ಬೆಳಗಾವಿ
ಮಹಾಂತೇಶ ನಗರದ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ಉಪನ್ಯಾಸ, ವಚನ ವಿಶ್ಲೇಷಣೆ ಹಾಗೂ ಸಾಮೂಹಿಕ ಪ್ರಾಥ೯ನೆ ಜರುಗಿತು.
ಪತ್ರಿಕೋದ್ಯಮ ವಿಷಯ ಕುರಿತು ಸಾಹಿತಿ, ವಕೀಲ ಸುನೀಲ ಸಾಣಿಕೊಪ್ಪ ಉಪನ್ಯಾಸ ನೀಡುತ್ತ, ಸಂವಿಧಾನದ 4ನೇ ಅಂಗ ಪತ್ರಿಕಾರಂಗವಾಗಿದೆ. ಕಾರ್ಯಾಂಗ, ಶಾಸಕಾಂಗಗಳು ತಪ್ಪಿ ನಡೆದರೆ ನ್ಯಾಯಾಂಗ ತಿದ್ದುವ ಕೆಲಸ ಮಾಡುತ್ತದೆ. ಆದರೆ ಈ ಮೂರು ಅಂಗಗಳು ತಪ್ಪಿದಾಗ ಸರಿದಾರಿಗೆ ತರುವ ಶಕ್ತಿ ಪತ್ರಿಕಾರಂಗಕ್ಕೆ ಇದೆ.
ಎಷ್ಟೇ ತಂತ್ರಜ್ಞಾನ ಆಧುನಿಕ ಸಂವಹನ ಮಾಧ್ಯಮಗಳು ಬಂದರೂ ಪತ್ರಿಕೆಗಳು ಬೆಳೆಯುತ್ತಿವೆ. ದೇಶದಲ್ಲಿ 1947ರಲ್ಲಿ 200ರಷ್ಟು ಇದ್ದ ಪತ್ರಿಕೆಗಳು ಇಂದು ಒಂದೂವರೆ ಲಕ್ಷ ಆಗಿವೆ. ಇದು ಕಾಗದದ ಓದಿಗೆ ಡಿಜಿಟಲ್ ತಂತ್ರಜ್ಞಾನ ಸಮವಲ್ಲ ಎಂಬುದಕ್ಕೆ ನಿದರ್ಶನ ಎಂದು ಹೇಳಿದರು.
ಟ್ಯಾಬ್ಲಾಯ್ಡ್ ಪಿತಾಮಹ ಪಿ. ಲಂಕೇಶ ಅವರ ಲಂಕೇಶ್ ಪತ್ರಿಕೆ ಮಾಡಿದ ಕ್ರಾಂತಿಯಂತೆ, ಪತ್ರಿಕೆಗಳು ಸಮಾಜ ಪರಿವರ್ತನೆ ಮಾಡಬೇಕು. ಇದಕ್ಕಾಗಿ ಸಂಪಾದಕರು, ಪತ್ರಕರ್ತರು ಆಳವಾದ ಅಧ್ಯಯನ ಮಾಡಿ ನಿರ್ಭೀತ, ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ಸತ್ಯವನ್ನು ಪ್ರತಿಪಾದಿಸಬೇಕು ಎಂದು ಸಾಣಿಕೊಪ್ಪ ಆಶಯ ವ್ಯಕ್ತಪಡಿಸಿದರು.
ಇದೇ ಸಂದಭ೯ದಲ್ಲಿ ನಂದೀಶ ಮೆಣಸಿನಕಾಯಿ ಅವರ ‘ಮುಂಜಾನೆ ಬೆಳಕು’ ಪಾಕ್ಷಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಆರಂಭದಲ್ಲಿ ಸುರೇಶ ನರಗುಂದ ಅವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಜಾಹ್ನವಿ ಘೊಪ೯ಡೆ, ಜಯಶ್ರೀ ಚಾವಲಗಿ, ಸುವಣ೯ ಗುಡಸ, ವಿ.ಕೆ.ಪಾಟೀಲ, ಆನಂದ ಕರಕಿ, ಬಸವರಾಜ ಬಿಜ್ಜರಗಿ ಮುಂತಾದ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಈರಣ್ಣಾ ದೇಯನ್ನವರ ಅವರು ಪತ್ರಿಕೆಯಲ್ಲಿ ಶೈಕ್ಷಣಿಕ, ಸಾಮಾಜಿಕ, ಕ್ರೀಡೆ, ಆರೋಗ್ಯ, ಸಾಹಿತ್ಯ ಹೀಗೆ ಎಲ್ಲ ವಿಷಯವಿರಬೇಕು. ಜನರಿಗೆ ಏನು ಅವಶ್ಯಕವಿದೆಯೋ ಅದನ್ನು ಸಮಾಜಕ್ಕೆ ಕೊಡುವಂತಹ ಕಾಯ೯ ಪತ್ರಿಕೆಯಿಂದಾಗಲಿ ಎಂದು ಹಾರೈಸಿದರು.
