ನಂಜನಗೂಡು
ಪಟ್ಟಣದ ವಿದ್ಯಾನಗರ ಬಡಾವಣೆಯ ಶರಣ ದಂಪತಿಗಳಾದ ನಂದಕುಮಾರಿ ಹಾಗೂ ಮಹೇಶ ಅವರುಗಳು ನೂತನವಾಗಿ ಕಟ್ಟಿರುವ “ಅರವಿನ ಮನೆ” ಗುರುಪ್ರವೇಶವು ಲಿಂಗಾಯತ ನಿಜಾಚರಣೆಯಂತೆ ನೆರವೇರಿತು.
ನವಗ್ರಹ ಪೂಜೆ, ಹೋಮ-ಹವನ, ಹಸುಬಿಡುವುದು, ಒಲೆಯ ಮೇಲೆ ಹಾಲು ಉಕ್ಕಿಸುವುದು, ಲಕ್ಷ್ಮಿಗೊಂಬೆಯನ್ನು ಕೂರಿಸುವಂತಹ ಅನ್ಯರ ಆಚರಣೆಗಳನ್ನು ಇಲ್ಲಿ ಕೈಬಿಡಲಾಯಿತು.
ಬಸವಾದಿ ಶರಣರು ಹೇಳಿಕೊಟ್ಟ ಇಷ್ಟಲಿಂಗಪೂಜೆ ಮಾಡಿ, ಬಸವ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ, ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ಬಸವಾದಿ ಶರಣರ ವಚನ ಕಟ್ಟುಗಳನ್ನು ತಲೆಮೇಲೆ ಹೊತ್ತುಕೊಂಡು, ಬಸವಾದಿ ಶರಣರಿಗೆ ಜಯಘೋಷ ಹಾಕುತ್ತ ಹೊಸ ಮನೆ ಪ್ರವೇಶಿಸುವುದರ ಮೂಲಕ ಗುರುಪ್ರವೇಶ ಮಾಡಲಾಯಿತು.