ಬೆಳಗಾವಿ
ವಿವೇಕಾನಂದರ ವಾಣಿಗಳು ಮತ್ತು ಶರಣರ ವಚನಗಳು ತುಂಬಾ ನಿಕಟವಾಗಿವೆ ಇವು ಬದುಕಿಗೆ ಸನ್ಮಾರ್ಗ ತೊರಿಸುವ ದಾರಿ ದೀಪಗಳಾಗಿವೆ ಎಂದು ಸುನಿತಾ ನಂದೆಣ್ಣವರ ರವಿವಾರ ಹೇಳಿದರು
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ, ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಶರಣರ ವಚನಗಳು ಮತ್ತು ವಿವೇಕ ವಾಣಿ ಕುರಿತು ಉಪನ್ಯಾಸ ನೀಡಿದರು.
ಮೂರ್ತಿ ಪೂಜೆಯನ್ನು ವಿವೇಕಾನಂದರು ವಿರೋಧಿಸಿದರು ದೇಹವೇ ದೇವಾಲಯ ಎಂದರು ಶರಣರು.
ಜೀವಾತ್ಮನಲ್ಲಿ ಪರಮಾತ್ಮನ ಅಂಶ ಇರುವುದರಿಂದ ವಿಶ್ವದ ಜನರೆಲ್ಲ ಒಂದೇ ಎಂದು ವಿವೇಕಾನಂದರು ಸಾರಿದರೆ, ಬಸವಣ್ಣನವರು ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದನಿಸಯ್ಯಾ ಎಂದರು.
ಜ್ಞಾನವು ನಮ್ಮೊಳಗೆ ಇದೆ ಏಳಿ ಎದ್ದೆಳೆ ಜಾಗ್ರತರಾಗಿರಿ, ಸೋಮಾರಿಗಳಾಗದೆ ಕೆಲಸ ಮಾಡಿ ಸತ್ಯವನ್ನು ಎಂತಹ ಪರಿಸ್ಥಿತಿಯಲ್ಲಿಯೂ ಬಿಡಬೇಡಿ ಎಂದು ವಿವೇಕಾನಂದರು ಹೇಳಿದರೆ ಶರಣರು ಕಾಯಕ, ದಾಸೋಹ ತತ್ವವನ್ನು ಅನುಭವ ಮಂಟಪದಲ್ಲಿ ತಮ್ಮ ಜ್ಞಾನದ ಅನುಭಾವವನ್ನು ಹಂಚಿಕೊಳ್ಳುತ್ತಿದ್ದರು, ಎಂದು ಹೇಳಿದರು.
ಭಾರತವನ್ನು ಮತ್ತು ಭಾರತದ ಎಲ್ಲರನ್ನು ಪ್ರೀತಿಸಿ, ಗೌರವಿಸಿ ಎಂದು ವಿವೇಕಾನಂದರು ಹೇಳುತ್ತಿದ್ದರು. ನಮ್ಮ ನೆಲದ ಶ್ರೀಮಂತ ಸಂಸ್ಕೃತಿಯನ್ನು ನಾವು ಅಳವಡಿಸಿಕೂಳ್ಳಬೇಕು, ಇಂದು ಯುವ ಜನಾಂಗ ದಾರಿ ತಪ್ಪಿ ನಡೆಯುತ್ತಿದ್ದಾರೆ, ಅವರನ್ನು ತಿದ್ದಿ ಸರಿದಾರಿಗೆ ತರಬೇಕಾಗಿದೆ, ಅದು ನಮ್ಮೆಲ್ಲರ ಜವಾಬ್ದಾರಿಯು ಆಗಿದೆ, ಎಂದು ಹೇಳಿದರು.
ಆರಂಭದಲ್ಲಿ ಮಹಾದೇವಿ ಅರಳಿ ಅವರು ಪ್ರಾರ್ಥನೆ ನಡೆಸಿಕೊಟ್ಟರು, ಸುರೇಶ ನರಗುಂದ, ಆನಂದ ಕರ್ಕಿ, ವಿ. ಕೆ. ಪಾಟಿಲ , ಜಯಶ್ರೀ ಚಾವಲಗಿ, ಸುವರ್ಣ ಗುಡಸ, ಶೋಭಾ ಮುನವಳ್ಳಿ, ಬಸನಗೌಡ , ಬಸವರಾಜ ಬಿಜ್ಜರಗಿ ವಚನ ವಿಶ್ಲೇಷಣೆ ಮಾಡಿದರು.
ಅಧ್ಯಕ್ಷತೆಯನ್ನು ಈರಣ್ಣಾ ದೇಯನ್ನವರ ವಹಿಸಿದ್ದರು. ನಿರೂಪಣೆ ಸಂಗಮೇಶ ಅರಳಿ ಮಾಡಿದರು. ಸಚಿನ್ ಶಿವಣ್ಣವರ ಪ್ರಸಾದ ದಾಸೋಹ ಸೇವೆಗೈದರು. ಸಿದ್ದಪ್ಪ ಸಾರಾಪುರಿ, ಸೊಮಶೇಖರ ಕತ್ತಿ, ಬಸವರಾಜ ಮತ್ತಿಕಟ್ಟಿ, ಬಸವರಾಜ ಕರಡಿಮಠ, ಮಹದೇವ ಕೆ೦ಪಿಗೌಡರ, ವಿರುಪಾಕ್ಷ , ಎಸ್.ಎಸ್. ಪೂಜಾರ, ಗುರುಸಿದ್ದಪ್ಪಾ, ಅನೀಲ ರಘಶೆಟ್ಟಿ, ಸುಜಾತಾ ಮತ್ತಿಕಟ್ಟಿ, ಶ್ರೀದೇವಿ ನರಗುಂದ, ಶಾಂತಾ ಕ೦ಬಿ, ಮಹಾದೇವಿ ಘಾಟಿ, ನ೦ದಾ ಬಗಲಿ, ಮಹಾಂತೇಶ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಸದಾಶಿವ ದೇವರಮನಿ, ಶಾಂತಾ ತಿಗಡಿ, ಇತರರು ಉಪಸ್ಥಿತರಿದ್ದರು.