ಭಾಲ್ಕಿ:
ಬಸವಾದಿ ಶರಣರ ಕ್ರಾಂತಿ ಭೂಮಿಯಾದ ಬಸವಕಲ್ಯಾಣದ ಅನುಭವಮಂಟಪಕ್ಕೆ ನಾಡಿನ ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಭೇಟಿ ನೀಡಿದರು.
ವಿಶ್ವಗುರು ಬಸವಣ್ಣನವರು ೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಮೊಟ್ಟಮೊದಲ ಪ್ರಜಾಸಂಸತ್ತು ನೀಡಿದರು. ಅನುಭವಮಂಟಪದ ಮೂಲಕ ಬಸವಣ್ಣನವರು ಕಾಯಕ, ದಾಸೋಹ ಮೌಲ್ಯಗಳನ್ನು ನೀಡಿದರು. ನಮ್ಮ ವಿರಕ್ತಮಠಗಳಿಗೆ ವೇದಿಕೆಯಾಗಿ ಅನುಭವ ಮಂಟಪದ ಶೂನ್ಯಪೀಠವನ್ನು ಸ್ಥಾಪಿಸಿದರು. ಕಲ್ಯಾಣ ಕ್ರಾಂತಿಯ ನಂತರ ಯಡಿಯೂರ ಸಿದ್ಧಲಿಂಗೇಶ್ವರರು ಅನುಭವ ಮಂಟಪ ಪರಂಪರೆ ಜಂಗಮಗೊಳಿಸಿದರು.

ಕಲ್ಯಾಣ ನೆಲದಲ್ಲಿ ಅನುಭವ ಮಂಟಪಕ್ಕೆ ಮರುಜೀವ ನೀಡಿದವರು ಭಾಲ್ಕಿ ಹಿರೇಮಠದ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು. ಅವರು ಸ್ವತಃ ಕಲ್ಲು ಮಣ್ಣು ಹೊತ್ತು ಅನುಭವ ಮಂಟಪ ಕಟ್ಟಿದರು. ಅವರ ಕರಕಮಲ ಸಂಜಾತರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಮತ್ತು ಬಸವಕಲ್ಯಾಣ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಪೂಜ್ಯರು ಅಭಿಮಾನದ ಮಾತುಗಳನ್ನು ನುಡಿದರು.
ಭಾಲ್ಕಿಯ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ಎಲ್ಲ ಪೂಜ್ಯರಿಗೆ ಸ್ವಾಗತ ಕೋರಿ, ಒಳಬಳ್ಳಾರಿಯ ಪೂಜ್ಯರು ಅನುಭವ ಮಂಟಪಕ್ಕೆ ನೂರಾರು ಭಕ್ತಾದಿಗಳನ್ನು ಕರೆದುಕೊಂಡು ಬಂದಿರುವುದು ನಮಗೆ ಸಾಸಿವೆ ಸಾಗರ ಹರಿದಷ್ಟು ಖುಷಿ ತಂದುಕೊಟ್ಟಿದೆ. ಪೂಜ್ಯರು ತ್ರಿಕಾಲ ಲಿಂಗಪೂಜೆ ನಿಷ್ಠೆ, ಬಸವತತ್ವ ನಿಷ್ಠಾವಂತರು ಆಗಿದ್ದಾರೆ. ಅವರ ಬಸವಭಕ್ತಿ ಯುವ ಮಠಾಧೀಶರಿಗೆ ಮಾದರಿಯಾದದ್ದು.
ಇಳಿವಯಸ್ಸಿನಲ್ಲಿ ಪೂಜ್ಯರು ಕಲ್ಯಾಣಕ್ಕೆ ಆಗಮಿಸಿರುವುದು ನಮಗೆ ನಿಜಕ್ಕೂ ಆನಂದವಾಗಿದೆ. ಅವರ ಕೃಪಾಶೀರ್ವಾದ ನಮ್ಮ ಶ್ರೀಮಠದ ಮೇಲೆ ಇರಲೆಂದು ಪ್ರಾರ್ಥಿಸುತ್ತೇವೆ ಎಂದು ನುಡಿದರು.

