ಜಹೀರಾಬಾದ
ವಿಶ್ವಗುರು ಬಸವೇಶ್ವರರ 12ನೇ ಶತಮಾನದ ಕಾರ್ಯಗಳ ಸ್ಫೂರ್ತಿಯಿಂದಲೇ ಸರ್ಕಾರ, ಜನಪ್ರತಿನಿಧಿಗಳು ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಎಂ. ರೇವಂತ ರೆಡ್ಡಿ ಹೇಳಿದರು.
ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದನಲ್ಲಿ ವಿಶ್ವಗುರು ಬಸವೇಶ್ವರ ಪ್ರತಿಮೆಯನ್ನು ಅನಾವರಣ ಮಾಡಿ ಅವರು ಮಾತನಾಡಿದರು.
 
							 
			     
									 
									 
									 
									 
									 
									 
									 
									








 
                                