ಸಾಣೇಹಳ್ಳಿ:
ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ಈಚೆಗೆ ಆಯೋಜಿಸಿದ್ದ ಶ್ರೀ ಶಿವಕುಮಾರ ಕಲಾಸಂಘ ಹಾಗೂ ಶಿರಗುಪ್ಪ ತಾಲ್ಲೂಕಿನ ಸಿರಿಗೆರೆಯ ಧಾತ್ರಿ ರಂಗ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸಿ. ಸಿದ್ಧರಾಮಣ್ಣ ಭಾಲ್ಕಿ ರಚನೆಯ, ಜಗದೀಶ್ ಆರ್. ಜಾನಿ ಅವರ ನಿರ್ದೇಶನದ ತಿಂಗಳ ನಾಟಕ “ಶಿವಶರಣ ಹರಳಯ್ಯ” ನಾಟಕ ಪ್ರದರ್ಶನಗೊಂಡಿತು.

ಸಾನಿಧ್ಯವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಾಟಕ ವೀಕ್ಷಿಸಿ ಸಂತಸಪಟ್ಟರು.
