ಲಿಂಗಾಯತರನ್ನು ಒಡೆದು ಆಳಲು ಸಿ. ಟಿ. ರವಿಯ ಹೊಸ ಕುತಂತ್ರ?

ಚಿಕ್ಕಮಗಳೂರಿನಲ್ಲಿ ಸಾಧು, ನೊಳಂಬ ಲಿಂಗಾಯತರು ಎಚ್ಚರದಿಂದಿರಲಿ

ದಾವಣಗೆರೆ

2023ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ತಮ್ಮಣ್ಣನ ಎದುರು ಬಿಜೆಪಿ ನಾಯಕ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಸೋಲುಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಹೊಳಲ್ಕೆರೆಯಲ್ಲಿ ಬುಧವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಸಂದರ್ಭದಲ್ಲಿ ನೊಳಂಬ ಸಮುದಾಯದ ಬೆಂಬಲದಿಂದ ನಾನು ಚುನಾವಣೆಯಲ್ಲಿ ನಾಲ್ಕು ಸಲ ಗೆಲ್ಲಲು ಸಾಧ್ಯವಾಗಿದೆ, ಮುಂದಿನ ಬಾರಿ ಚಿಕ್ಕಮಗಳೂರಿನಲ್ಲಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.

ನಾಲ್ಕು ಬಾರಿ ಗೆದ್ದಾಗ ನೆನಪಾಗದ ನೊಳಂಬ ಲಿಂಗಾಯತ ಸಮುದಾಯ ಮತ್ತು ಶಿವಯೋಗಿ ಸಿದ್ಧರಾಮೇಶ್ವರರು ಈಗ ಏಕಾಏಕಿ ಸಿ.ಟಿ. ರವಿಗೆ ನೆನಪಾಗಿರುವುದು ಯಾಕೆ?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಿ.ಟಿ. ರವಿ ವಿರುದ್ಧ ಗೆದ್ದ ತಮ್ಮಣ್ಣ ಸಾಧು ಲಿಂಗಾಯತ ಸಮುದಾಯಕ್ಕೆ ಸೇರಿದ ವ್ಯಕ್ತಿ.

ಸಿ.ಟಿ.ರವಿಯ ನಾಲ್ಕು ಸಲ ಗೆಲುವಿಗೆ ಪ್ರಮುಖ ಕಾರಣೀಕರ್ತರಾಗಿದ್ದ ತಮ್ಮಣ್ಣ 2023ರಲ್ಲಿ ಅವರ ವಿರುದ್ಧ ನಿಂತು ಗೆಲುವು ಸಾಧಿಸಿದ್ದರು.

ಇದೇ ರೀತಿ ಮುಂದಿನ ಚುನಾವಣೆಗಳಲ್ಲಿ ತಮ್ಮಣ್ಣ ತಮ್ಮ ಎದುರಾಳಿಯಾದರೆ ಲಿಂಗಾಯತ ಜನರ ಮತ ಬೀಳುವುದು ಕಷ್ಟ ಎಂದು ಸಿ ಟಿ ರವಿ ಅವರಿಗೆ ಅರ್ಥವಾಗಿದೆ. ಅದಕ್ಕೆ ಈಗ ಅದೇ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಇನ್ನೊಂದು ಪಂಗಡವಾದ ನೊಳಂಬ ಸಮುದಾಯವನ್ನು ಓಲೈಸುತ್ತಿದ್ದಾರೆ.

ಚಿಕ್ಕಮಗಳೂರಿನ ಲಿಂಗಾಯತ ಸಮುದಾಯವನ್ನು ಸಾಧು ವರ್ಸಸ್ ನೊಳಂಬ ಆಧಾರಿತವಾಗಿ ವಿಭಜಿಸುವ ಪ್ರಯತ್ನ ಶುರುವಾಗಿದೆ ಎಂದೇ ಇದರ ಅರ್ಥ.

ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಲಿಂಗಾಯತರ ವಿರುದ್ಧವಾಗಿ ಕೆಲಸ ಮಾಡಿರುವ ವ್ಯಕ್ತಿ ಸಿಟಿ ರವಿ.

ಬಸವಾದಿ ಶರಣರ ವಿರೋಧಿಯಾದ ವಚನ ದರ್ಶನ ಪುಸ್ತಕವನ್ನು ಮೊದಲು ಬಿಡುಗಡೆ ಮಾಡಿದ್ದು ಸಿಟಿ ರವಿ. ಲಿಂಗಾಯತ ಮಠಾಧೀಶರಿಗೆ ಹೊಲಸು ಮಾತನಾಡಿದ ಕನ್ನೇರಿ ಶ್ರೀಗಳ ಪರವಾಗಿ ನಿಂತಿದ್ದು ಇದೇ ಮನುಷ್ಯ. ಲಿಂಗಾಯತ ಹೆಣ್ಣು ಮಗಳು ಲಕ್ಷ್ಮಿ ಹೆಬ್ಬಾಳಕರ್ ಅವರ ಮೇಲೆ ಅವರು ಬಳಸಿದ ಭಾಷೆ ಲಿಂಗಾಯತರು ಇನ್ನೂ ಮರೆತಿಲ್ಲ. ಬಿಜೆಪಿ ಯಲ್ಲಿ ಯಡಿಯೂರಪ್ಪನವರ ಪ್ರಬಲ ವೈರಿಯೆಂದರೆ ಸಿಟಿ ರವಿ.

ಇಂತಹ ಅನೇಕ ಲಿಂಗಾಯತ ವಿರೋಧಿ ನಾಯಕರ ಭವಿಷ್ಯ ನಿಂತಿರುವುದು ಲಿಂಗಾಯತ ಮತಗಳ ಮೇಲೆಯೇ? ಇದನ್ನು ಲಿಂಗಾಯತರು ಅರ್ಥ ಮಾಡಿಕೊಂಡು ಜಾಗೃತರಾಗಬೇಕು. ಇವರ ಒಡೆದು ಆಳುವ ನೀತಿಗೆ ಬಲಿಯಾಗದೆ ಇವರನ್ನು ಹಿಡಿತದಲ್ಲಿಟ್ಟುಕೊಳ್ಳುವ ಕೆಲಸ ಶುರುಮಾಡಬೇಕು.

ಹಿಂದೂ ಹುಲಿ ಎಂದು ಬಿಂಬಿಸಿಕೊಳ್ಳಲು ಮಿತಿಯಿಲ್ಲದ ಕೋಮುವಾದಿ ರಾಜಕೀಯ ಮಾಡುವ ವ್ಯಕ್ತಿ ಸಿಟಿ ರವಿ. ಉರಿಗೌಡ, ನಂಜೇಗೌಡ ಎಂಬ ಎರಡು ಕಾಲ್ಪನಿಕ ಪತ್ರಗಳನ್ನು ಸೃಷ್ಟಿಸುವಲ್ಲಿ ಸಿಟಿ ರವಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಕುತಂತ್ರಕ್ಕೆ ಒಕ್ಕಲಿಗ ಸಮುದಾಯ ಬಲಿಯಾಗಲಿಲ್ಲ.

ಲಿಂಗಾಯತರು ಈಗ ಅದೇ ಜಾಣ್ಮೆ, ಜಾಗೃತಿ ತೋರಿಸಬೇಕಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
8 Comments
  • C T ರವಿಯ ಊಸರವಳ್ಳಿ ಮನಸ್ಸಿನ ಹುರಣ ಸರಿಯಾಗಿ ಹೇಳಿದ್ದೀರಿ.
    ಲೆಖನ ವಸ್ತು ನಿಷ್ಠೆಗೆ ಹತ್ತಿರವಾಗಿದೆ.
    ಬಸವ ಮಿಡಿಯಾ ಸಂಪಾದಕೀಯ ಮಂಡಳಿಗೆ ಅಭಿನಂದನೆಗಳು 🙏💐

