ನಾಡಿನ ಶ್ರೀಮಂತ ಮಠಗಳಲ್ಲಿ ಒಂದಾದ ನಿಡಸೋಸಿಯ ಮಠವು ಅಂದಾಜಿನ ಪ್ರಕಾರ ₹300 ಕೋಟಿ ಆಸ್ತಿ ಹೊಂದಿದೆ.
ಹುಕ್ಕೇರಿ
ಹುಕ್ಕೇರಿ ತಾಲೂಕಿನ ನಿಡಸೋಸಿಯ ದುರುದುಂಡೀಶ್ವರ ಮಠದ ಪಟ್ಟಾಧಿಕಾರಕ್ಕಾಗಿ ಮಠದ ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ನಾಡಿನ ಶ್ರೀಮಂತ ಮಠಗಳಲ್ಲಿ ಒಂದಾದ ನಿಡಸೋಸಿಯ ಮಠವು ಅಂದಾಜಿನ ಪ್ರಕಾರ ₹300 ಕೋಟಿ ಆಸ್ತಿ ಹೊಂದಿದೆ.
ಉತ್ತರಾಧಿಕಾರಿಯಾಗಿ ನೇಮಕವಾಗಿ ಎರಡು ವರ್ಷಗಳಾದರೂ ಮಠದ ಯಾವುದೇ ಹಕ್ಕು ನೀಡಿಲ್ಲ ಎನ್ನುವುದು ನಿಜಲಿಂಗೇಶ್ವರ ಶ್ರೀಗಳ ಆರೋಪ. ಈ ಹಿಂದೆ ಇದೇ ವಿಷಯಕ್ಕೆ ಎರಡು ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದರು ಎಂದು ವರದಿಯಾಗಿದೆ.
ಈ ವರ್ಷ ಬಸವ ಜಯಂತಿ ಬಳಿಕ ಅಧಿಕಾರ ಹಸ್ತಾಂತರದ ಮಾತಾಗಿತ್ತು. ಶ್ರೀಗಳು ಮಾತಿಗೆ ತಪ್ಪಿದ್ದರಿಂದ ಉಪವಾಸ ಕುಳಿತಿದ್ದೇನೆ ಎಂದು ನಿಜಲಿಂಗೇಶ್ವರ ಶ್ರೀ ಮಾಧ್ಯಮಗಳಿಗೆ ಹೇಳಿದ್ದಾರೆ.
ವಿವಾದದ ಬಗ್ಗೆ ಮಾತನಾಡುತ್ತ ಹಿರಿಯ ಶ್ರೀಗಳಾದ ಶಿವಲಿಂಗೇಶ್ವರ ಸ್ವಾಮಿಗಳು 300 ವರ್ಷಗಳ ದಾಸೋಹ ಪರಂಪರೆಯಿರುವ ನಿಡಸೋಸಿ ಸಿದ್ದಸಂಸ್ಥಾನ ಮಠ ಸರ್ವಧರ್ಮಿಯರ ಮಠವಾಗಿದೆ. ಇಲ್ಲಿ ಪೀಠದಲ್ಲಿ ಕೂರುವವರು ಜನರೊಳಗೆ ಬಂದು ಕೆಲಸ ಮಾಡಬೇಕು. ಆದರೆ ಕಿರಿಯರು ಜನರ ಜೊತೆ ಬೆರಿತಾ ಇಲ್ಲ. ನಮ್ಮನ್ನು ಕಿರಿಯ ಶ್ರೀಗಳು ವಿರೋಧಿಸಲು ಶುರು ಮಾಡಿದ್ದಾಗಿಂದ ನಾವು ತಟಸ್ಥವಾಗಿದ್ದೇವೆ ಎಂದಿದ್ದಾರೆ.
ಹಿರಿಯ ಶ್ರೀಗಳಿಗೆ ವಯಸ್ಸಾದಾಗ ಕಿರಿಯ ಸ್ವಾಮಿಗಳನ್ನು ಹುಡುಕಿ ಪಟ್ಟ ಕಟ್ಟಲು ನಿರ್ಧರಿಸಿದ್ದರು. ಆಗ ನೇಮಕವಾದ ಆಯ್ಕೆ ಸಮಿತಿಯು ರಾಮಕೃಷ್ಣ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿ ಏಕಗವ್ಯಾನಂದ ಅವರನ್ನು ಆಯ್ಕೆ ಮಾಡಿತು.
