ರೋಣ
ತಾಲ್ಲೂಕಿನ ಯಾವಗಲ್ಲ ಗ್ರಾಮದಲ್ಲಿ ಅಂಬೇಡ್ಕರ್ ಯುವ ತರುಣರಿಂದ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಜರುಗಿತು.
ಗುರುವಾರ ಸಂಜೆ ಮೇಣದಬತ್ತಿ ಬೆಳಕಿನೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದ ಗ್ರಾಮದ ಯುವಕರು 1818 ಜನೇವರಿ 01ರ ರೋಚಕ ದಂಗೆಯನ್ನು ಮೆಲುಕು ಹಾಕುತ್ತಲೆ ಅಂಬೇಡ್ಕರರು ಕಟ್ಟಿಕೊಟ್ಟ ಇತಿಹಾಸವನ್ನು ಉಳಿಸಲು ನಾವೆಲ್ಲರೂ ಸನ್ನದ್ದರಾಗೋಣ ಎಂದು ಪರಸ್ಪರ ಶಪಥ ಮಾಡಿಕೊಂಡರು.
ಸಾಮ್ರಾಜ್ಯ ವಿಸ್ತರಣೆಗಾಗಿ ಜಗತ್ತಿನಲ್ಲಿ ಅನೇಕ ಕದನಗಳು ನಡೆದು ಹೋಗಿವೆ, ಆದರೆ ಅಸಮಾನ ವ್ಯವಸ್ಥೆಯ ವಿರುದ್ಧ ಸಿಡಿದು ; ಆತ್ಮಗೌರವ, ಸ್ವಾಭಿಮಾನಕ್ಕಾಗಿ ನಡೆದ ಏಕೈಕ ಯುದ್ದ ಭೀಮಾ ಕೋರೆಗಾವದ್ದಾಗಿದೆ. ಈ ದಿಸೆಯಲ್ಲಿ ಕೋರೆಗಾವ್ ವೀರರ ಸಾಹಸ, ಧೈರ್ಯ, ಶಿಸ್ತು ಸಕಲ ಭಾರತೀಯರಿಗೆ ದೊಡ್ಡ ಮಾದರಿ. ಆದ್ದರಿಂದ ಬದುಕಿನ ಸವಾಲುಗಳನ್ನು ಎದುರಿಸಲು ನಾವು ಕೂಡಾ ಶಿಸ್ತಿನ ಸಿಪಾಯಿಗಳಾಗುತ್ತಲೇ ಮಹರ್ ಕಲಿಗಳ ಸ್ಮರಣೆಯನ್ನು ಪ್ರತಿ ವರ್ಷ ಮಾಡಬೇಕೆಂದು ಕವಿ ವೀರಪ್ಪ ತಾಳದವರ ಹೇಳಿದರು.

ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ಯುವ ಮುಖಂಡರಾದ ರವಿ ಕಾಳಿ, ಅಶೋಕ ತಾಳದವರ, ನಿಂಗರಾಜ ಚಲವಾದಿ, ವಸಂತ ಹೆಬಸೂರು, ರಾಜು ಕೊಳ್ಳಪ್ಪನವರ, ವಿಶ್ವ ಕೊಳ್ಳಪ್ಪನವರ, ಹನುಮಂತ ಜೆ.ಬಿ. ದೇವಪ್ಪ ಕೊಳ್ಳಪ್ಪನವರ, ಮಂಜು ಹೆಬಸೂರು, ಮುತ್ತು ಕುರ್ತಕೋಟಿ, ಪುಂಡಲೀಕ. ಕೆ.ಶರಣಪ್ಪ ಕೊಳ್ಳಪ್ಪನವರ, ಪ್ರಶಾಂತ ತಾಳದವರ ಮತ್ತೀತರರು ಸಂಘಟಿಸಿದ್ದರು.
ಗೌರವ ಉಪಸ್ಥಿತಿಯನ್ನು ಭರಮಪ್ಪ ಕೊಳ್ಳಪ್ಪನವರ, ನಿಂಗರಾಜ ಕಡಿ ವಹಿಸಿದ್ದರು. ವಿದ್ಯಾರ್ಥಿಗಳು ಗೌರವ ವಂದನೆ ಹೇಳಿದರು.
