ಬೀದರ್
ತಾಲ್ಲೂಕಿನ ಚಾಂಬೋಳ ಗ್ರಾಮದ ಹಿರೇಮಠದಲ್ಲಿ ಮಾರ್ಚ್ 9 ರಿಂದ 15 ರವರೆಗೆ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಎಂಬ ಘೋಷಣೆ ಅಡಿಯಲ್ಲಿ ಮಕ್ಕಳಿಗಾಗಿ ಶರಣ ಸಂಸ್ಕೃತಿ ಶಿಬಿರ ನಡೆಯಿತು.
ಗ್ರಾಮದ ಎಂಜಿನೀಯರ್, ಉತ್ಸಾಹಿ ಯುವಕ ಸುಭಾಷ್ ಆಮ್ಲಾಪುರೆ ಮತ್ತು ಗೆಳೆಯರು ವಚನ ಮೂರ್ತಿ ಶ್ರೀಶೈಲ ಮಸೂತೆ ಅವರ ಮಾರ್ಗದರ್ಶನದಲ್ಲಿ ಶಿಬಿರ ಆಯೋಜಿಸಿದ್ದರು.