2023ರಲ್ಲಿ ಅವರಿಗೆ ಗದಗಿನ ಸಿದ್ದರಾಮ ಸ್ವಾಮೀಜಿಗಳ ಸಮ್ಮುಖದಲ್ಲಿ ಶಿವಮೊಗ್ಗದ ಬಿಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ನೀಡಲಾಗಿತ್ತು. ಸ್ವಾಮಿ ಏಕಗವ್ಯಾನಂದರ ಹೆಸರು ನಿಜಲಿಂಗೇಶ್ವರ ಸ್ವಾಮೀಜಿ ಎಂದು ನಾಮಕರಣವಾಯಿತು.
ಅದೇ ವರ್ಷ ಸಂಕೇಶ್ವರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅವರ ‘ಉತ್ತರಾಧಿಕಾರಿ ಪತ್ರ’ವೂ ನೋಂದಣಿ ಮಾಡಲಾಗಿತ್ತು.
ರಾಮಕೃಷ್ಣ ಆಶ್ರಮದಲ್ಲಿ ಬೆಳೆದ ಒಬ್ಬ ವಟುವನ್ನುಲಿಂಗಾಯಿತ ಮಠಕ್ಕೆ ಮಾಡುವುದು ಎಷ್ಟು ಸೂಕ್ತ? ಲಿಂಗಾಯಿತ ಮಠಕ್ಕೆ ಆಗುವವರು ಎಷ್ಟು ದಿನ ಎಂಟನೇ ವಯಸ್ಸಿಗೆ ಪಡೆದು ಸಾಧನೆಯನ್ನು ಮುಂದುವರಿಸಿದವರಾಗಿರಬೇಕು . ಬಸವಾದಿ ಶರಣರ ಬಗ್ಗೆ ಭಕ್ತಿ ಶಿವಯೋಗದ ಬಗ್ಗೆ ಕುತೂಹಲ ಆಸಕ್ತಿ ಅನುಷ್ಠಾನ ಕೈಗೊಂಡಿರಬೇಕು . ಬಸವಾದಿ ಶರಣರ ವಚನ ಸಾಹಿತ್ಯ ಮತ್ತು ತತ್ವ ಪ್ರಚಾರಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರಬೇಕು . ಗುರುಗಳ ಆಶ್ರಯದಲ್ಲಿ ಭಕ್ತವೃಂದದ
ಜೊತೆಗೆ ಬೆರೆತು ಮಠದ ಮತ್ತು ಭಕ್ತರ ಕಲ್ಯಾಣಕ್ಕಾಗಿ ಕಾರ್ಯಗಳನ್ನು ಕೈಗೊಂಡಿರುವವರಾಗಿರಬೇಕು . ಇಷ್ಟಲಿಂಗ ದೀಕ್ಷೆ ಪಡೆದು ಎರಡು ವರ್ಷಗಳು ಆಗಿಲ್ಲ ಅವರಿಗೆ ಉತ್ತರಧಿಕಾರಿಯನ್ನಾಗಿ ಸಮಿತಿಯು ನೇಮಕ ಮಾಡಿದ್ದೆ ತಪ್ಪು .
ನೀಡಸೂಸಿ ಮಠಕ್ಕೆ ರಾಮಕೃಷ್ಣ ಮಠದಲ್ಲಿ ತಯಾರಾದ ವ್ಯಕ್ತಿಯನ್ನು ಸ್ವಾಮೀಜಿಯಾಗಿ ನೇಮಕ ಮಾಡಿದ್ದೆ ತಪ್ಪು. ಈಗಲೂ ಕಾಲ ಮಿಂಚಿಲ್ಲ ಹಿಂದೆ ಆದ ತಪ್ಪನ್ನು ಅವರನ್ನು ತೆಗೆಯುವ ಮೂಲಕ ಸರಿಪಡಿಸಬಹುದು..ಕಿರಿಯ ಸ್ವಾಮೀಜಿಗೆ ಅಧಿಕಾರ ಕೊಡಬಾರದು.