  • ಸಿ. ಟಿ. ರವಿ ಯತ್ನಾಳ್ ಅವರು ಹಿಂದೂ ಹುಲಿ ಅಂತ ಹೇಳಿಕೊಳ್ಳುವುದಕ್ಕೂ ಮೊದಲೇ ಸ್ವಘೋಷಿತ ಹುಲಿ ಆಗಿದ್ದವರು. ಈಗ ಯತ್ನಾಳ್ ಅಂತಹ ದೊಡ್ಡ ಘರ್ಜನೆಯ ಸ್ವಘೋಷಿತ ಹುಲಿ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಇವರು ಮರಿ ಹುಲಿ ಆಗಿದ್ದಾರೆ ಅಥವಾ ಹಾಗೆ ಹೇಳಬಹುದು. ಇದಕ್ಕೆ ಯತ್ನಾಳ್ ಅವರ ಅನುಮತಿ ಬೇಕಿಲ್ಲ ಅಂದುಕೊಂಡಿದ್ದೇನೆ. ಇವರ ರಾಜಕೀಯ ಮೂಲವೇ ದತ್ತ ಪೀಠ. ಎಲ್ಲಿಯೂ ಇಲ್ಲದ ಪಾದುಕೆಗಳನ್ನು ಬೆಳ್ಳಿ ಹೊದಿಕೆ ಹಾಕಿಸಿ ತರೀಕೆರೆ ಆಚಾರರೊಬ್ಬರ ಹತ್ತಿರ ಮಾಡಿಸಿ ಅವರಿಗೆ ಕೊಡಲು ದುಡ್ಡಿಲ್ಲದೆ ಅವರನ್ನು ಬೆದರಿಸಿ ಕಳುಹಿಸಿದ್ದ ಪ್ರಸಂಗವನ್ನು ಇವರ ಒಂದು ಕಾಲದ ಸಂಗಾತಿ ದಿವಂಗತ ಮಹೇಂದ್ರ ಕುಮಾರ್ ಹೇಳಿಕೊಂಡಿದ್ದರು. ಇಲ್ಲದ್ದನ್ನು ನಡೆಯದ್ದನ್ನು ನಡೆದಿರುವ ಹಾಗೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿ ಸೃಷ್ಟಿ ಮಾಡುವದು ಇವರಿಗೆ ಕರಾತಲಾಮಲಕ ಆಗಿದೆ. ಇಂತಹವರ ಪಡೆ ಕಟ್ಟಿಕೊಂಡು ಹಿಂದುತ್ವ ರಾಜಕೀಯದಲ್ಲಿ ಬೆಳೆದ ಯಡಿಯೂರಪ್ಪನವರು ಎಲ್ಲರನ್ನೂ ಅಪ್ಪಿ ಒಪ್ಪಿಕೊಳ್ಳುವ ಸಾಂಸ್ಕೃತಿಕ ಹಿನ್ನೆಲೆಯ ಲಿಂಗಾಯತರ ತಲೆಗಳನ್ನು ಹಿಡಿದು ಸನಾತನಿಗಳ ಕೈಗೆ ಕೊಟ್ಟಿರುವುದರಿಂದ ಹೊರಬರಲು ಚಡಪಡಿಸಬೇಕಾಗಿದೆ. ಇವರನ್ನು ಬೆಳೆಸಿ ಲಿಂಗಾಯತರ ಮತ ಕೊಡಿಸಿದ ಯಡಿಯೂರಪ್ಪನವರಿಗೆ ತಿರುಮಂತ್ರ ಹಾಕಿದ ರವಿಗೆ ಅವರು ಯಡಿಯೂರಪ್ಪನವರು ಬುದ್ದಿ ಕಲಿಸಿದ್ದು ಇತಿಹಾಸ. ಹಾಗಾಗಿ ಈಗ ಸಾದು ಲಿಂಗಾಯತರನ್ನು ಮತ್ತು ನೊಳಂಬ ಲಿಂಗಾಯತರ ಮಧ್ಯೆ ಆಟ ಶುರುವಿಟ್ಟುಕೊಂಡಿದ್ದಾರೆ. ಎಲ್ಲಾ ಲಿಂಗಾಯತರು ಬಸವತತ್ವದ ಅಡಿಯಲ್ಲಿ ಒಂದಾಗಿ ಬಸವ ವಿರೋಧಿ ರಾಜಕಾರಣ ಮಾಡುವವರೆಲ್ಲರಿಗೂ ಬುದ್ಧಿ ಕಲಿಸುವ ಸಮಯ ಬಂದಿದೆ. ಲಿಂಗಾಯತ ಮಠಾಧೀಶರಿಗೆ ಸೊಳೆಮಕ್ಕಳು ಮತ್ತು ಅವರೆಲ್ಲರಿಗೂ ಮೆಟ್ಟಿನಲ್ಲಿ ಹೊಡೆಯಬೇಕು ಅಂತ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕನ್ನೇರಿ ಸ್ವಾಮೀಜಿಯವರನ್ನು ಇಂತಹವರು ಹೊತ್ತುಕೊಂಡು ಕುಣಿಯುತ್ತಿದ್ದಾರೆ. ಎಲ್ಲಾ ಒಳಪಂಗಡಗಳಲ್ಲಿ ಹರಿದು ಹಂಚಿಹೋಗಿರುವ ಲಿಂಗಾಯತರು basava ತತ್ವದ ಅಡಿಯಲ್ಲಿ ಒಂದಾಗಿ ಇವರಿಗೆಲ್ಲಾ ಬುದ್ಧಿ ಕಲಿಸಬೇಕಾಗಿದೆ.