ಪಂಚಮಸಿದ್ಧಲಿಂಗ ಸ್ವಾಮಿಗಳು ನೇರಡಗಂ, ಶಿವಲಿಂಗ ಮಹಾಸ್ವಾಮಿಗಳು ಖೇಳಗಿ, ಬಸವಲಿಂಗ ಮಹಾಸ್ವಾಮಿಗಳು ಒಳಬಳ್ಳಾರಿ, ಮಹಾಂತಲಿಂಗ ಶಿವಾಚಾರ್ಯರು ಕರೆಗುಡ್ಡ, ತೋಂಟದಾರ್ಯ ಸ್ವಾಮಿಗಳು ಅಡವಿ ಅಮರೇಶ್ವರ, ಚನ್ನಬಸವ ಮಹಾಸ್ವಾಮಿಗಳು ಮಂಠಾಳ, ನಿರಂಜನ ಸ್ವಾಮಿಗಳು ಮೈಸೂರು, ಸಿದ್ಧಲಿಂಗ ಸ್ವಾಮಿಗಳು ರಾಯಚೂರು, ಶಶಿಕುಮಾರ ಸ್ವಾಮಿಗಳು ಕಲಬುರಗಿ, ಘನಲಿಂಗದೇವರು ಹುಬ್ಬಳ್ಳಿ, ನಿರುಪಾದ ದೇವರು ಕಲಬುರಗಿ, ಶಿವಾನಂದ ಸ್ವಾಮಿಗಳು ಬಸವಕಲ್ಯಾಣ, ಬಸವದೇವರು ಮುಂತಾದ ಪೂಜ್ಯರು ಮಾತ್ತು ಶಶಿಧರ ಕೋಸಂಬೆ ಅವರು ಉಪಸ್ಥಿತರಿದ್ದರು.

ಓಂಶ್ರೀಗುರುಬಸವಲಿಂಗಾಯನಮಃ
ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು ತಿಮ್ಮಾಪೂರ ತಾ.ರಾಮದುರ್ಗ ಜಿ.ಬೆಳಗಾವಿ ಶ್ರೀ ಮ.ನಿ.ಪ್ರ.ಸ್ವ.ಜ. ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅಸೂಟಿ ಅರಹಟ್ಟಿ ಮೆಣಸಗಿ ಖಜೂರಿ
ತತ್ವದ ಕಾವು, ನಿಜನಿಶ್ಚಯದ ಬಿದಿರು, ಭಕ್ತಿಜ್ಞಾನ ವೈರಾಗ್ಯ.