ನಂದೀಶ ಮೆಣಸಿನಕಾಯಿ ನಿಮ್ಮೆಲ್ಲರ ಸಲಹೆ ಸೂಚನೆ ಗಮನದಲ್ಲಿ ಇರಿಸಿ ಮುನ್ನೆಡೆಯುವೆ ಎಂದರು.
ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ 625 ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿ ಪ್ರಜ್ವಲ್ ತೋರಣಗಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಜ್ವಲ್ ತೋರಣಗಟ್ಟಿ ಮಾತನಾಡಿ, ಚಿಕ್ಕವನಿರುವಾಗ ಪ್ರತಿ ರವಿವಾರ ಲಿಂಗಾಯತ ಸ೦ಘಟನೆಯ ಪ್ರಾಥ೯ನೆಯಲಿೢ ಭಾಗವಹಿಸಿ ವಚನಗಳನ್ನು ಹೇಳುತ್ತಿದ್ದೆ, ನನ್ನ ಸಾಧನೆಗೆ ಬಸವತತ್ವವೇ ಪ್ರೇರಣೆಯಾಗಿದೆ. ಇಷ್ಟಲಿಂಗ ಪೂಜೆಯಿಂದ ನನ್ನ ಏಕಾಗ್ರತೆ ಹೆಚ್ಚಾಯಿತು, ವಚನಗಳನ್ನು ಕಂಠಪಾಠ ಮಾಡುವ ಮೂಲಕ ನೆನಪಿನ ಶಕ್ತಿ ಹೆಚ್ಚಾಯಿತು ಎಂದು ತಿಳಿಸಿದರು.

ದೇಯಣ್ಣವರ ಕುಟುಂಬ ದಾಸೋಹ ಸೇವೆಗೈದರು. ಸಿದ್ದಪ್ಪ ಸಾರಾಪುರಿ, ಅಕ್ಕಮಹಾದೇವಿ ತೆಗ್ಗಿ, ಶಿವಾನಂದ ಅರಬಾವಿ, ಮುಕ್ತಾ ಬಸವರಾಜ ದೇಯನ್ನವರ, ಸುರೇಖಾ ಕಿರಣ ದೇಯನ್ನವರ,ಶೋಬಾ ಹಾಗೂ ಮಂಜುಳಾ ದೇಯನ್ನವರ, ಕೆಂಪ್ಪಣ್ಣ ರಾಮಾಪುರಿ, ಮಹದೇವ ಕೆಂಪಿಗೌಡರ, ಬಾಬಣ್ಣ ತಿಗಡಿ, ಬಸವರಾಜ ಕರಡಿಮಠ, ಮ.ಕಾಡೆ ಗಂಗಪ್ಪ ಉಣಕಲ್, ಶೇಖರ ವಾಲಿಇಟಗಿ, ಗುರುಸಿದ್ದಪ್ಪ ರೇವಣ್ಣವರ, ಗದಿಗೆಪ್ಪ ತಿಗಡಿ, ಸೋಮಶೇಖರ ಕತ್ತಿ, ಮಹಾಂತೇಶ ಮೆಣಸಿನಕಾಯಿ , ಪ್ರಕಾಶ ಮರಲಿಂಗಣ್ಣನವರ, ಬಿ. ಬಿ.ಮಠಪತಿ, ಡಾ.ಅ.ಬ.ಇಟಗಿ, ಶಿವಾನಂದ ತಲ್ಲೂರ, ಜ್ಯೋತಿ ಬಾದಾಮಿ, ಕಮಲಾ ಗಣಚಾರಿ ಮುಂತಾದ ಶರಣ ಶರಣೆಯರು ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.