ಬೆಂಗಳೂರು
ಜರ್ಮನಿಯ ಬರ್ಲಿನ್ ನಗರದ ನಿವಾಸಿ 55-ವರ್ಷದ ಶೇನೈ ಗಾಲ್ ಶಿವರಾತ್ರಿಯ ದಿನ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮಿಯವರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.
ಸದ್ಯ ಕೇರಳದಲ್ಲಿರುವ ಶೇನೈ ಅವರಿಗೆ ಕರೆ ಮಾಡಿದಾಗ ಅವರ ಬಾಯಿಂದ ಬಂದ ಮೊದಲ ಪದ ‘ಶರಣು ಶರಣಾರ್ಥಿಗಳು’. (ಅವರು ಬಸವ ಮೀಡಿಯಾದಿಂದ ಕರೆ ಬರುವ ನಿರೀಕ್ಷೆಯಲ್ಲಿದ್ದರು. ಬಸವ ತತ್ವದವರು ಒಬ್ಬರಿಗೊಬ್ಬರು ನಮಸ್ಕಾರದ ಬದಲು ಶರಣು ಎನ್ನುವುದೂ ಅವರಿಗೆ ಗೊತ್ತಿತ್ತು.)