ಇಂತೀ ತ್ರಿವಿಧ ಮುಪ್ಪುರಿಗೂಡಿದ ನೂಲಿನಲ್ಲಿ
ಕಟ್ಟುಗಳ ಕಟ್ಟಿ, ಅಹಂಕಾರ ಗರ್ವದ ನಿರುತವ ಬಿಡಿಸಿ,
ಭಕ್ತಿ ಸತ್ಯಕ್ಕೆ ತಲೆವಾಗುವಂತೆ ಭಾಗ ಒಪ್ಪವ ಮಾಡಿ,
ಕರ್ಕಶ ಮಿಥ್ಯವೆಂಬ ಸಿಗುರೆದ್ದಡೆ ಕೆತ್ತಿಹಾಕಿ,
ಛತ್ರಕ್ಕೆ ಹೆಚ್ಚುಕುಂದಿಲ್ಲದ ವರ್ತುಳಾಕಾರಕ್ಕೆ
ಚಿತ್ತವಸ್ತುವಿನಲ್ಲಿ ತೊಲಗದಂತೆ ಶಾಶ್ವತವಾಗಿ,
ಅಷ್ಟಾವಧಾನಂಗಳೆಂಬ ಕಪ್ಪಡವ ಕವಿಸಿ,
ಚತುಷ್ಟಯಂಗಳೆಂಬ ಸೆರಗು ತಪ್ಪದೆ ಕತ್ತರಿಸಿ,
ಚಿತ್ತ ಹೆರೆಹಿಂಗದ ಲೆಕ್ಕಣಿಕೆಯಲ್ಲಿ ಚಿತ್ರವ ಬರೆದು,
ಅಧಮ ಊರ್ಧ್ವವೆಂಬುದಕ್ಕೆ ಬಲು ತೆಕ್ಕೆಯಿನಿಕ್ಕಿ,
ಸರ್ವವರ್ಮಂಗಳೆಂಬ ಬೆಣೆಗೀಲನಿಕ್ಕಿ,
ಹಿಡಿವುತ್ತಿದ್ದೆ ಛತ್ರವ ನೆಳಲಿಲ್ಲದಂತೆ,
ಐಘಂಟೇಶ್ವರಲಿಂಗಕ್ಕೆ ಬಿಸಿಲುಮಳೆಗಾಳಿಗೆ
ಹೊರಗಾಗಬೇಕೆಂದು.
ಅಸೂಟಿಶ್ರೀಫಲಹಾರ ಶಿವಯೋಗಿಗಳವರ
ಜೀವನ ದರ್ಶನ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ವಿಶ್ವ ವಚನ ಸಾಹಿತ್ಯ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ತಪೋಭೂಮಿಹೊಸಕೇರಿಬಸವನಗರ
ಜೀವನ್ಮುಕ್ತನಾದ ಶರಣಂಗೆ
ಸಂಚಿತ ಪ್ರಾರಬ್ಧ ಆಗಾಮಿಯೆಂಬ
ಕರ್ಮಂಗಳನರಿವ ತೆರೆನಾವುದುಯೆಂದಡೆ:
ಜ್ಞಾನಾಗ್ನಿಯಿಂದ ಸುಡಬಲ್ಲ ಸುಂಕಿನಂತೆ ಉರಿದು ಹೋಗೂದು.
ಪ್ರಾರಬ್ಧ ಉಂಡಲ್ಲದೆ ತೀರದು.
ಆಗಾಮಿಯಂದಧಿಕಾರಿಯಪ್ಪುದರಿಂದ ಫಲಿಸುತ್ತಿರದು ನೋಡಾ.
ಅದೆಂತೆಂದಡೆ:
ಜ್ಞಾನಾಗ್ನಿಯಿಂದ ದಗ್ಧವಾದ ಕರ್ಮವೆ ಪ್ರಾರಬ್ಧವನೀವುದರಿಂದ
ಮುಂದೆ ದೇಹೋತ್ಪತ್ತಿಯನು ಮಾಡಲುಳ್ಳುದೆಂದಡೆ
ಹುರಿದ ಚಣಕಾದಿ ಬೀಜವು ಭೋಗಕ್ಕೆ ಯೋಗ್ಯವಲ್ಲದೆ
ಅಂಕುರೋತ್ಪತ್ತಿಗೆ ಕಾರಣವಿಲ್ಲದಂತೆ,
ಜ್ಞಾನಿಯ ಕರ್ಮವೆ ಪ್ರಾರಬ್ಧದಿಂದ
ಜನ್ಮಾಂತರಕ್ಕೆ ಕಾರಣವಲ್ಲ ನೋಡಾ.
ಆ ಶರಣನು ದೃಷ್ಟವೆಂಬ ಪರಿಚಾರಕನಿಂದತ್ತಮಾದ
ಶ್ರಕ್ಚಂದನಾದಿ ಭೋಗಸ್ವೀಕಾರವಿರ್ದೊಡಂ
ನಿಜಭೃತ್ಯುವಿನೊಳ್ಸುರತಂಗೈವ ಪುಂಜಲಿಯಂತೆ
ಪರಾಕದೆಯಪ್ಪುದು ನೋಡಾ.
