ಬಾಯಲ್ಲಿ ಬಸವ, ಮನದಲ್ಲಿ ವಿಷ ತುಂಬಿಕೊಂಡಿರುವ ಪುಡಾರಿ

ಯಾರದೋ ಸಮ್ಮೋಹಿನಿಗೆ ಒಳಗಾಗಿ ಬಸವ ಜಯಂತಿ ಕೆಡಿಸುವ ಉದ್ದೇಶದಿಂದ ಬಂದ ಮಾಜಿ ಶಾಸಕ ತೆಲ್ಕೂರ್

ಚಿಂಚೋಳಿ

ಕಳೆದ ಶುಕ್ರವಾರ ಚಿಂಚೋಳಿಯಲ್ಲಿ ಬಸವ ಜಯಂತೋತ್ಸವ ಸಮಾರಂಭ ಅತ್ಯಂತ ಅದ್ಭುತವಾಗಿ ನೆರವೇರಿತು. ಈ ಕಾರ್ಯಕ್ರಮಕ್ಕಾಗಿ ಯುವಕರು ಕಳೆದ ಎರಡು ತಿಂಗಳುಗಳಿಂದ ಹಗಲಿರಳು ದುಡಿದಿದ್ದರು.

ತೆಲ್ಕೂರ್

ಇಂತಹ ಕಾರ್ಯಕ್ರಮಕ್ಕೆ ಸಮಾಜದ ಮುಖಂಡರು, ಬಸವ ಸಂಘಟನೆಗಳ ಬಗ್ಗೆ ಚೆನ್ನಾಗಿ ಮಾತನಾಡುತ್ತಾರೆ ಎಂಬ ಉದ್ದೇಶದಿಂದ ಸೇಡಂ ತಾಲೂಕಿನ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಅವರನ್ನು ಗೌರವಯುತವಾಗಿ ಮುಖ್ಯ ಅತಿಥಿಯಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿ, ಮನೆಯತನಕ ಹೋಗಿ ಪ್ರೀತಿಯಿಂದ ಕರೆದು ಬಂದಿದ್ದೆವು. ಅವರು ನಮ್ಮ ಕರೆಗೆ ಓಗೊಟ್ಟು ಬಸವ ಜಯಂತಿ ಸಮಾರಂಭಕ್ಕೆ ಬಂದದ್ದು ಸಂತೋಷವಾಯಿತು.

ಆದರೆ ಬಸವ ಜಯಂತಿಯ ಸಮಾರಂಭದಲ್ಲಿ ಬಸವಾದಿ ಶರಣರ ವಿಚಾರಗಳು, ವಚನ ಸಾಹಿತ್ಯ ವಿಷಯದ ಮೇಲೆ ಮಾತಾಡಿ ಸೈ ಎನಿಸಿಕೊಳ್ಳಬೇಕಾಗಿತ್ತು. ಆದರೆ ಅವರಾಗಿಯೇ ರೇಣುಕರ ಭಾವಚಿತ್ರ ಹಾಕಿಲ್ಲ ಎಂದು ಗಲಾಟೆಯೆಬ್ಬಿಸಿದರು.

ಚಿಂಚೋಳಿ ಬಸವಾಭಿಮಾನಿಗಳು ಕಷ್ಟಪಟ್ಟು ಸಮಾರಂಭ ಮಾಡಿರುವಿರಿ‌, ನಿಮಗೆ ಧನ್ಯವಾದ ಎಂದು ಹೇಳುವ ಬದಲು ನೀವು ಡೋಂಗಿ ಲಿಂಗಾಯತರೆಂದು ಹೇಳಿ ಬಾಯಿ ಚಪಲ ತೀರಿಸಿಕೊಂಡಿರಿ. ನೀವು ಈ ಸಮಾರಂಭದ ಆನಂದವನ್ನು ನೋಡಿ ಕಣ್ತುಂಬಿಕೊಳ್ಳಲು ಬಂದವರಂತೆ ಕಾಣದೆ, ಸಮಾರಂಭ ಕೆಡಿಸಲು ಪೂರ್ವಯೋಜಿತವಾಗಿ ಬಂದಂತೆ ಅಲ್ಲಿದ್ದವರಿಗೆಲ್ಲಾ ಅನಿಸದೇ ಇರಲ್ಲಿಲ್ಲ.

ಚಿಂಚೋಳಿ ಲಿಂಗಾಯತರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ, ಸಮಾಜದ ವಿಷಯ ಬಂದಾಗ ನಾವೆಲ್ಲರೂ ಒಂದಾಗಿ ಈ ಹಿಂದೆ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ. ಬಸವ ರೇಣುಕರಾದಿಯಾಗಿ ಎಲ್ಲಾ ಮಹಾತ್ಮರ ಜಯಂತಿಗಳಲ್ಲಿ ನಮ್ಮ ಭಿನ್ನಾಭಿಪ್ರಾಯ ಮರೆತು ಸಮಾಜದ ಒಗ್ಗಟ್ಟಿಗಾಗಿ ಕೈ ಜೋಡಿಸಿದವರಿದ್ದೇವೆ.

ನಾವು ಅವರಿವರೆನ್ನದೇ ಜಾತಿ, ಪಂಗಡ ನೋಡದೇ ಎಲ್ಲಾ ಜಾತಿ ಸಮುದಾಯದವರನ್ನು ಆಮಂತ್ರಿಸಿದ್ದೆವು, ಅವರೆಲ್ಲ ಬಂದಿದ್ದರು. ಪಂಚಾಚಾರ್ಯ ಗುರುಗಳು ವೇದಿಕೆಯಲ್ಲಿದ್ದರು. ಅವರು ಯಾರೂ ಈ ವಿಷಯ ಮಾತಾಡಲೇ ಇಲ್ಲ. ಆದರೆ ನೀವಾಗಿಯೇ ವಿವಾದಾತ್ಮಕ ವಿಷಯಗಳನ್ನು ಎಳೆತರಲು ಕಾರಣವೇನು. ನಿಮಗಿಂತ ಮುಂಚಿತವಾಗಿ ಆ ವೇದಿಕೆಯಲ್ಲಿ ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ಯಾರೂ ಮಾತಾಡಲಿಲ್ಲ. ನೀವೇಕೆ ಈ ಬಗ್ಗೆ ತಕರಾರು ತೆಗೆದಿರಿ?

ಇದರಿಂದ ನಿಮ್ಮ ಉದ್ದೇಶ ಸಭೆ ಕೆಡಿಸುವುದಾಗಿತ್ತು ಎಂದು ನಮಗೆ ಅರಿವಾಯಿತು, ಬಸವಾಭಿಮಾನಿಗಳ ಮನಸ್ಸು ನೋಯಿಸುವುದಾಗಿತ್ತು. “ನೀವು ಲಿಂಗಾಯತರೆಲ್ಲಾ ಡೋಂಗಿ ಲಿಂಗಾಯತರು” ಎಂದು ಹೇಳಿ ಹೋದೆರಲ್ಲಾ, ಹಾಗಾದರೆ ನೀವ್ಯಾರು?

ನೀವೂ ಪೂರ್ವಯೋಜಿತವಾಗಿ ಯಾರದೋ ಸಮ್ಮೋಹಿನಿಗೆ ಒಳಗಾಗಿ ಮಾತಾನಾಡಲು ಬಂದ ಪುಢಾರಿ ಎಂದು ನಮಗೆ ಅನಿಸದೇ ಇರಲ್ಲಿಲ್ಲ. ಏನೇ ಆದರೂ ಈ ವೇದಿಕೆಯನ್ನು ಬಸವಾದಿ ಶರಣರ ವಿಚಾರ ಹೇಳಲು ಬಳಸಬೇಕಾಗಿದ್ದ ನೀವು ರಾಜಕೀಯ ವೇದಿಕೆಯಾಗಿ ಬಳಸಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ.

ಚಿಂಚೋಳಿ ಲಿಂಗಾಯತರು ಪ್ರಬುದ್ಧರಿದ್ದೇವೆ. ನಿಮ್ಮ ದುರುದ್ದೇಶ ಏನೆಂಬುದು ನಮಗೆ ಸ್ಪಷ್ಟವಾಗಿ ಗೊತ್ತಾಗಿದೆ. ಬಾಯಲ್ಲಿ ಬಸವ ಮನದಲ್ಲಿ ವಿಷ ತುಂಬಿಕೊಂಡ ನೀವು ಮೊದಲು ಬದಲಾಗಿ. ಸಮಾಜವನ್ನು ರಾಜಕೀಯಕ್ಕಾಗಿ ದುರ್ಬಳಕೆ ಕೊಳ್ಳಬೇಡಿ ಎಂಬುದು ನಮ್ಮ ಕಳಕಳಿಯ ಮನವಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
12 Comments
  • ಇನ್ವಿಟೇಷನ್ ಕಾರ್ಡ್ ನಲ್ಲಿ ರೇವಣಸಿದ್ದೇಶ್ವರ ಫೋಟೋ ಹಾಕಿ ಎಲ್ಲರನ್ನು ಕರೆದು ಫಂಕ್ಷನ್ ಸ್ಟೇಜ್ ಮೇಲೆ ರೇವಣಸಿದ್ದೇಶ್ವರ ಫೋಟೋ ಹಾಕದೆ ಇರುವದು ಈ ಅವಾಂತರಕ್ಕೆ ಕಾರಣ

  • ನಾವು ನಾಲ್ಕೇ ಜನ ಉಳಿದುಕೊಂಡರು ಸಮಸ್ಯೆ ಇಲ್ಲ, ಎ ವೀರಶೈವರಿಂದ ದೂರ ಇರುವದೇ ಒಳ್ಳೆಯದು. ವೀರಶೈವರು ಲಿಂಗಾಯತಕ್ಕೆ convert ಆದವರು ಎಂದು 1941 ರಲ್ಲಿನ ಹೈದೆರಾಬಾದಿನ census ರಿಪೋರ್ಟ್ ಹೇಳುತ್ತದೆ.

    • ವೀರಶೈವರ ಜೊತೆ ಕಾರ್ಯಕ್ರಮ ಮಾಡಿದರೆ ಮುಂದೆ ಇನ್ನೂ ಗಲಾಟೆಗಳು ಹೆಚ್ಚಾಗುತ್ತವೆ.
      ಅವರಿಂದ ದೂರ ಇದ್ದಷ್ಟು ಉತ್ತಮ.

  • ನಾನು ವಿಡಿಯೋ ನೋಡಿದೆ ಪ್ರಬುದ್ಧ ರಾಜಕಾರಣಿಗೆ ಇರಬೇಕಾದ ಯಾವ ಲಕ್ಷಣಗಳು ಇರಲಿಲ್ಲ……. ಇನ್ನು ಮುಂದಾದರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕಾಗಿದೆ…. ಬಸವ ಜಯಂತಿ ಯಲ್ಲಿ ರೇಣುಕರ ಭಾವಚಿತ್ರ ಹಾಕಲಿಲ್ಲ ಎಂದು ತಗಾದೆ ಸೂಕ್ತವಲ್ಲ…

  • ಅಭಿಪ್ರಾಯ ವ್ಯಕ್ತಪಡಿಸಿದ ರೀತಿ ಸರಿಯಿಲ್ಲ.

Leave a Reply

Your email address will not be published. Required fields are marked *

ನಂದಿಕುಮಾರ ಪಾಟೀಲ್ ಅವರು ಚಿಂಚೋಳಿಯಲ್ಲಿ ವಕೀಲರಾಗಿ ಕಾಯಕ ಮಾಡುತ್ತಿದ್ದಾರೆ.