ಇಲ್ಲಿನ ಬಸವ ಕೇಂದ್ರದ ಸದಸ್ಯರು ದೀಪಾವಳಿ ಹಬ್ಬವನ್ನು ವಚನ ದೀಪೋತ್ಸವ ಹಾಗೂ ಚೆನ್ನಬಸವಣ್ಣನವರ ಜಯಂತಿಯನ್ನಾಗಿ ನಗರದ ವಿವಿಧ ವ್ಯವಹಾರ ಸಂಸ್ಥೆ, ಅಂಗಡಿ, ಮನೆಗಳಲ್ಲಿ ಆಚರಿಸಿದರು.
ಮುಂಜಾನೆಯಿಂದ ಮಧ್ಯಾಹ್ನದವರೆಗೆ ನಗರದಾದ್ಯಂತ ಸುಮಾರು ಮೂವತ್ತೈದು ಕಡೆಗಳಲ್ಲಿ ವಚನಾಧಾರಿತ ಪೂಜಾ ಕಾರ್ಯಕ್ರಮ ನಡೆದವು.
ವಚನಮೂರ್ತಿ ಬಸವಂತ ತೋಟದ ಹಾಗೂ ಬಸವಕೇಂದ್ರದ ಸದಸ್ಯರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.