ಆ ಶರಣನು ಮೂಢನಂತೆ
ಕಲಾಭಿಘ್ಞತೆಯೊಳ್ಮೌನಗೊಂಡಿರ್ದೊಡಂ ಕಲ್ಪಿತ ದ್ವೈತಪರ
ಶ್ರುತಿವಾಕ್ಯವೈಶ್ರುತಿವಿಷಯದೊಳಸಮನಪ್ಪ ನೋಡಾ.
ಶರಣ ತಾನು ಪ್ರಸ್ತುವನರಿಯದ ಬಹುಭಾಷಣನಂತೆ
ಏನನುಡಿದೊಡೆದೆ ಗೂಢಭಿಪ್ರಾಯ ಗರ್ಭಿತವಾದ
ಸತ್ಯದ್ವೈತನಿಷ್ಠೆ ನಿಗಮಾದಿ ಪ್ರಾಯಮಪ್ಪುದು ನೋಡಾ.
ಆ ಶರಣನು ಆಚಾರ್ಯನಂತೆ
ಶಿಷ್ಯರನುಪದೇಶಿಸುತಿರ್ದೊಡೆಯಾತ್ಮನು ನಿತ್ಯಮುಕ್ತನಪ್ಪುದರಿಂದ
ಬೋಧ್ಯ ಬೋಧಕತ್ವವೆ ಮಾಯಾರಚನೆಯೆಂಬ ಕೃತನಿಶ್ಚಯದಿಂ
ಗಗನವಾಣಿಯಂತೆ ಗುರುತ್ವಾಭಿಮಾನ ಹಿತನಪ್ಪ ನೋಡಾ.
ಆತನು ಉನ್ಮತ್ತನಂತೆ ಅನುಚಿತವಕ್ತ್ರವಾದೊಡಂ
ದ್ವೈತಭಾವವಳಿದಾತ್ಮರಾಮನಪ್ಪುದರಿಂದ
ಸುರತಾಂತ್ಯಸಮಯದೊಳಕಾಮಶಕ್ತಿಮಿಥುನವಾಕ್ಯದಂತೆ
ನಂಬಿ ದೇಹ ವಿಷಯವಪ್ಪುದು ನೋಡಾ.
ಆ ಶರಣನು ಪಿಶಾಚಗ್ರಹವಿಷ್ಟನಂತೆ
ಗಳಗಳನೆ ನಡೆದೊಡಂ ಪೂರ್ಣೈಕಸ್ವಭಾವನಿಷ್ಠನಪ್ಪುದರಿಂದ
ವಿರಯಗಮನದಂತೆ ಪ್ರಾಪ್ಯನುಸಂಧಾನನಪ್ಪ ನೋಡಾ.
ಆ ಶರಣನು ಪುತ್ರಯೋಗನುಭವವನುಳ್ಳ ಗ್ರಾಮ್ಯಜನಕನಂತೆ
ಶೋಕಂಗೈಯಲದೆ ಸರ್ವೇಂದ್ರಿಯಂಗಳು
ಬ್ರಹ್ಮಾಂಶಗಳೆಂದು ಆಳೋಚನಂಗೈಯಲದೆ
ಕಲ್ಪಿತ ಸಾಧಕಾವಸ್ಥೆಯೊಳ್ದಂಡಿತ ಸರ್ವೆಂದ್ರಿಯಧರ್ಮವಿಷಯವಾದ
ಕರುಣರಸವಪ್ಪುದು ನೋಡಾ.
