ದಾವಣಗೆರೆ
ವೀರಶೈವರು ಲಿಂಗಾಯತರು ಭೌತಿಕವಾಗಿ ಮಾನವರು ಮಾನವರು ಅನ್ನುವ ಕಾರಣಕ್ಕೆ ನಾವೇಲ್ಲರೂ ಒಂದೇ ಇದರಲ್ಲಿ ಎರಡು ಮಾತಿಲ್ಲ.
ಆದರೆ ತಾತ್ವಿಕವಾಗಿ ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆಯೇ ಇದರಲ್ಲೂ ಸಹ ಎರಡು ಮಾತಿಲ್ಲ.
ಲಿಂಗಾಯತರು ಏಕ ದೇವೋಪಸಕರು. ವೀರಶೈವರು ಬಹುದೇವೋಪಸಕರು.
ಲಿಂಗಾಯತರು ವೇದ ಶಾಸ್ತ್ರ ಪುರಾಣಗಳನ್ನು ಒಪ್ಪುವುದಿಲ್ಲ. ವೀರಶೈವರು ವೇದ ಶಾಸ್ತ್ರ ಪುರಾಣಗಳನ್ನು ಒಪ್ಪುತ್ತಾರೆ.
ಲಿಂಗಾಯತರದು ಗುಡಿ ಸಂಸ್ಕೃತಿ ಅಲ್ಲ. ವೀರಶೈವರದು ಗುಡಿ ಸಂಸ್ಕೃತಿ.
ಲಿಂಗಾಯತರು ಹೋಮ ಹವನ ಅಭಿಷೇಕ ಮಾಡುವುದಿಲ್ಲ. ವೀರಶೈವರು ಮಾಡುತ್ತಾರೆ.
ಲಿಂಗಾಯತರು ಸಮಾನತೆ ಒಪ್ಪುತ್ತಾರೆ. ವೀರಶೈವರು ಸಮಾನತೆ ಒಪ್ಪುವುದಿಲ್ಲ.
ಪಂಚಾಚಾರ್ಯರು ವಿರಕ್ತ ಮಠಾಧೀಶರಿಗಿಂತ ನಾವು ದೊಡ್ಡವರು ಅಂತ ಎತ್ತರದಲ್ಲಿ ಕೂರುತ್ತಾರೆ.
ಲಿಂಗಾಯಿತರಲ್ಲಿ ಜಂಗಮ ಜಾತಿ ಅಲ್ಲ ಯಾರು ಬೇಕಾದರೂ ಜಂಗಮ ಆಗಬಹುದು.
ವೀರಶೈವರಲ್ಲಿ ಜಂಗಮ ಅನ್ನುವುದು ಒಂದು ಜಾತಿ ಯಾರು ಬೇಕಾದರೂ ಜಂಗಮ ಆಗಲು ಬರುವುದಿಲ್ಲ.
ಲಿಂಗಾಯಿತರಲ್ಲಿ ದೇವರು ಮತ್ತು ಭಕ್ತರ ಮಧ್ಯೆ ಮಧ್ಯವರ್ತಿಗಳ ಅವಶ್ಯಕತೆ ಇರುವುದಿಲ್ಲ. ವೀರಶೈವರಲ್ಲಿ ಭಕ್ತ ಮತ್ತು ದೇವರು ಮಧ್ಯೆ ಮಧ್ಯವರ್ತಿಗಳ ಅವಶ್ಯಕತೆ ಇದೆ.
ಲಿಂಗಾಯತರು ಪಂಚಾಂಗ ನೋಡುವುದಿಲ್ಲ. ವೀರಶೈವರು ಪಂಚಾಂಗ ನೋಡುತ್ತಾರೆ.
ಲಿಂಗಾಯತರಿಗೆ ವಚನಗಳೇ ಮೂಲ ಆಕರ. ವೀರಶೈವರಿಗೆ ಸಿದ್ಧಾಂತ ಶಿಖಾಮಣಿ ಆಕರ.
ಲಿಂಗಾಯತರಿಗೆ ಬಸವಾದಿ ಶರಣರೇ ಆಧಾರ. ವೀರಶೈವರಿಗೆ ಕಾಲ್ಪನಿಕ ಆಚಾರ್ಯರು ಆಧಾರ.
ಹಾಗಾಗಿ ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆಯೇ.