ಬೆಂಗಳೂರು
ಇಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿದೆ.
ಮುರುಘಾ ಮಠದ ವತಿಯಿಂದ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 3ರವರೆಗೆ ನಡೆಯುವ ಶರಣಸಂಸ್ಕೃತಿ ಉತ್ಸವದ ಅಂಗವಾಗಿ ಅಭಿಯಾನ ನಡೆಯಲಿದೆ.
ಬಸವ ಸಂಸ್ಕೃತಿ ಅಭಿಯಾನ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಐದು ಸಾವಿರ ಶರಣ-ಶರಣೆಯರ ಕಂಠಸಿರಿಯಿಂದ ಸಾಮೂಹಿಕ ವಚನಗಾನ ‘ವಚನ ಝೇಂಕಾರ’ ಕಾರ್ಯಕ್ರಮವೂ ಸೆಪ್ಟೆಂಬರ್ 28 ನಡೆಯಲಿದೆ.
ಸೆಪ್ಟೆಂಬರ್ 28 ಚಿಕ್ಕಬಳ್ಳಾಪುರದಲ್ಲಿ ನಡೆಯಬೇಕಿದ್ದ ಅಭಿಯಾನ ಮುಂದೆ ಹೋಗಬಹುದು ಅಥವಾ ರದ್ದಾಗಬಹುದು ಎಂದು ತಿಳಿದು ಬಂದಿದೆ.