ಆ ಶರಣನು ವಿಕೃತಬಹುರೂಪವಾದರುಶನ
ವಿನೋದದೊಳಟ್ಟಹಾಸಂಗೈದೊಡಂ
ವಿಚಿತ್ರ ಪುಣ್ಯಪಾಪಾದಿ ವ್ಯವಹಾರಮಂ ಸತ್ಯವೆಂದು ಪ್ರತಿಪಾದಿಪ
ಮೀಮಾಂಸಾದಿ ದರ್ಶನ ವಿಷಯವಾದ
ಪರಿಹಾಸಮಪ್ಪುದು ನೋಡಾ.
ಶರಣ ತಾನು ವಿಟನಂತೆ ಸ್ತ್ರೀಲೋಲನಾಗಿರ್ದೊಡಂ
ಪೂರ್ಣೈಕಸ್ವಭಾವನಪ್ಪುದರಿಂದ
ನಿಜಾನಂದಾನುಭಾವಿಯಪ್ಪ ನೋಡಾ.
ಆ ಶರಣನು ಶತ್ರುವಿನಂತೆ ಆವಾತನಂ ಕ್ರೋಧದಿಂ
ಸಂತಾಪಬಡಿಸಿದಡಂ
ಕ್ಞೇತ್ರದಾಹಾಗ್ನಿಯಂತೆ ವಿಶಿಷ್ಟಫಲಸಂಪತ್ತಿಗಾತನ
ಆಶ್ರಯಂ ಮಾಡುವಾತನೆಂದು ವಿಶ್ವಾಸಂಗೈವುದು ನೋಡಾ.
ಅಂತಪ್ಪ ಶರಣ ಆವ ಕಾಲದಲ್ಲಿಯು ಶರೀರಂಬಡೆಯದೆ
ಸಚ್ಚಿದಾನಂದ ಬ್ರಹ್ಮವಪ್ಪುದರಿಂದ
ಆ ಶರಣನ ದೇಹವೆ ಕೈಲಾಸವಪ್ಪುದು ತಪ್ಪದು ಕಾಣಾ
ಶೂನ್ಯನಾಥಯ್ಯ. ವಿಶ್ವಬಸವಧರ್ಮ ವಿಶ್ವಕಾಯಕ ಪ್ರತಿಜ್ಞೆಯ ಸಂಕೇತ ಜಾಣ ಜಾಣೆಯರ ಬದುಕಿನ ಬುತ್ತಿ ಪಾತಾಳದಿಂದತ್ತ ಮಾತ ಬಲ್ಲವರಿಲ್ಲ,
ಗಗನದಿಂದ ಮೇಲೆ ಅನುಭಾವ ತಾನಿಲ್ಲ.
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ:
ಹೊರಗಣ ಹೊರಗನು ಅರಿಯಬಲ್ಲವರಿಲ್ಲ.
ಹಿಂದಣ ಹಿಂದನು, ಮುಂದಣ ಮುಂದನು,
ತಂದು ತೋರಿದ ನಮ್ಮ ಗುಹೇಶ್ವರನು.ಎತ್ತಣ ಮಾಮರ ಎತ್ತಣ ಕೋಗಿಲೆ!
ಎತ್ತಣಿಂದೆತ್ತ ಸಂಬಂಧವಯ್ಯಾ!
ಬೆಟ್ಟದ ಮೇಲಣ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು,
ಎತ್ತಣಿಂದೆತ್ತ ಸಂಬಂಧವಯ್ಯಾ!
ಗುಹೇಶ್ವರಲಿಂಗಕ್ಕೆಯೂ ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯಾ. ಅನುಭವ ಮಂಟಪ ಸಾಂಸ್ಕೃತಿಕ ನಿಜ ಸಂದೇಶ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ವಿಶ್ವ ಬಸವ ಧರ್ಮ ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ಹೊಸಕೇರಿಬಸವನಗರ ನಿಜದ ನಿಲುವು ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳವರು ಅಸೂಟಿ ಹೊಸಕೇರಿಬಸವನಗರ ಅರಹಟ್ಟಿ ಮೆಣಸಗಿ ಖಜೂರಿ