ಶ್ರೀಶೈಲದ ಸಾರಂಗ ಮಠದ ಮೇಲೆ ನಡೆದ ದಾಳಿ

ಸಾರಂಗ ಮಠ

ಹಿಂಸೆಯಿಂದ ಪಂಚಾಚಾರ್ಯರಲ್ಲಿ ಲೀನವಾದ ಸಾರಂಗ ಮಠಗಳು

ಶ್ರೀಶೈಲದ ಸಾರಂಗ ಮಠದ ಮೇಲೆ ನಡೆದ ದಾಳಿ

ನಾಥ ಜೋಗಿಗಳು, ಸಿದ್ದರು ವೀರಶೈವರಲ್ಲಿ ಲೀನವಾದರು

ಒಗಟಾಗಿರುವ ಕೂಡಲಸಂಗಮದ ಸಾರಂಗ ಮಠ

ನಾಥ ಜೋಗಿಗಳ ಸಾರಂಗ ಮಠಗಳು ನಾಥ ಸಿದ್ದರ, ವೀರಮಾಹೇಶ್ವರರ ದಾಳಿಗೆ ತುತ್ತಾಗಿ ಹಸ್ತಾಂತರವಾದವು. ಮರುಳಸಿದ್ದ ಕವಿಯ ‘ಗುರುಲಿಂಗಜಂಗಮ ಚಾರಿತ್ರ’ದಲ್ಲಿ (17ನೇ ಶತಮಾನ) ಇದರ ವರ್ಣನೆಯಿದೆ.

ನಾಥ ಸಿದ್ದರ ಗುರು ಪಡುವೀಡು ಸ್ವಾಮಿಯು ತನ್ನ ವೀರಮಾಹೇಶ್ವರ ಪಡೆಯೊಂದಿಗೆ ಕುಂಭಕೋಣಕ್ಕೆ ಹೋಗಿ ಅಲ್ಲಿ ಜೋಗಿಗಳನ್ನು ಬಗ್ಗು ಬಡೆದು ಸಾರಂಗ ಮಠವನ್ನು ವಶಪಡಿಸಿಕೊಂಡನು.

ನಂತರ ಬಾಳೇಹೊನ್ನೂರಿಗೆ ಹೋಗಿ ವೀರೇಶ್ವರನನ್ನು ಪೂಜಿಸಿ, ಅಲ್ಲಿನ ಪೀಠಾಧಿಪತಿ ಹಿರಿಯ ಕುಮಾರದೇವನ ಜೊತೆಗೂಡಿ ಶ್ರೀಶೈಲಕ್ಕೆ ಹೋಗಿ ಸಾರಂಗ ಮಠದಲ್ಲಿ ಬೀಡುಬಿಟ್ಟನು.

ಅಲ್ಲಿ 12,000 ಜೋಗಿಗಳನ್ನು ನಾಶಮಾಡಿ ಸಾರಂಗ ಮಠವನ್ನು ವಶಪಡಿಸಿಕೊಂಡು, ವೀರಶೈವವನ್ನು ಪ್ರತಿಷ್ಠಾಪಿಸಿದನು. ಈ ಮಠಗಳು ಕ್ರಮೇಣ ಪಂಚಾಚಾರ್ಯ ಪರಂಪರೆಯಲ್ಲಿ ಲೀನವಾದವು.

ಸಿದ್ಧನಂಜೇಶನ ‘ಗುರುರಾಜ ಚಾರಿತ್ರ’ (16ನೇ ಶತಮಾನ) ರಂಭಾಪುರಿ ಪೀಠದ ಕುಮಾರದೇವ ಶ್ರೀಶೈಲದ ಸಾರಂಗ ಮಠದಲ್ಲಿದ್ದ ಜೋಗಿಗಳನ್ನು ಕೊಂದು ಅಲ್ಲಿ ವೀರಮಾಹೇಶ್ವರರನ್ನು ಮೆರೆಸಿದನೆಂದು ಹೇಳುತ್ತದೆ.

ಶ್ರೀಶೈಲದ ಶಾಸನವೊಂದರಲ್ಲಿ (1585) ಐದು ಮಠಗಳ ಪ್ರಮುಖರು ಸಾರಂಗ ಮಠದ ಒಡೆಯರಾಗಲು ಯಾರೂ ಪಿತೂರಿ ಮಾಡಬಾರದೆಂದು ಎಚ್ಚರಿಸಿದ್ದಾರೆ. ಇವೆಲ್ಲಾ ಆ ಕಾಲದಲ್ಲಿ ನಡೆದ ಘರ್ಷಣೆಯನ್ನು ಸೂಚಿಸುತ್ತವೆ.

(‘ಚೌರಂಗಿ ಮಠ > ಸಾರಂಗ ಮಠ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ 7)

Share This Article
Leave a comment

Leave a Reply

Your email address will not be published. Required fields are marked *