  • ಬಸವ ದ್ವೇಶಿ ಗಳಿಗೆ ಉಳಿಗಾಲವೇ ಇಲ್ಲ -ಪರಮಾಪೂಜ್ಯ ತಪಸ್ವಿ ಹಾರಾಕೂಡ ಚನ್ನವೀರ ಶಿಚಾರ್ಯರು.
    ಅದರಂತೆ ಸಿ.ಟಿ ರವಿ ಗೆ ಭವಿಷ್ಯ ವಾಗಲಿ, ಆಯುಷ್ಯ ವಾಗಲಿ ಇಲ್ಲವೆಂದು ತಿಳಿಡುಬರುತ್ತದೆ.

    • ಸಾದರ ಲಿಂಗಾಯತ, ನೊಣಬ ಲಿಂಗಾಯತರು ಬಸವಣ್ಣನವರ ಅನುಯಾಯಿಗಳು. ಅವರು ಎಂದೂ ಬಸವ ವಿರೋದಿಗಳಿಗೆ ಬೆಂಬಲಿಸುವುದಿಲ್ಲ.

  • ಈ ಆರ್.ಎಸ್.ಎಸ್ ಮತ್ತು ಬಿಜೆಪಿಗರು ಮೊದಲಿನಿಂದಲೂ ಲಿಂಗಾಯತವನ್ನು ವಿರೋಧಿಸುತ್ತಲೇ ಇದ್ದಾರೆ.

  • ಈ ಸಿ ಟಿ ರವಿ ಎನ್ನುವ ಆರ್ ಎಸ್ ಎಸ್ ನ ಕಾಲಿನ ಆಳು ಇಲ್ಲ ದ ಹುಸಿಪಾದುಕೆ ತೋರಿಸಿ ಜನರಲ್ಲಿ ಕೋಮುದ್ವೇಷವನ್ನು ಹರಡಿ ಹುಸಿಹಿಂದುತ್ವವನ್ನು ಹರಡಿ ಅಲ್ಲೋಲಕಲ್ಲೋಲ ಎಬ್ಬಿಸಿದ ಇವನಿಗೆ ಜನರು ಚೆನ್ನಾಗಿ ಪಾಠಕಲಿಸಿದ್ದಾರೆ.

  • ಈ ಆರ್.ಎಸ್.ಎಸ್ ಮತ್ತು ಬಿಜೆಪಿಗರು ಮೊದಲಿನಿಂದಲೂ ಲಿಂಗಾಯತವನ್ನು ವಿರೋಧಿಸುತ್ತಲೇ ಇದ್ದಾರೆ.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು