ಶಿರಸಿ ತಾಲೂಕಿನ ಬನವಾಸಿಯಲ್ಲಿ ಸರಳ ನಿಜಾಚರಣೆ ಕಲ್ಯಾಣ ಮಹೋತ್ಸವ

ಸೊರಬ

ಶಿರಸಿಯ ಶರಣೆ ಅಕ್ಷತಾ ಸಾಲಿಮಠ ಮತ್ತು ಹಾನಗಲ್ ತಾಲೂಕಿನ ಸೋಮಸಾಗರದ ಶರಣ ವೀರೇಶ ಹಿರೇಮಠ ಅವರ ನಿಜಾಚರಣೆಯ ಕಲ್ಯಾಣ ಮಹೋತ್ಸವವು ಭಾನುವಾರ ನಡೆಯಿತು.

ಕಾರ್ಯಕ್ರಮ ಶಿರಸಿ ತಾಲೂಕಿನ ಬನವಾಸಿಯ ಅಲ್ಲಮಪ್ರಭು ಹೊಳೆಮಠದಲ್ಲಿ ಪೂಜ್ಯ ಚನ್ನಬಸವಾನಂದ ಮಹಸ್ವಾಮಿಗಳು, ಬಸವಧಾಮ ಆಶ್ರಮ ಶಿವಪುರ-ಉಳವಿ, ಇವರ ಸಾನಿಧ್ಯದಲ್ಲಿ ಜರುಗಿತು. ಪೂಜ್ಯ ನಾಗಭೂಷಣ ಮಹಾಸ್ವಾಮಿಗಳ ನೇತೃತ್ವ ವಹಿಸಿದ್ದರು.

ಪೂಜ್ಯ ನಾಗಭೂಷಣ ಮಹಾಸ್ವಾಮಿಗಳು ನೂತನ ವಧುವರರು ಹಾಗೂ ಆಗಮಿಸಿದ ಬಂಧು-ಮಿತ್ರರನ್ನು ಸ್ವಾಗತಿಸಿ ನಮ್ಮದಲ್ಲದ ಸಂಪ್ರದಾಯವನ್ನು ಮಾಡಬಾರದು. ಮೂಢನಂಬಿಕೆ-ಕಂದಾಚಾರದ ಆಚರಣೆಯ ಮೂಲಕ ವಿವಾಹವಾಗುವುದನ್ನು ಲಿಂಗಾಯತರು ಬಿಡಬೇಕು. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಲಿಂಗಾಯತರು ತಮ್ಮ ಕಲ್ಯಾಣ ಕಾರ್ಯ, ಗೃಹಪ್ರವೇಶ, ಹುಟ್ಟಬ್ಬ, ನಾಮಕರಣ ಮುಂತಾದ ಧಾರ್ಮಿಕ ವಿಧಿ-ವಿಧಾನಗಳನ್ನು ವಚನಾಧಾರಿತ ನಿಜಾಚಾರಣೆಯ ಮೂಲಕ ನೆರವೇರಿಸಬೇಕೆಂದು ಹೇಳಿದರು.

ನಂತರ ಕಲ್ಯಾಣ ಮಹೋತ್ಸವದ ವಿಧಿವಿಧಾನಗಳನ್ನು ವಚನಾಧಾರಿತವಾಗಿ ವಚನಕ್ರಿಯಾಮೂರ್ತಿಗಳಾದ ಶರಣೆಯರಾದ ಸುನೀತಾ ಚಂದ್ರಶೇಖರ ಹಾಗೂ ಶೃತಿ ಭದ್ರಾವತಿ ಅವರು ಶರಣ ಸಂಸ್ಕತಿಯ ಪ್ರಕಾರ ವಧು-ವರರಿಗೆ ವಿಭೂತಿ ಧಾರಣೆ ಮಾಡಿ, ಇಷ್ಟಲಿಂಗದೀಕ್ಷೆ ನೀಡಿದರು. ನಂತರ ಗುರುಬಸವಣ್ಣನವರ ಪ್ರಾರ್ಥನೆ, ವಚನ ಪಠಣ ಮಾಡಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು, ಪ್ರತಿಜ್ಞಾವಿಧಿ ಸ್ವೀಕಾರದ ನಂತರ ವಚನ ಮಾಂಗಲ್ಯಧಾರಣೆ ಆಗಿ, ನೂತನ ದಂಪತಿಗೆ ಪುಷ್ಪವೃಷ್ಟಿ ಮಾಡಲಾಯಿತು.

ಆಗಮಿಸಿದ ಬಂಧು-ಮಿತ್ರರು ನೂತನ ದಂಪತಿಗೆ ಶುಭ ಹಾರೈಸಿದರು. ಹಿರೇಮಠ ಮತ್ತು ಸಾಲಿಮಠ ಬಂಧುಗಳು-ಮಿತ್ರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಎಲ್ಲರಿಗೂ ಪ್ರಸಾದ ವಿನಿಯೋಗವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *