗಂಭಿರೆ, ವಕೀಲ ಆರ್.ಎಸ್. ಪಾಟೀಲ, ಬಾಳಾಸಾಹೇಬ ಬೋಗಾಡೆ, ಶಶಿಕಲಾ ರಾಮಪುರೆ ಸೇರಿದಂತೆ ಹಲವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *