ಹುಣಸ್ಯಾಳ ಗ್ರಾಮದಲ್ಲಿ ಬಸವತತ್ವಾಧಾರಿತ ವಚನ ಕಲ್ಯಾಣ ಮಹೋತ್ಸವ

ಬಸವನಬಾಗೇವಾಡಿ

ಬಸವನಬಾಗೇವಾಡಿ ತಾಲ್ಲೂಕಿನ ಹುಣಸ್ಯಾಳ ಗ್ರಾಮದ ಸಿದ್ಧಾರೂಢ ಮಂಗಲ ಭವನದಲ್ಲಿ ಉಪನ್ಯಾಸಕರಾದ ಡಾ. ಬಸವರಾಜ ಹಡಪದ ಮತ್ತು ಸೃಷ್ಟಿ ಅವರ ವಚನ ಕಲ್ಯಾಣ ಮಹೋತ್ಸವವು ಬಸವತತ್ವಾಧಾರಿತವಾಗಿ
ಮೇ 24, 25 ನೆರವೇರಿತು.

24ರಂದು ಬೆಳಿಗ್ಗೆ 7 ಗಂಟೆಗೆ ಶಿವಯೋಗ ಪ್ರಾತ್ಯಕ್ಷಿಕೆ ನಡೆಯಿತು. 20 ಜನರು ಹೊಸದಾಗಿ ಲಿಂಗದೀಕ್ಷೆ ಪಡೆದುಕೊಂಡರು. ಅನುಭಾವಿ ಪಿ. ರುದ್ರಪ್ಪ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪೂಜ್ಯ ದೇವಾನಂದ ಶರಣರು ಮಹಾ ಬೋಧಾಲಯ ಬೆನಕನಹಳ್ಳಿ ಇವರು ಸಾನ್ನಿದ್ಯ ವಹಿಸಿದ್ದರು.

ನಂತರ ವರನ ಮನೆಯಲ್ಲಿ ಕಲ್ಯಾಣ ಮಹೋತ್ಸವದ ಕಾರ್ಯಕ್ರಮಗಳು ಜರುಗಿದವು. ಸಂಜೆ 6.00 ಗಂಟೆಯಿಂದ ನೂತನ ವಧು ವರರ ಕಲ್ಯಾಣಮಹೋತ್ಸವದ ಶರಣ ಸಮ್ಮತಿ ಕಾರ್ಯಕ್ರಮ ಜರುಗಿತು. ಸುತ್ತಮುತ್ತಲಿನ ಬಸವ ಭಕ್ತರು ಪಾಲ್ಗೊಂಡಿದ್ದರು. ಶರಣ ರುದ್ರೇಶ ಕಿತ್ತೂರ್ ಪ್ರಾಸ್ತಾವಿಕವಾಗಿ ಮಾತನಾಡಿ ಶರಣರ ಸಾರ್ಥಕ ದಾಂಪತ್ಯಗಳನ್ನು ಉದಾಹರಿಸಿದರು.

ಪಿ. ರುದ್ರಪ್ಪ ಅನುಭಾವ ನುಡಿಯುತ್ತ, ಈ ರೀತಿಯ ಕಲ್ಯಾಣ ಗ್ರಾಮದಲ್ಲಿ ಬಹುತೇಕ ಇದೇ ಪ್ರಥಮ ಬಾರಿ ನಡೆಯುತ್ತಿರಬಹುದು. ದಾಂಪತ್ಯ ಎಂಬುದು ಸೃಷ್ಟಿಯ ಆಧಾರಸ್ಥಂಭ. ಅದು ಅರ್ಥಪೂರ್ಣವಾಗಿ ನಡೆದರೆ ಇಡೀ ಸಮಾಜಕ್ಕೆ ಒಳಿತು ಉಂಟು ಮಾಡುತ್ತದೆ ಎಂದು ತಿಳಿಸಿದರು.

ಇಲಕಲ್ಲನ ಪೂಜ್ಯ ಗುರುಮಹಾಂತ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಸುಧೀರ್ಘ ಆಶೀರ್ವಚನ ನೀಡಿ, ದಾಂಪತ್ಯದ ಬಗ್ಗೆ ವಿವರಣೆ ನೀಡಿ ಶುಭಕೋರಿದರು.

ಮುದ್ದೇಬಿಹಾಳ, ಬಸವನಬಾಗೇವಾಡಿ ಶರಣ ಬಳಗ ಸಕ್ರಿಯವಾಗಿ ಮಹೋತ್ಸವದಲ್ಲಿ ಭಾಗವಹಿಸಿತು.

25 ರಂದು ಬೆಳಿಗ್ಗೆ 7.00 ಗಂಟೆಗೆ ವಧುವರರು ಇಷ್ಟಲಿಂಗ ಪೂಜೆಯ ಮೂಲಕ ಮಾಂಗಲ್ಯಧಾರಣ ಮತ್ತು ರುದ್ರಾಕ್ಷಿ ಧಾರಣ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಪೂಜ್ಯ ದೇವಾನಂದ ಶರಣರು ಮತ್ತು ಸ್ವತಂತ್ರ ಶರಣರು ಹಾಜರಿದ್ದು ನೂತನ ದಂಪತಿಗಳನ್ನು ಆಶೀರ್ವದಿಸಿದರು.

ಬೆಳಿಗ್ಗೆ 10.00 ಗಂಟೆಗೆ ದಂಪತಿಗಳ ಶುಭಾರತಿ ಕಾರ್ಯಕ್ರಮ ಜರುಗಿತು. ಪೂಜ್ಯ ದೇವಾನಂದ ಶರಣರು ಬೆನಕನಹಳ್ಳಿ ಮಹಾಬೋಧಾಲಯ, ಶರಣ ಬಸವರಾಜ ಸ್ವಾಮಿ ರಾಯಚೂರು ಅವರು ನೇತೃತ್ವ ವಹಿಸಿದ್ದರು. ವಿವಿಧ ಮಠಾಧೀಷರು, ನಾಡಿನ ಅನುಭಾವಿಗಳು, ಭಾಗವಹಿಸಿ ದಂಪತಿಗಳಿಗೆ ಶುಭಹಾರೈಸಿದರು.

ಪಿ. ಬಸವರಾಜ ಕುರುಕುಂದ, ವೀರಯ್ಯಸ್ವಾಮಿ ಚಿತ್ರಾಲಿ, ಮುದ್ದನಗೌಡ ಬಸಾಪುರ, ಶಶಿಧರ ಬಸಾಪುರ, ಅಮರೇಶ್ ಗುರಿಕಾರ ಸಿಂಧನೂರ, ಗಣೇಶ ಸಿಂಧನೂರ ಅವರು ಕಲ್ಯಾಣ ಮಹೋತ್ಸವದ ಕಾರ್ಯಕ್ರಮವನ್ನು ಸೂಸೂತ್ರವಾಗಿ ನಡೆಸಿಕೊಟ್ಟರು. ವಚನ ಮಂಗಲದೊಡನೆ ನಿಜಾಚರಣೆಯ ಕಲ್ಯಾಣ ಮಹೋತ್ಸವ ಮಂಗಲಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *