ಹುಬ್ಬಳ್ಳಿ
ಲಿಂಗಾಯತರ ಬಗ್ಗೆ ಮಾತನಾಡಿರುವ ಎಐಎಂಐಎಂ ಪಕ್ಷದ ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಅವರ ವಿಡಿಯೋ ತುಣುಕೊಂದು ವೈರಲ್ ಆಗಿದೆ.
ಲಿಂಗಾಯತರಿಗೆ ಸಲಾಂ, ಅವರಿಂದ ಕಲಿಯಿರಿ. ಕರ್ನಾಟಕ ರಾಜಕೀಯದಲ್ಲಿ ಲಿಂಗಾಯತರು ಬಹಳ ಬಲಿಷ್ಠರಾಗಿದ್ದಾರೆ, ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ, ಎಲ್ಲರನ್ನೂ ಹೆದರಿಸಿಕೊಂಡು ಇಟ್ಟಿದ್ದಾರೆ. ಅವರಲ್ಲಿ ಒಗ್ಗಟ್ಟಿದೆ, ನಿಮ್ಮಲ್ಲಿ ಒಗ್ಗಟ್ಟಿಲ್ಲ, ಎಂಬ ಅವರ ಮಾತು ಈಗ ಎಲ್ಲೆಡೆ ಹರಿದಾಡುತ್ತಿದ್ದೆ.
ಓವೈಸಿ ಈ ಭಾಷಣ ಮಾಡಿದ್ದು ಹುಬ್ಬಳ್ಳಿಯಲ್ಲಿ ಮೇ 8, 2023,ರಂದು. 2023 ರಾಜ್ಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮಾಡಿದ್ದ ಭಾಷಣವಿದು.
ಸಿದ್ದರಾಮಯ್ಯ ಅಹಿಂದದ ಹೆಸರಿನಲ್ಲಿ ಮುಖ್ಯಮಂತ್ರಿಗಳಾದರೂ ಮುಸುಲ್ಮಾನರಿಗೆ ಮತ್ತು ದಲಿತರಿಗೆ ಅದರಿಂದ ಏನೂ ಪ್ರಯೋಜನವಾಗಿಲ್ಲ. ಮುಸುಲ್ಮಾನರು ಮತ್ತು ದಲಿತರು ಲಿಂಗಾಯತರಂತೆ ಒಗ್ಗಟ್ಟಾಗಿ ನಿಂತು ಅಧಿಕಾರ ಕೇಳಬೇಕು ಎಂದು ಭಾಷಣ ಮಾಡಿದ್ದರು.
2023ರ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರನ್ನು ಬೆಂಬಲಿಸಲು ನಿರ್ಧರಿಸಿತು. ಅದರ ಸುಳಿವು ಸಿಕ್ಕಿ ಸಿದ್ದರಾಮಯ್ಯನವರ ಮೇಲೆ ಓವೈಸಿ ಆಕ್ರೋಶ ವ್ಯಕ್ತಪಡಿಸುವಂತಿದೆ ಈ ಭಾಷಣ.
ಓವೈಸಿ ಪೂರ್ಣ ಭಾಷಣ